ಬಿಬಿಎಂಪಿ ಕಸ ವಿಂಗಡನೆಗೆ ಕೈಹಾಕಿ ಪುಣ್ಯ ಕಟ್ಟಿಕೊಳ್ಳಿ!
ಬೆಂಗಳೂರು, ಸೆ.17: ಇತ್ತೀಚೆಗೆ ತನ್ನನ್ನು ಇನ್ನಿಲ್ಲದಂತೆ ಕಾಡಿ, ಕಾಲಕಸವಾಗಿಸಿದ್ದ ಕಸಕ್ಕೆ ಮುಕ್ತಿ ನೀಡಲು ಬೆಂಗಳೂರು ಮಹಾನಗರ ಪಾಲಿಕೆ (BBMP) ಬಯಸಿದೆ. ಮನೆಯಲ್ಲಿಯೇ ಕಸ ವಿಂಗಡಿಸುವ ಸಂಬಂಧ BBMP ಅಧಿಸೂಚನೆ ಹೊರಡಿಸಿದೆ.
ಆದರೆ ತಕ್ಷಣಕ್ಕೆ ದಂಡದ ಭೀತಿ ಹುಟ್ಟಿಸಿಲ್ಲವಾದರೂ ಅ.1 ರಿಂದ ಕಸ ವಿಂಗಡಿಸುವ ನಿಯಮ ಕಡ್ಡಾಯವಾಗಿ ಜಾರಿಗೆ ತಂದಿದೆ. ಈ ಸಂಬಂಧ ರಾಜಧಾನಿಯ ಜನರಲ್ಲಿ ಜಾಗೃತಿ ಮೂಡಿಸಲು ದಿನಪತ್ರಿಕೆಗಳಲ್ಲಿ ಇಂದು ಪುಟಗಟ್ಟಳೆ 'ಸಾರ್ವಜನಿಕ ಪ್ರಕಟಣೆ' ಜಾಹೀರಾತು ನೀಡಿದೆ.

ನಿಯಮದ ನೀತಿಪಾಠ ? ಮನೆಯಲ್ಲಿ ಹಸಿ ಮತ್ತು ಒಣ ಕಸ ವಿಂಗಡಿಸಬೇಕು. ಪಾಲಿಕೆಯ ಪೌರ ಕಾರ್ಮಿಕರಿಗೆ ಕಸವನ್ನು ನೇರವಾಗಿ ಹಸ್ತಾಂತರಿಸಬೇಕು. ಮನೆ ಮುಂದೆ ಕವರುಗಳಲ್ಲಿ, ಡಸ್ಟ್ ಬಿನ್ ಗಳಲ್ಲಿ ಇಡುವಂತಿಲ್ಲ.
ಪ್ಲಾಸ್ಟಿಕ್ ಬೇರ್ಪಡಿಸಿ ಕಸ ನೀಡಬೇಕು. ಪ್ರತಿ ನಿತ್ಯ ಹಸಿ ಕಸವನ್ನು ಮತ್ತು ವಾರಕ್ಕೊಮ್ಮೆ ಒಣ ಕಸವನ್ನು ಸಂಗ್ರಹಿಸಲಾಗುವುದು. ಖಾಲಿ ನಿವೇಶನಗಳಲ್ಲಿ ಕಸ ಸುರಿಯುವಂತಿಲ್ಲ. ಈ ನಿಟ್ಟಿನಲ್ಲಿ ಬೆಂಗಳೂರಿಗರು ಬಿಬಿಎಂಪಿ ಕಸ ವಿಂಗಡನೆಗೆ ಕೈಹಾಕಿ ಪುಣ್ಯ ಕಟ್ಟಿಕೊಳ್ಳಲಿ ಎಂದು ಆಶಿಸಲಾಗಿದೆ.
ಪ್ರಜ್ಞಾವಂತ ನಾಗರಿಕನನ್ನು ಎಚ್ಚರಿಸಿರುವ ಪಾಲಿಕೆಯು ಕಸ ವಿಂಡಗಣೆ ಬಗ್ಗೆ 'ಸಾರ್ವಜನಿಕ ಪ್ರಕಟಣೆ' ಜಾಹೀರಾತಿನಲ್ಲಿ ಸಾದ್ಯಂತವಾಗಿ ವಿವರಿಸಿದೆ. ಒಮ್ಮೆ ಜಾಹೀರಾತನ್ನು ನೋಡಿ. ತಪ್ಪದೆ ಅಲ್ಲಿರುವ ನಿಯಮಗಳನ್ನು ಪಾಲಿಸಿ.
ಕಿವಿಯ ಮೇಲೆ ಲಾಲ್ ಬಾಗ್ : ಆದರೆ ಕಸ ಸಂಗ್ರಹಿಸುವವರಿಗೆ ತಿಂಗಳಿಗೆ 30-40 ನೀಡುವ ಅಲಿಖಿತ ನಿಯಮ ಜಾರಿಯಲ್ಲಿರುತ್ತದಾ? ಎಂದು BBMPಯನ್ನು ಕೇಳಿದರೆ, ಹೌದಾ? ನೀವು ಕಸ ಎತ್ತೋರಿಗೆ ಅಷ್ಟೆಲ್ಲ ದುಡ್ಡು ಕೊಡ್ತೀರಾ? ನಮ್ಗೆ ಗೊತ್ತೇ ಇಲ್ಲ ಅಲ್ರೀ' ಎಂದು ನಮ್ಮ ವಿಶಾಲ ಕಿವಿಯ ಮೇಲೆ ಅನಾಮತ್ತಾಗಿ ಇಡೀ ಲಾಲ್ ಬಾಗ್ ಅನ್ನೇ ಎತ್ತಿಡುತ್ತದೆ.
-
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ -
Basavaraj Bommai: ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ












Click it and Unblock the Notifications