Get Updates
Get notified of breaking news, exclusive insights, and must-see stories!

ಮತ್ತೆ ಮತಾಂತರ ಭೂತ,ಪ್ರತಿಭಟನೆಗೆ ಬೆದರಿ ಪಾದ್ರಿ ಪರಾರಿ

Villagers protest against conversion in Arasikere
ಅರಸೀಕೆರೆ, ಸೆ 22: ಕ್ರೈಸ್ತ ಮಿಷನರಿಗಳ ವ್ಯವಸ್ಥಿತ ಮತಾಂತರ ಜಾಲ ಅರಸೀಕೆರೆ ಬಳಿ ಪತ್ತೆಯಾಗಿದೆ. ಗ್ರಾಮಸ್ಥರು ತೀವ್ರ ಪ್ರತಿಭಟಿಸಿದ್ದರಿಂದ ಇಬ್ಬರು ಕ್ರೈಸ್ತ ಪಾದ್ರಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ದಲಿತ ಮತ್ತು ಬುಡಕಟ್ಟು ಜನಾಂಗದ ಅಮಾಯಕರಿಗೆ ಆಮಿಷವೊಡ್ಡಿ ಕ್ರೈಸ್ತ ಧರ್ಮದ ಮತಾಂತರಕ್ಕೆ ಪ್ರಚೋದಿಸುತ್ತಿದ್ದ ಸಮಯದಲ್ಲಿ ಗ್ರಾಮಸ್ಥರು ಇವರನ್ನು ಪತ್ತೆ ಹಚ್ಚಿದ್ದಾರೆ.

ಹಾಸನ ಜಿಲ್ಲೆ ಬೇಳೂರು, ಗಂಡಸಿ, ಜಾವಗಲ್, ಬಾಣಾವರ, ಹಳೇಬೀಡು ಪ್ರದೇಶಗಳಿಂದ ಅರಸೀಕೆರೆ ಬಳಿಯ ಅಣ್ಣನಾಯಕನ ಹಳ್ಳಿಗೆ ಬಂದಿದ್ದ ಸಾವಿರಾರು ಮಂದಿ ಬುಡಕಟ್ಟು ಜನಾಂಗದವರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವುದನ್ನು ಗ್ರಾಮಸ್ಥರು ತೀವ್ರವಾಗಿ ವಿರೋಧಿಸಿ ತಡೆದಿದ್ದಾರೆ.

ಗ್ರಾಮಸ್ಥರು ನೀಡಿದ ದೂರಿನನ್ವಯ ಪಾದ್ರಿಗಳು ಬಳಸಿದರೆನ್ನಲಾದ ಮಾರುತಿ ವ್ಯಾನ್, ಟ್ರ್ಯಾಕ್ಟರ್ ಮತ್ತು ಶಾಮಿಯಾನವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಅಣ್ಣನಾಯಕನ ಹಳ್ಳಿಯ ಜಮೀನುವೊಂದರಲ್ಲಿ ಮತಾಂತರಕ್ಕಾಗಿ ಎರಡು ದಿನಗಳ ಹಿಂದೆಯೇ ಪಾದ್ರಿಗಳು ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ದಲಿತ ಮತ್ತು ಬುಡಕಟ್ಟು ಜನಾಂಗದವರನ್ನು ಕರೆತರಲಾಗಿತ್ತು.

ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಬಟ್ಟೆ, ಊಟ ಮತ್ತು ಐದು ಸಾವಿರ ರೂಪಾಯಿ ನೀಡುವುದಾಗಿ ಕ್ರೈಸ್ತ ಮಿಷನರಿಗಳು ಆಮಿಷವೊಡ್ಡಿದರು. ಆದರೆ ಯಾರಿಗೂ ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಳ್ಳಬೇಕೆಂದು ತಿಳಿದಿರಲಿಲ್ಲ ಎನ್ನಲಾಗಿದೆ.

ಕಾರ್ಯಕ್ರಮಕ್ಕೆ ಬಂದಿದ್ದವರಿಗೆ ಬಟ್ಟೆ, ಊಟ ನೀಡಿ ಬೆಂಗಳೂರು ಮತ್ತು ಮೈಸೂರಿನಿಂದ ಬಂದ ಪಾದ್ರಿಗಳು ಕ್ರೈಸ್ತ ಧರ್ಮದ ಬಗ್ಗೆ ಭೋದನೆ ಆರಂಭಿಸಿದ್ದಾರೆ.

ಆ ಸಮಯದಲ್ಲಿ ಕೆಲ ಮುಖಂಡರ ಜೊತೆ ಕಾರ್ಯಕ್ರಮ ನಡೆಯುತ್ತಿದ್ದಲ್ಲಿಗೆ ಬಂದ ಗ್ರಾಮಸ್ಥರು ಮತಾಂತರಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.

ಗ್ರಾಮಸ್ಥರ ತೀವ್ರ ವಿರೋಧದ ನಡುವೆ ಪಾದ್ರಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+