ವೈಷ್ಣೋದೇವಿ ಯಾತ್ರೆಗೆ ಹೊರಟಿದ್ದವರ ಬರ್ಬರ ಹತ್ಯೆ

ಕುಟುಂಬದೊಂದಿಗೆ ವೈಷ್ಣೋದೇವಿ ಯಾತ್ರೆಗೆ ತೆರಳ ಬೇಕಿದ್ದ ಪೊಜಾರಿಯು ಆ ಮನೆಗೆ ಬಂದಾಗ ಮೂವರೂ ಹತ್ಯೆಗೀಡಾಗಿರುವುದು ಬೆಳಕಿಗೆ ಬಂದಿದೆ. ಉತ್ತರ ದೆಹಲಿಯ ರೋಹಿಣಿ ಅಪಾರ್ಟ್ ಮೆಂಟಿನಲ್ಲಿ ಇಂದು ಶುಕ್ರವಾರ ಮುಂಜಾನೆ ಈ ದುರ್ಘಟನೆ ನಡೆದಿದೆ. ಯೋಗೇಂದ್ರ ಸಿಂಗ್ ಎಂಬುವವರ ಕುಟುಂಬವೇ ಹೀಗೆ ಹತ್ಯೆಗೀಡಾದ ದುರ್ದೈವಿ ಕುಟುಂಬ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯೋಗೇಂದ್ರ ಸಿಂಗ್ ಅವರ ದೇಹ ಮೊದಲ ಮಹಡಿಯಲ್ಲಿ ಪತ್ತೆಯಾಗಿದ್ದರೆ ಅವರ ಪತ್ನಿ ಮತ್ತು ಪುತ್ರಿಯ ದೇಹ ನೆಲಮಹಡಿಯಲ್ಲಿತ್ತು. ಮೂವರ ಕತ್ತುಗಳನ್ನು ಸೀಳಿ, ಹತ್ಯೆ ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಕೈಗೊಂಡಿದ್ದಾರೆ. ವೈಯಕ್ತಿಕ ದ್ವೇಷದಿಂದ ಈ ಕೊಲೆಗಳಾಗಿರಬಹುದು ಎಂದು ಶಂಕಿಸಲಾಗಿದೆ.












Click it and Unblock the Notifications