ಗಾಂಧಿ ಜಯಂತಿ ದಿನ 'ಹಿಸ್ ಎಕ್ಸಲೆನ್ಸಿ' ಥೇಮ್ಸ್ ನದಿಗೆ

ಏನಪಾ ಅಂದರೆ ರಾಷ್ಟ್ರಪತಿಗಳ ಹೆಸರಿನ ಮೊದಲು ಹಲವು ದಶಕಗಳಿಂದ ಬಳಸುತ್ತಾ ಬಂದಿರುವ 'ಗೌರವಾನ್ವಿತ', 'ಘನವೆತ್ತ' ಮುಂತಾದ ಗೌರವ ಸೂಚಕ ಶಿಷ್ಟಾಚಾರದ ಪದಗಳನ್ನು ಬಳಸದಂತೆ ಪಶ್ಚಿಮ ಬಂಗಾಳದ ದಾ ಆದೇಶಿಸಿದ್ದಾರೆ. ಪ್ರಣಬ್ ಮುಖರ್ಜಿ ಅವರ ಈ ನಿರ್ಧಾರಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
ದಾಸ್ಯ ಮನೋಭಾವದ, ಕ್ಲೀಷೆ ಎನಿಸಿರುವ, ಅರ್ಥರಹಿತ ಈ 'ಗೌರವಾರ್ಥ' ಪದಪುಂಜಗಳಿಗೆ ದೇಶದ ನಾನಾ ರಾಜ್ಯಪಾಲರೂ ಗುಡ್ ಬೈ ಹೇಳುತ್ತಾರಾ? ಬಂಗಾಳದ ದಾ ಹಾಕಿಕೊಟ್ಟಿರುವ ಮೇಲ್ಪಂಕ್ತಿಯನ್ನು ತಾವೂ ಅನುಸರಿಸುತ್ತಾರಾ? ಎಂಬುದು ಕುತೂಹಲಕಾರಿಯಾಗಿದೆ. ಹೌದೂ, ಇಂತಹ ನಿರರ್ಥಕ ಡೆಕೋರೇಶನ್ ಗಳ ಬಗ್ಗೆ 'ದಟ್ಸ್ ಕನ್ನಡ' ಓದುಗರಾಗಿ ನೀವೇನನ್ನುತ್ತೀರಿ, ದಯವಿಟ್ಟು ತಿಳಿಸಿ.
ಸಂದರ್ಭ ಸಹಿತ ವಿವರಿಸಿ: ಇಂದು ಇಲ್ಲಿಯ ನಾಗೇಂದ್ರ ಝಾ ಕ್ರೀಡಾಂಗಣದಲ್ಲಿ ನಡೆಯಲಿರುವ ಬಿಹಾರದ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯದ (LNMU) ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರಣವ್ ಭಾಗವಹಿಸಲಿದ್ದಾರೆ. ಆ ಸಂದರ್ಭದಲ್ಲಿ ರಾಷ್ಟ್ರಪತಿಯವರನ್ನು ಈ ವಿಶೇಷಣಗಳಿಂದ ಸಂಬೋಧಿಸದಂತೆ ರಾಷ್ಟ್ರಪತಿ ಭವನವು ವಿಶ್ವವಿದ್ಯಾಲಯ ಆಡಳಿತಕ್ಕೆ ಪತ್ರ ಬರೆದಿದೆ.
ರಾಷ್ಟ್ರಪತಿಯವರ ಈ ಸೂಚನೆಯನ್ನು ಶಿರಸಾವಹಿಸಿ ಪಾಲಿಸಿರುವ ವಿಶ್ವವಿದ್ಯಾಲಯವು ಘಟಿಕೋತ್ಸವದ ಆಮಂತ್ರಣ ಪತ್ರಿಕೆಗಳನ್ನು ಮರು ಮುದ್ರಿಸಿ, ಪ್ರಣಬ್ ದಾ ಹೆಸರಿನ ಮುಂದೆ ಇದ್ದ His Excellency, Honourableಗಳನ್ನು ಅಳಿಸಿ ಹಾಕಿದೆ.
ಗಮನಾರ್ಹವೆಂದರೆ ಬಿಹಾರದ ರಾಜ್ಯಪಾಲರಾದ ದೇವಾನಂದ ಕೊನ್ವಾರ್ ಅವರು ರಾಷ್ಟ್ರಪತಿಗಳೇ ಅವುಗಳನ್ನು ಬೇಡವೆಂದ ಮೇಲೆ ಅವುಗಳ ಸಾಂಗತ್ಯ ನನಗೇಕೆ ಎಂದು ರಾಜ್ಯಪಾಲ ದೇವಾನಂದರೂ ಆ ಪದಪುಂಜವನ್ನು ಅಳಿಸಿ ಹಾಕಲು ಆದೇಶಿಸಿದ್ದಾರೆ.












Click it and Unblock the Notifications