ಕಾಣೆಯಾಗುತ್ತಿರುವ ಯುವತಿಯರು: ಆತಂಕದಲ್ಲಿ ಉಡುಪಿ

18ರಿಂದ 25 ವರ್ಷ ಪ್ರಾಯದ ಯುವತಿಯರು ಇದ್ದಕ್ಕಿದ್ದಂತೆ ಕಾಣೆಯಾಗುತ್ತಿದ್ದಾರೆ. ಅದೃಷ್ಟವಶಾತ್ ಕೆಲವರು ಜೀವಂತವಾಗಿ ವಾಪಸಾಗುತ್ತಿದ್ದಾರೆ. ಆದರೆ ಮದುವೆಯೋ ಮತ್ತೊಮದು ಅವಘಡ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಅನೇಕರು ಮರಳಿ ಬಾರದ ಲೋಕಕ್ಕೆ ಹೋಗುತ್ತಿದ್ದಾರೆ. ಅವರ ಪತ್ತೆಯೂ ಇಲ್ಲದಂಗಾಗುತ್ತಿದೆ.
ತಾಜಾ ಆಗಿ ಮೊನ್ನೆ ಸೆ. 11ರಂದು 21 ವರ್ಷದ ಯುವತಿಯೊಬ್ಬಳು ಕಾಣೆಯಾಗಿದ್ದಾಳೆ. ಶಿವರಂಜಿನಿ ಎಂಬ ಯುವತಿ ಮಂಗಳವಾರ ಬೆಳಗ್ಗೆಯೇ ಮನೆಬಿಟ್ಟು ಹೋಗಿದ್ದಾಳೆ. ಉದ್ಯೋಗಕ್ಕೆಂದು ಮಣಿಪಾಲಕ್ಕೆ ಹೋದ ಈ ಯುವತಿ ವಾಪಸಾಗಿಲ್ಲ. ಉಡುಪಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರನ್ನು ದಾಖಲಿಸಲಾಗಿದೆ. 5 ಅಡಿ ಎತ್ತರದ ಶಿವರಂಜಿನಿ (ಚಿತ್ರ ನೋಡಿ) ಕನ್ನಡ, ತಮಿಳು, ಇಂಗ್ಲಿಷ್, ಹಿಂದಿ ಮತ್ತು ತುಳು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.
ಅತ್ತ ಶಿವರಂಜಿನಿ ಮನೆಬಿಟ್ಟು ಹೋದ ಘಳಿಗೆಯಲ್ಲೇ ಇತ್ತ ಸಂಗೀತಾ ಎಂಬ ವಿವಾಹಿತ ಯುವಮಹಿಳೆಯೊಬ್ಬರು ಕಾಣೆಯಾದರು. ಆದರೆ 24 ವರ್ಷದ ಈ ಮಹಿಳೆ ಮನೆಬಿಟ್ಟ ಮೂರೇ ದಿನದಲ್ಲಿ ಹೆಣವಾಗಿದ್ದಾಳೆ. ಈ ಮಹಿಳೆ ಪುರುಷನೊಬ್ಬನ ಜತೆ ಮನೆಬಿಟ್ಟಿದ್ದಳು. ಮೊದಲು ಈಕೆ ಆತ್ಮಹತ್ಮೆ ಮಾಡಿಕೊಂಡಿರಬಹುದು ಎನ್ನಲಾಗಿತ್ತು. ಆದರೆ ಅದು ಹತ್ಯೆ ಎಂದು ತಿಳಿದುಬಂದಿದೆ.
ಇನ್ನು, ಸೆ. 5ರಂದು ಧನವಂತಿ (25) ಎಂಬ ಯುವತಿ ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವಳು ಇನ್ನೂ ಮರಳಿ ಬಂದಿಲ್ಲ. ಆಗಸ್ಟಿನಲ್ಲಿ ಹೀಗೆ ಕಾಣೆಯಾದವರ ಪಟ್ಟಿ ಹೀಗಿದೆ: ವಿಜಯಲಕ್ಷ್ಮಿ, ಪ್ರಿಯಾಂಕಾ, ಭಾಗ್ಯಶ್ರೀ...ಇನ್ನೂ ಅನೇಕ ಯುವತಿಯರು.
ಪ್ರಸಕ್ತ ಸಾಲಿನಲ್ಲೇ ಸುಮಾರು 50 ಯುವತಿಯರು ಮನೆ ಬುಟ್ಟು ಹೋಗಿದ್ದಾರೆ. ಹೀಗೆ ಯುವತಿಯರೇನೋ ಮರಳಿ ಬಾರದ ಲೋಕಕ್ಕೆ ಹೋಗುತ್ತಿದ್ದಾರೆ. ಆದರೆ ಅವರ ಪೋಷಕರು ಮತ್ತು ಕುಟುಂಬಸ್ಥರು ದಿನಾ ಕಣ್ಣೀರಲ್ಲಿ ಕೈತೆಳೆಯುತ್ತಿದ್ದಾರೆ. ಇನ್ನು ಪೊಲೀಶ್ ಇಲಾಖೆ ತಲೆ ಮೇಲೆ ಕೈಹೊತ್ತು ಕುಳಿತಿದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications