ಮಮತಾ, ವಿನಯ್ ಗೆ ಏಕಲವ್ಯ ಪ್ರಶಸ್ತಿ ಗೌರವ
ಜೀವಮಾನದ ಸಾಧನೆಗಾಗಿ ಹಿರಿಯ ಕ್ರೀಡಾಪಟುಗಳಿಗೂ ಇದೇ ಸಂದರ್ಭದಲ್ಲಿ ಪ್ರಶಸ್ತಿ ಘೋಷಿಸಲಾಗಿದೆ. ಏಕಲವ್ಯ ಪ್ರಶಸ್ತಿ ವಿಜೇತರಿಗೆ 2 ಲಕ್ಷ ರು ನಗದು ಬಹುಮಾನ, ಬೆಳ್ಳಿ ಫಲಕ, ಪ್ರಮಾಣ ಪತ್ರ ದೊರೆಯಲಿದೆ. ಮಹಿಳಾ ಅಥ್ಲೀಟ್ ಗಳಿಗೆ ಪ್ರಶಸ್ತಿ ಫಲಕದ ಜೊತೆಗೆ ಮೈಸೂರು ರೇಷ್ಮೆ ಸೀರೆ ನೀಡಿ ಗೌರವಿಸಲಾಗುತ್ತದೆ. ಪುರುಷ ಕ್ರೀಡಾಪಟುಗಳಿಗೆ ಸೂಟ್ ದಿರಿಸು ನೀಡಲಾಗುತ್ತದೆ ಎಂದು ಅಪ್ಪಚ್ಚು ರಂಜನ್ ಹೇಳಿದರು.
* ವಿನಯ್ ಕುಮಾರ್-ಕ್ರಿಕೆಟ್
* ಪ್ರತೀಕ್ ರಾಜ್ -ರೋಲರ್ ಸ್ಕೇಟಿಂಗ್
* ರಾಕೇಶ್ ಮನ್ಪತ್- ಶೂಟಿಂಗ್
* ಸಾಬು ಈಶ್ವರ್ ಗಾಣೀಗೇರ್- ಸೈಕ್ಲಿಂಗ್
* ಕಾಶಿನಾಥ್ ನಾಯ್ಕ್-ಅಥ್ಲೆಟಿಕ್ಸ್
* ಸ್ಟ್ಯಾನಿ-ಚೆಸ್
* ಚಿಯಣ್ಣ-ಹಾಕಿ
* ನೇಹಾ-ಪವರ್ ಲಿಫ್ಟಿಂಗ್
* ರಾಜಣ್ಣ-ಅಂಗವಿಕಲ ಅಥ್ಲೀಟ್
* ಎಚ್ ಚಂದ್ರಶೌರಿ ದೇವಿ-ವೇಯ್ಟ್ ಲಿಫ್ಟಿಂಗ್
* ಮಮತಾ ಪೂಜಾರಿ-ಕಬಡ್ಡಿ
* ನಾಡಿಯಾ ಹರಿದಾಸ್ -ಈಕ್ವೆಸ್ಟ್ರಿಯನ್
* ಕೃತಿಕಾ ಲಕ್ಷ್ಮಣ್- ಬಾಸ್ಕೆಟ್ ಬಾಲ್
* ಶ್ವೇತಾ ಎನ್- ವಾಲಿಬಾಲ್
* ಎ.ಪಿ. ಗಗನ್ ಉಲ್ಲಾಳ್ ಮಠ- ಈಜು
ಕ್ರೀಡಾಕ್ಷೇತ್ರದಲ್ಲಿನ ಜೀವಮಾನದ ಸಾಧನೆಗಾಗಿ ಹಾಕಿ ತರಬೇತುಗಾರ ಸಿ.ಯು. ಅಶ್ವಥ್, ವೇಯ್ಟ್ ಲಿಫ್ಟಿಂಗ್ ತರಬೇತುಗಾರ್ತಿ ಶ್ಯಾಮಲಾ ಶೆಟ್ಟಿ ಹಾಗೂ ಸೈಕ್ಲಿಂಗ್ ತರಬೇತಿಗಾರ ಚಂದ್ರಪ್ಪ ಮಲ್ಲಪ್ಪ ಕುರಣಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.
ಪ್ರತಿವರ್ಷ 15 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲು ಅವಕಾಶವಿದೆ. ಆದರೆ, 2010ರಲ್ಲಿ 12 ಜನರಿಗೆ ಮಾತ್ರ ಈ ಪ್ರಶಸ್ತಿ ನೀಡಲಾಗಿತ್ತು. ಹೀಗಾಗಿ ಬಾಕಿ ಉಳಿದಿದ್ದ 3 ಪ್ರಶಸ್ತಿಗಳಿಗೂ ಈ ಬಾರಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವ ಅಪ್ಪಚ್ಚು ರಂಜನ್ ಹೇಳಿದರು.
ಬೆಳಗಾವಿಯ ರಾಜೇಶ್ ಶಿಂಧೆ (ಅಂಗವಿಕಲ ಕ್ರೀಡಾಪಟು/ ಈಜು), ದಕ್ಷಿಣ ಕನ್ನಡ ಜಿಲ್ಲೆಯ ರೋಷನ್ ಫರಾವೋ (ಬಾಡಿ ಬಿಲ್ಡಿಂಗ್) ಹಾಗೂ ಮಂಡ್ಯ ಜಿಲ್ಲೆಯ ಎಸ್.ನವೀನ್ (ಕರಾಟೆ) ಅವರನ್ನು ಆಯ್ಕೆ ಮಾಡಲಾಗಿದೆ.
ಏಕಲವ್ಯ ಪ್ರಶಸ್ತಿಗಾಗಿ ಸುಮಾರು 93 ಅರ್ಜಿಗಳು ಬಂದಿದ್ದವು. ಜೀವಮಾನದ ಪ್ರಶಸ್ತಿಗಾಗಿ ಸುಮಾರು 40 ಅರ್ಜಿಗಳು ಬಂದಿತ್ತು.
ಕ್ರೀಡಾಪಟುಗಳು ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ತೋರಿದ್ದನ್ನು ಪರಿಗಣಿಸಿ ಈ ಬಾರಿ ಏಕಲವ್ಯ ಪ್ರಶಸ್ತಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು, ಸಂಪೂರ್ಣವಾಗಿ ಪಾರದರ್ಶಕವಾಗಿದೆ.ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಕ್ಕೆ ಪ್ರತಿಯೊಂದಕ್ಕೂ ಅಂಕಗಳನ್ನು ನಿಗದಿ ಮಾಡಲಾಗಿತ್ತು.
ಈ ಮೂಲಕ ಪ್ರತಿಯೊಂದು ವಿಭಾಗದಲ್ಲೂ ಅತಿ ಹೆಚ್ಚು ಅಂಕಗಳನ್ನು ಪಡೆದ ಕ್ರೀಡಾಪಟುಗಳನ್ನೇ ಆಯ್ಕೆ ಮಾಡಲಾಗಿದೆ. ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ಕ್ರೀಡಾ ದಿನವಾದ ಆ.29 ರಂದು ಸಂಜೆ 6 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಅಪ್ಪಚ್ಚು ರಂಜನ್ ಹೇಳಿದರು.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ













Click it and Unblock the Notifications