ದಿ ಹಿಂದೂ ಪತ್ರಿಕೆಯ ಪಿತಾಮಹ ಜಿ ಕಸ್ತೂರಿ ವಿಧಿವಶ
![G Kasturi (1924-2012) [The Hindu photo] G Kasturi (1924-2012) [The Hindu photo]](https://imagesvs.oneindia.com/kn/img/2012/09/21-gopalan-kasturi.jpg)
ಪತ್ರಿಕೆಯನ್ನು ಬೆಳೆಸುವಲ್ಲಿ ಮತ್ತು ಆಧುನೀಕರಣಗೊಳಿಸುವಲ್ಲಿ ಅಪಾರವಾಗಿ ಶ್ರಮಿಸಿದ ಕಸ್ತೂರಿ ಅವರು ಹೆಂಡತಿ ಕಮಲಾ ಕಸ್ತೂರಿ, ಮಕ್ಕಳಾದ ಕೆ. ಬಾಲಾಜಿ, ಕೆ. ವೇಣುಗೋಪಾಲ್, ಮಗಳು ಲಕ್ಷ್ಮೀ ಶ್ರೀನಾಥ್, ಐವರು ಮೊಮ್ಮಕ್ಕಳು ಮತ್ತುತ ಇಬ್ಬರು ಮರಿಮೊಮ್ಮಕ್ಕಳನ್ನು ಜಿ ಕಸ್ತೂರಿ ಅವರು ಅಗಲಿದ್ದಾರೆ.
134 ವರ್ಷಗಳ ಇತಿಹಾಸ ಹೊಂದಿರುವ ದಿ ಹಿಂದೂ ಪತ್ರಿಕೆಯನ್ನು 1965ರಿಂದ 1991ರವರೆಗೆ 25 ವರ್ಷಗಳ ಕಾಲ ಅವರು ಸಂಪಾದಕರಾಗಿ ಪತ್ರಿಕೆಯಲ್ಲಿ ಜೀವ ತುಂಬಿದ್ದರು. ಪತ್ರಿಕೆ ಸೆ.20ರಂದು ತನ್ನ 134ನೇ ಹುಟ್ಟುಹಬ್ಬ ಆಚರಿಸಿದ ಮರುದಿನವೇ ಪತ್ರಿಕೆಯನ್ನು ಆಗಾಧ ಪ್ರಮಾಣದಲ್ಲಿ ಬೆಳೆಸಿದ ಕಸ್ತೂರಿ ಅವರು ಅಸುನೀಗಿದ್ದಾರೆ. ಕಸ್ತೂರಿ ಅವರು ಕಸ್ತೂರಿ ಅಂಡ್ ಸನ್ಸ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮತ್ತು ದಿ ಹಿಂದೂ ಗ್ರೂಪ್ ಆಫ್ ಪಬ್ಲಿಕೇಷನ್ಸ್ನ ಮಾಲೀಕರಾಗಿಯೂ ಸೇವೆ ಸಲ್ಲಿಸಿದ್ದರು.
ಸಂಪಾದಕರಾಗಿ ನಿವೃತ್ತಿ ಹೊಂದಿದ ನಂತರವೂ ಕಸ್ತೂರಿ ಅವರು ತಮ್ಮ ಕೊನೆಯ ಗಳಿಗೆಯವರೆಗೆ ಅತ್ಯಂತ ಕ್ರಿಯಾಶೀಲರಾಗಿದ್ದರು. 1924ರ ಡಿಸೆಂಬರ್ 17ರಂದು ಚೆನ್ನೈನಲ್ಲಿ ಜನಿಸಿದ ಕಸ್ತೂರಿ ಅವರು, ಚೆನ್ನೈನಲ್ಲಿಯೇ ಶಾಲೆ ಮತ್ತು ಕಾಲೇಜು ವಿದ್ಯಾಭ್ಯಾಸ ಮುಗಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಎ ಪಡೆದಬಳಿಕ 1944ರಲ್ಲಿ ಪತ್ರಿಕೆಯನ್ನು ಸೇರಿದ್ದರು. ಅವರ ತಂದೆ ಕಸ್ತೂರಿ ಶ್ರೀನಿವಾಸನ್ ಅವರು ಕೂಡ ದಿ ಹಿಂದೂ ಪತ್ರಿಯಲ್ಲಿ 1934ರಿಂದ 1959ರವರೆಗೆ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. (Photo courtesy : V. Ganesan)
ಜಗದೀಶ್ ಶೆಟ್ಟರ್ ಸಂತಾಪ : ಚೆನ್ನೈ ಮೂಲದ ಆಂಗ್ಲ ದಿನಪತ್ರಿಕೆ ದಿ ಹಿಂದೂನ ಮಾಜಿ ಸಂಪಾದಕ ಜಿ. ಕಸ್ತೂರಿ ಅವರ ಅಗಲಿಕೆಗೆ ಕರ್ನಾಟಕದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಯಾವುದೇ ಇಸಂಗಳಿಗೆ ಕಸ್ತೂರಿಯವರು ಬಲಿಯಾಗದೆ, ಅತ್ಯಂತ ಪ್ರಾಮಾಣಿಕತೆಯಿಂದ ಮತ್ತು ಅತ್ಯಂತ ನಿಷ್ಪಕ್ಷಪಾತದಿಂದ ಅವರು ಪತ್ರಿಕೆಯನ್ನು ನಡೆಸಿ ಇಂದಿನ ಪತ್ರಕರ್ತರಿಗೆ ಮಾದರಿಯಾಗಿದ್ದರು. ಪತ್ರಿಕಾಧರ್ಮ ಮೇಲೆತ್ತಿ ಹಿಡಿದಿರುವವರಲ್ಲಿ ಕಸ್ತೂರಿ ಅವರು ಅಗ್ರಗಣ್ಯರು ಎಂದು ಶೆಟ್ಟರ್ ಅವರು ಕಸ್ತೂರಿಯವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications