ಅಶ್ಲೀಲ ಸಂದೇಶ, ಬ್ಲೂ ಫಿಲಂಗೆ 3 ವರ್ಷ ಜೈಲೋ ಜೈಲು

ಏಕೆಂದರೆ ನೀವು ಕಳಿಸುವ ಇಂತಹ ಪೋಲಿ ಪೋಲಿ ಸಂದೇಶಗಳು ನಿಮ್ಮನ್ನು ಸೀದಾ ಜೈಲಿನವರೆಗೂ ಕರೆದೊಯ್ಯುತ್ತದೆ. ಅಲ್ಲಿ ಸುಖಾಸುಮ್ಮನೆ ಮೂರು ವರ್ಷ ಕಾಲ ಜೈಲೋ ಜೈಲು. ಜತೆಗೆ 1 ಲಕ್ಷ ರೂ. ದಂಡವನ್ನೂ ಕಕ್ಕಬೇಕಾಗುತ್ತದೆ, ಹುಷಾರು!
ಇಷ್ಟೊಂದು ಖಡಕ್ ನಿರ್ಧಾರ ಏಕಪ್ಪಾ ಅಂದರೆ ಇತ್ತೀಚಿನ ದಿನಗಳಲ್ಲಿ sms/mms ಹಾವಳಿ ವಿಪರೀತವಾಗಿದೆ. ಅದರಲ್ಲೂ ಯುವಜನತೆಯ ಪ್ರಾಣಕ್ಕೆ ಇದು ಮಾರಕವಾಗಿದೆ. ಹಾಗಾಗಿ ಕಠಿಣ ಶಿಕ್ಷೆ. ಇನ್ನು ಸುಖಾಸುಮ್ಮನೆ ಸ್ವಗತದಲ್ಲಿ ಮೊಬೈಲಿನಲ್ಲಿ ನೋಡಿಕೊಳ್ಳಬಹುದು, ವಿಧಾನಸೌಧದಲ್ಲಿ ನಮ್ಮ ಬ್ಲೂ ಬಾಯ್ಸ್ ನೋಡಿದ ಹಾಗೆ ಅಂದರೆ ಅದಕ್ಕೂ ಇದೆ ಇದೇ ಶಿಕ್ಷೆ. ಒಟ್ಟಿನಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಅಶ್ಲೀಲತೆ ಹರಿದಾಡಬಾರದು. ಆ ಬಗ್ಗೆ ದೂರು ಬಂದರೆ, ಅಪರಾಧ ಸಾಬೀತಾದರೆ ಜೈಲೋ ಜೈಲು. ಬಿ ಕೇರ್ ಫುಲ್ಲು.
ಮಹಿಳೆಯರ ಅಶ್ಲೀಲ ಪ್ರದರ್ಶನ (ನಿರ್ಬಂಧ) ಕಾಯ್ದೆ ವ್ಯಾಪ್ತಿಗೆ (Indecent Representation of Women (Prohibition) Act) ವಿದ್ಯುನ್ಮಾನ ಮಾಧ್ಯಮಗಳನ್ನೂ ತರುವ ಸಂಬಂಧ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಇದನ್ನು ಮುಂದಿನ ವಾರ ಸಚಿವ ಸಂಪುಟದ ಅಂಗೀಕಾರಕ್ಕೆ ಕಳಿಸಲಿದೆ.
ಇಲ್ಲಿವರೆಗೂ ಈ ಕಾಯ್ದೆ ವ್ಯಾಪ್ತಿಗೆ ಮುದ್ರಣ ಮಾಧ್ಯಮವಷ್ಟೇ ಬರುತ್ತಿತ್ತು. ಇದೀಗ ಎಲೆಕ್ಟ್ರಾನಿಕ್ ಮಾಧ್ಯಮವನ್ನೂ ಸೇರಿಸುತ್ತಿರುವುದರಿಂದ ಮೊಬೈಲ್ ಫೋನ್, ಇಂಟರ್ನೆಟ್ ಹಾಗೂ ವಿದ್ಯುನ್ಮಾನ ಮಾಧ್ಯಮಗಳೂ ಕಾಯ್ದೆಯ ಪರಿಧಿಗೆ ಸೇರಲಿವೆ.
ಈ ತಿದ್ದುಪಡಿಯನ್ನು ಸೇರಿಸುವುದರ ಜತೆಯಲ್ಲೇ ಶಿಕ್ಷೆ ಹಾಗೂ ದಂಡದ ಪ್ರಮಾಣವನ್ನೂ ಇಲಾಖೆ ಹೆಚ್ಚಿಸಲು ಉದ್ದೇಶಿಸಿದೆ. ಆದ್ದರಿಂದ, ಮಹಿಳೆಯರ ಅಶ್ಲೀಲ ಚಿತ್ರಗಳು, ದೃಶ್ಯಗಳನ್ನು ದುರ್ಬಳಕೆ ಮಾಡಿಕೊಂಡು ಇತರರಿಗೆ ರವಾನಿಸುತ್ತಿರುವವರಿಗೆ ವಿಧಿಸಲಾಗುತ್ತಿದ್ದ 2 ವರ್ಷಗಳ ಶಿಕ್ಷೆಯನ್ನು 3 ವರ್ಷಗಳಿಗೆ ಹೆಚ್ಚಿಸಲಾಗಿದೆ. 2 ಸಾವಿರ ರೂ. ಇದ್ದ ದಂಡದ ಮೊತ್ತವನ್ನು 50 ಸಾವಿರ ರೂ. ನಿಂದ 1 ಲಕ್ಷ ರೂ.ಗೆ ಏರಿಸಲಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications