ಬೆಂಗಳೂರು ಬಿಟ್ಟು ಮೋದಿ ನಾಡಿಗೆ ಬಯೋಕಾನ್ ?

'ಗುಜರಾತಿನಲ್ಲಿ ಉತ್ಪಾದನಾ ಘಟಕ ಆರಂಭಿಸಲು ಬಯೋಕಾನ್ ಅನುಮತಿ ಕೋರಿ ಮನವಿ ಸಲ್ಲಿಸಿದೆ. ಇನ್ನು ಮಾತುಕತೆ ಹಂತದಲ್ಲಿರುವುದರಿಂದ ಹೆಚ್ಚಿನ ವಿವರಗಳನ್ನು ನೀಡಲಾಗುವುದಿಲ್ಲ' ಎಂದು ಗುಜರಾತ್ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ(FDCA) ಆಯುಕ್ತ ಎಚ್ ಜಿ ಕೋಶಿಯಾ ಹೇಳಿದ್ದಾರೆ.
ಡಯಾಬಿಟಿಸ್, ಅಂಕಾಲಜಿ, ನೆಫ್ರಾಲಜಿ, ಕಾರ್ಡಿಯಾಲೊಜಿ, ಇನ್ಮೂನೊಥೆರಪಿ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 1555.85 ಕೋಟಿ ಮೌಲ್ಯದ ಬಯೋಕಾನ್ ಕಂಪನಿ ಮನವಿಗೆ ಸಿಎಂ ಮೋದಿ ಅವರು ಕೂಡಾ ಒಪ್ಪಿಗೆ ನೀಡುವ ಸಾಧ್ಯತೆ ಹೆಚ್ಚಿದೆ.
ಬಯೋಕಾನ್ ಉತ್ತರವೇನು?: ಉದ್ದೇಶಿತ ಘಟಕದ ಮೇಲೆ ಸುಮಾರು 250-300 ಕೋಟಿ ರು ಹೂಡಿಕೆ ಮಾಡುವ ಸಾಧ್ಯತೆಯಿದೆ. ಆದರೆ, ಈ ಬಂಡವಾಳ ಹೂಡಿಕೆ ಬಗ್ಗೆ ಬಯೋಕಾನ್ ಸಂಸ್ಥೆ ಯಾವುದೇ ಮಾಹಿತಿ ಹೊರ ಹಾಕಿಲ್ಲ.
ಬೆಂಗಳೂರಿನ ಬೊಮ್ಮಸಂದ್ರ ಬಳಿ ಘಟಕ ವಿಸ್ತರಣೆಗೆ ಅಡ್ಡಿ ಉಂಟಾದ ಮೇಲೆ ಇತರೆ ರಾಜ್ಯಗಳತ್ತ ಸಂಸ್ಥೆಯನ್ನು ಕೊಂಡೊಯ್ಯುವ ಸೂಚನೆ ನೀಡಿದ್ದ ಕಿರಣ್ ಮುಜುಂದಾರ್ ಶಾ ಅವರು ಈಗ 'ವೈಬ್ರೆಂಟ್' ಗುಜರಾತ್ ನತ್ತ ಕಣ್ಣು ಹಾಕಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಗುಜರಾತಿನಲ್ಲಿ ಮತ್ತೊಂದು ಘಟಕ ಸ್ಥಾಪನೆ ಮಾತ್ರ ಆಗಲಿದ್ದು, ಬೆಂಗಳೂರಿನ ಮೂಲವನ್ನು ಸದ್ಯಕ್ಕೆ ಅಲ್ಲಾಡಿಸುವುದಿಲ್ಲ ಎನ್ನಲಾಗಿದೆ.
ಜಪಾನ್, ಯುರೋಪ್ ಮೂಲದ ಸುಮಾರು 20-35 ಅತಿ ದೊಡ್ಡ ಫಾರ್ಮಾ ಕಂಪನಿಗಳು ಗುಜರಾತಿನಲ್ಲಿ ಬಂಡವಾಳ ಹೂಡಲು ಮುಂದೆ ಬಂದಿದೆ. ಯುಎಸ್ ನ ಅಬ್ಬೋಟ್ ಲ್ಯಾಬ್ಸ್ ಹಾಗೂ ಇಸ್ರೇಲ್ ನ ಟೆವಾ ಫಾರ್ಮ ಗುಜರಾತ್ ಪ್ರವೇಶಿಸಲಿದೆ.
ವಡೋದರದಲ್ಲಿ 360 ಕೋಟಿ ವೆಚ್ಚದ nutraceutical ಉತ್ಪಾದನಾ ಘಟಕ ಸ್ಥಾಪನೆಗೆ ಅಬೋಟ್ ಲ್ಯಾಬ್ ಮನಸ್ಸು ಮಾಡಿದೆ. ಇದರ ಜೊತೆಗೆ ಯುಎಸ್ ನ ಪ್ರಾಕ್ಟರ್ ಅಂಡ್ ಗಾಂಬಲ್ (P & G) 250 ಕೋಟಿ ವೆಚ್ಚದ ಘಟಕವನ್ನು ಸನಂದ್ ನಲ್ಲಿ ಆರಂಭಿಸಲಿದೆ.
ವೈಎಸ್ ಜಗನ್ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದಿನಲ್ಲಿ ನಿಮ್ಮಗಡ್ಡ ಪ್ರಸಾದ್ ಬಂಧನವಾಗುತ್ತಿದ್ದಂತೆ ಔಷಧ ಮಾರುಕಟ್ಟೆ ಮೌಲ್ಯ ಇಳಿಮುಖವಾಗುತ್ತಿದೆ. ಈ ಪರಿಸ್ಥಿಯಲ್ಲಿ ಬೆಂಗಳೂರಿನತ್ತ ಮುಖ ಮಾಡಬೇಕಿದ್ದ ಕಂಪನಿಗಳನ್ನು ಗುಜರಾತ್ ನತ್ತ ತಿರುಗಿಸುವಲ್ಲಿ ನರೇಂದ್ರ ಮೋದಿ ತಂಡ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications