ವಿದ್ಯಾರ್ಥಿನಿಯರ ಮೇಲೆ ಕನಕಪುರ ಕಿರಾತಕರ ದೌರ್ಜನ್ಯ

ಕಾವೇರಿ ತಟದ ಮುತ್ತತ್ತಿ ಮತ್ತು ಸಂಗಮಕ್ಕೆ ಪಿಕ್ನಿಕ್ ತೆರಳಿದ್ದ ಬೆಂಗಳೂರಿನ ಕುಮಾರಸ್ವಾಮಿ ಲೇಔಟಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನ 8 ಮಂದಿ ವಿದ್ಯಾರ್ಥಿಗಳ ತಂಡದ ಮೇಲೆ ಈ ದೌರ್ಜನ್ಯ ನಡೆದಿದೆ. ಅದರಲ್ಲಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಬಂಧಿತರು ಫಿರ್ದೋಸ್ ಅಹಮದ್, ಸಯ್ಯದ್ ಮಾಟಿನ್, ಅರ್ಶದ್ ಖಾನ್, ವಸೀಂ ಅಕ್ರಂ ಖಾನ್ ಮತ್ತು ರಿಜ್ವಾನ್ ಅಹಮದ್.
ಕಿರಾತಕರು, ತಂಡದಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಗೋಳುಹೊಯ್ದುಕೊಂಡಿದ್ದಾರೆ. ಈ ವಿದ್ಯಾರ್ಥಿನಿಯರ ಬಟ್ಟೆಗಳನ್ನು ಹರಿದುಹಾಕಿದ್ದಾರೆ. ಇದಕ್ಕೆಲ್ಲ ಕಪ್ಪುಚುಕ್ಕೆಯಿಟ್ಟಂತೆ ಬಸ್ ಸ್ಟಾಂಡಿನಲ್ಲಿದ್ದ ಯಾರೊಬ್ಬರೂ ಈ ವಿದ್ಯಾರ್ಥಿನಿಯರ ಸಹಾಯಕ್ಕೆ ಬಂದಿಲ್ಲ.
ಇನ್ನೂ ದೌರ್ಭಾಗ್ಯದ ಸಂಗತಿಯೆಂದರೆ ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಪುತ್ರ ಧಮ್ಕಿ ಹಾಕಿದ ಕಾರಣ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.
ಘಟನೆಯ ನಂತರ ಎಚ್ಚೆತ್ತ ಸ್ಥಳೀಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆಗ ಪೊಲೀಸರು ತಡವಾಗಿ ಐದು ಮಂದಿ ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾಗ ಕೆಲವು ಪುಂಡರು ಪ್ರತಿಭಟನಾನಿರತರ ಮೇಲೆ ಕಲ್ಲುಗಳನ್ನೆಸದಿದ್ದಾರೆ. ಇದರಿಂದ ಪರಿಸ್ಥಿತಿ ಉದ್ವಿಗ್ನಕ್ಕೆ ತಿರುಗಿದ್ದು, ಪಟ್ಟಣದಲ್ಲಿ ಈಗ ನಿಷೇದಾಜ್ಞೆ ಜಾರಿಗೆಗೊಳಿಸಲಾಗಿದೆ.
ಪೊಲೀಸರು ಹೇಳುವುದೇನು?: 6 ವಿದ್ಯಾರ್ಥಿಗಳು ಮತ್ತು 2 ವಿದ್ಯಾರ್ಥಿನಿಯರು ಹುಟ್ಟುಹಬ್ಬ ಆಚರಿಸಲು ಸಂಗಮ ಮತ್ತು ಮುತ್ತತ್ತಿಗೆ ಆಗಮಿಸಿದ್ದರು. ಇವರೆಲ್ಲ ಉತ್ತರ ಭಾರತದವರು. ಮತ್ತಿತ್ತಿಯಲ್ಲೇ ಕಿರಾತಕರ ದರ್ಶನವಾಗಿದೆ. ಇದರಿಂದ ಕೆಂಗೆಟ್ಟ ತಂಡ ತಮ್ಮ ವಾಹನದಲ್ಲಿ ಕನಕಪುರದತ್ತ ಧಾವಿಸಿದ್ದಾರೆ. ಆದರೆ ಕಿರಾತಕರು ಬೈಕುಗಳಲ್ಲಿ ಅವರನ್ನು ಹಿಂಬಾಲಿಸಿದ್ದಾರೆ.
ಕಿರಾತಕರು ಮಾರ್ಗ ಮಧ್ಯೆ ತಮ್ಮ ಇತರೆ ಕಿರಾತಕ ಗೆಳೆಯರಿಗೆ ಮೊಬೈಲಿನಲ್ಲಿ ಫೋನ್ ಮಾಡಿ, ವಿದ್ಯಾರ್ಥಿಗಳ ತಂಡವನ್ನು ತಡೆಯುವಂತೆ ಸೂಚಿಸಿದ್ದಾರೆ. ಕೊನೆಗೆ ಕನಕಪುರ ಬಸ್ ನಿಲ್ದಾಣದ ಬಳಿ ಕಿರಾತಕರು ವಿದ್ಯಾರ್ಥಿಗಳ ತಂದ ಮೇಲೆ ಮುಗಿಬಿದ್ದಿದ್ದಾರೆ.
ರಾಜಸ್ತಾನ ಮೂಲದ ಅಭಿಷೇಕ್ ನ ಹುಟ್ಟುಹಬ್ಬ ಆಚರಿಸಲು ಅಸ್ಸಾಂ, ಬಿಹಾರ, ಗುಜರಾತ್ ಮೂಲದವರಾದ ಸೌರವ್, ಪ್ರೀತಿ, ಮಾಲತೇಶ್, ಸ್ವಾತಿ, ಅಭಿನವ್, ರೋಹಿತ್ ಮುತ್ತಿತ್ತಿಗೆ ತೆರಳಿದ್ದರು.
'ಮೊದಲು ವಿದ್ಯಾರ್ಥಿಗಳ ಮೇಲೆ ದೈಹಿಕ ಹಲ್ಲೆ ನಡೆಸಿ, ಅವರನ್ನು ಸುಮ್ಮನಾಗಿಸಿದ ಕಿರಾತಕರು ಬಳಿಕ ಇಬ್ಬರು ಯುವತಿಯರ ಮೇಲೆ ಮುಗಿಬಿದ್ದಿದ್ದಾರೆ. ಅವರಿಗೆ ಲೈಂಗಿಕ ಕಿರುಕುಳ ನೀಡಿದರು' ಎಂದು ಪ್ರತ್ಯಕ್ಷದರ್ಶಿಯೊಬ್ಬರು (ಆ ಪ್ರತ್ಯಕ್ಷದರ್ಶಿ ತಮ್ಮ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ) ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಅನೇಕ ಹಿಂದೂ ಸಂಘಟನೆಗಳು ಗುರುವಾರ ತೀವ್ರ ಪ್ರತಿಭಟನೆ ನಡೆಸಿವೆ. ಪೊಲೀಸರು ಆ ವೇಳೆ ಲಾಠಿ ಪ್ರಹಾರ ಸಹ ನಡೆಸಿದ್ದಾರೆ. '20ರ ಹರಯದ ಐದು ಯುವಕರನ್ನು ಬಂಧಿಸಲಾಗಿದೆ. ಆರೋಪಿಗಳ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇತರೆ ದುಷ್ಕರ್ಮಿಗಳನ್ನೂ ಬಂಧಿಸಲಾಗುವುದು' ಎಂದು ಪೊಲೀಸ್ ಡಿವೈ.ಎಸ್ಪಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications