ಸೋಮ ರೆಡ್ಡಿಗೆ ಸಿಕ್ತು ಜಾಮೀನು; ಸಂಜೆ ಬಿಡುಗಡೆ

ಹೈಕೋರ್ಟಿನಲ್ಲಿ ಇಂದು ವಿಚಾರಣೆ ನಡೆಸಿದ ಸಮುದ್ರಾಲ ಗೋವಿಂದರಾಜು ನ್ಯಾಯಪೀಠ ಸೋಮಶೇಖರ ರೆಡ್ಡಿ ವಿರುದ್ಧ ದಾಖಲಾಗಿದ್ದ ಎರಡನೆಯ ಆರೋಪಪಟ್ಟಿಯ ವಿಚಾರಣೆ ನಡೆಸಿದ ಬಳಿಕ ಈ ಜಾಮೀನು ಮಂಜೂರು ಮಾಡಿದೆ. ಆ. 6ರಂದು ವಿಚಾರಣೆಗೆಂದು ಕರೆಸಿಕೊಂಡ ACB ಅಧಿಕಾರಿಗಳು, ಸೋಮಶೇಖರ ರೆಡ್ಡಿಯನ್ನು ಬಂಧಿಸಿದ್ದರು.
ಅಕ್ರಮ ಗಣಿ ಪ್ರಕರಣದಲ್ಲಿ ಚಂಚಲಗೂಡ ಜೈಲುವಾಸಿಯಾಗಿರುವ ಜನಾರ್ದನ ರೆಡ್ಡಿಗೆ ಜಾಮೀನು ಖರೀದಿಸುವ ಪ್ರಕರಣದಲ್ಲಿ ನ್ಯಾ. ನಾಗಮಾರುತಿ ಶರ್ಮಾ ಅವರು ಪ್ರಮುಖ ಆರೋಪಿಯಾಗಿದ್ದಾರೆ. ಪ್ರಕರಣದಲ್ಲಿ ಲಂಚ ಸ್ವೀಕರಿಸಿದ ಆರೋಪಹೊತ್ತಿರುವ ನ್ಯಾ. ಶರ್ಮಾ ಅವರ ಬಾಯಿಮಾತಿನ ಹೇಳಿಕೆಯನ್ನಾಧರಿಸಿ, KMF ಅಧ್ಯಕ್ಷರೂ ಆಗಿರುವ ಸೋಮಶೇಖರ ರೆಡ್ಡಿ ಆಂಧ್ರದ ಭ್ರಷ್ಟಾಚಾರ ನಿಗ್ರಹ ದಳವು (ACB) ಆರೋಪಪಟ್ಟಿಗಳನ್ನು ದಾಖಲಿಸಿತ್ತು. ಆದರೆ ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟ ಜಡ್ಜ್ ಗೋವಿಂದರಾಜು ಸೋಮಶೇಖರ ರೆಡ್ಡಿಗೆ ಜಾಮೀನು ದಯಪಾಲಿಸಿದ್ದಾರೆ.
ಕಳೆದ ತಿಂಗಳು ಇದೇ ಪ್ರಕರಣದಲ್ಲಿ ಮೊದಲ FIRಗೆ ಸಂಬಂಧಿಸಿದಂತೆ ಆಂಧ್ರ ಹೈಕೋರ್ಟ್ ಇಂದು ಷರತ್ತುಬದ್ಧ ಜಾಮೀನು ನೀಡಿತ್ತು. ಕುತೂಹಲದ ಸಂಗತಿಯೆಂದರೆ ಕಂಪ್ಲಿ ಶಾಸಕ ಸುರೇಶ್ ಬಾಬುಗೆ ಈ ಎರಡನೆಯ FIRನಲ್ಲೂ ಜಾಮೀನು ಮಂಜೂರಾಗಿಲ್ಲ.












Click it and Unblock the Notifications