ಲಾಭದತ್ತ ಮುಖ ಮಾಡಿದ ಬಜ್ಪೆ ವಿಮಾನ ನಿಲ್ದಾಣ

ವಿಮಾನ ನಿಲ್ದಾಣ ಪ್ರಾಧಿಕಾರದ ಮಾಹಿತಿಯಂತೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ ಉತ್ತಮ ಪ್ರಗತಿ ಸಾಧಿಸಿದೆ. 2011-12ರಲ್ಲಿ ಆದಾಯ 42ಕೋಟಿ ರು ಗಳಿಕೆ ದಾಖಲಿಸಿದೆ. ಒಟ್ಟಾರೆ ಖರ್ಚುವೆಚ್ಚದ ಮೊತ್ತ 32.5 ಕೋಟಿ ರು ಆಗಿದೆ. ಇದೇ ಅವಧಿಯಲ್ಲಿ 9.5 ಕೋಟಿ ರು ವ್ಯವಹಾರಿಕೆ ಲಾಭ ಗಳಿಸಲಾಗಿದೆ ಎಂದು ವಾಸುದೇವ ಅವರು ಹೇಳಿದರು.
2002-03ರ ಅವಧಿಯಲ್ಲಿ ಸುಮಾರು 2.5 ಕೋಟಿ ರು ನಷ್ಟ ಅನುಭವಿಸಿದ್ದ ವಿಮಾನ ನಿಲ್ದಾಣದಲ್ಲಿ ಈಗ ಟ್ರಾಫಿಕ್ ಏರಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಲವು ಅಂತಾರಾಷ್ಟ್ರೀಯ ವಿಮಾನ ಸಂಸ್ಥೆಗಳು ನೇರ ವಿಮಾನ ಸಂಪರ್ಕ ಒದಗಿಸುವತ್ತ ಚಿಂತನೆ ನಡೆಸಿರುವುದು ಶುಭ ಸೂಚನೆಯಾಗಿದೆ ಎಂದು ವಾಸುದೇವ ಹೇಳಿದರು.
2002-03ರ ಅವಧಿಯಲ್ಲಿ ವಿಮಾನ ನಿಲ್ದಾಣದ ಆದಾಯ 4 ಕೋಟಿ ರು ಇತ್ತು. ಖರ್ಚು ವೆಚ್ಚ 6.5 ಕೋಟಿ ರು ಇತ್ತು. ಮಂಗಳೂರಿನ ವಿಮಾನ ನಿಲ್ದಾಣದ ಏರ್ ಕಾರ್ಗೋ ವಿಭಾಗದ ಕಾಂಪ್ಲೆಕ್ಸ್ ನಲ್ಲಿ ಸಿವಿಲ್ ಹಾಗೂ ಎಲೆಕ್ಟ್ರಿಕಲ್ ವರ್ಕ್ಸ್ ಕಾಮಗಾರಿಯನ್ನು 45 ಲಕ್ಷ ವೆಚ್ಚದಲ್ಲಿ ಸಂಪೂರ್ಣಗೊಳಿಸಲಾಗಿದೆ.
ಇತ್ತೀಚೆಗೆ ನಡೆದ ರಫ್ತುದಾರರ ಸಮಾವೇಶದಲ್ಲಿ ಏರ್ ಕಾರ್ಗೋ ಕಾಂಪ್ಲೆಕ್ಸ್ ಹಾಗೂ ಕೋಲ್ಡ್ ಸ್ಟೊರೇಜ್ ವ್ಯವಸ್ಥೆ ಕಲ್ಪಿಸುವುದರ ಬಗ್ಗೆ ಕೇಂದ್ರ ಇಂಧನ ಮತ್ತು ಸಂಸದೀಯ ವ್ಯವಹಾರ ಸಚಿವ ವೀರಪ್ಪ ಮೊಯ್ಲಿ ಅವರು ಪ್ರಸ್ತಾಪಿಸಿದ್ದರು. ಅದರಂತೆ ಕಾಮಗಾರಿ ಪ್ರಗತಿಯಲ್ಲಿದೆ .ಜನವರಿ ಹೊತ್ತಿಗೆ ಏರ್ ಟ್ರಾಫಿಕ್ ಬ್ಲಾಕ್ ಕೂಡಾ ಆರಂಭಿಸುವ ಸಾಧ್ಯತೆಯಿದೆ ಎಂದು ವಾಸುದೇವ ಹೇಳಿದರು.
ಬಜ್ಪೆ ಏರ್ ಪೋರ್ಟ್: ಮಂಗಳೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಬೆಟ್ಟದ ಮೇಲಿರುವ ವಿಶಿಷ್ಟವಾದ ವಿಮಾನ ನಿಲ್ದಾಣ ಟೇಬಲ್ 'ಟಾಪ್ ರನ್ ವೇ' ಹೊಂದಿದೆ. ಬಜ್ಪೆ ಬಿಟ್ಟರೆ ಕೋಳಿಕೊಡ್(ಕೇರಳ) ಹಾಗೂ ಲೆಂಗ್ ಪುಯಿ(ಮಿಜೋರಾಂ)ನಲ್ಲಿ ಮಾತ್ರ ಈ ರೀತಿ ರನ್ ವೇ ಕಾಣಬಹುದು.
ಮೊದಲ ರನ್ ವೇ 5,249 ಅಡಿ ಎತ್ತರದ ಪ್ರದೇಶದಲ್ಲಿದ್ದು, ಎರಡನೇ ರನ್ ವೇ 8,038 ಅಡಿ ಎತ್ತರದಲ್ಲಿದೆ. ಎರಡು ರನ್ ವೇ ಹೊಂದಿರುವ ಅದರಲ್ಲೂ ಕಾಂಕ್ರೀಟ್ ರನ್ ವೇ ಹೊಂದಿದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಬಜ್ಪೆಯದಾಗಿದೆ.
2007-08ರಲ್ಲಿ ಸುಮಾರು 10,019 ಏರ್ ಕ್ರಾಫ್ಟ್ ಗಳ ಹಾರಾಟ ಕಂಡಿದ್ದು , 2010ರಲ್ಲಿ 8.04 ಲಕ್ಷ ಪ್ರಯಾಣಿಕರನ್ನು ಈ ವಿಮಾನ ನಿಲ್ದಾಣ ಸಂಭಾಳಿಸಿದೆ.
2006ರಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಫ್ಲೈಟ್ 802 ದುಬೈನಿಂದ ಬಂದಿಳಿದು ಶುಭಾರಂಭ ಮಾಡಿತ್ತು. ನಂತರ ಅಬುದಾಬಿ, ಮಸ್ಕಟ್, ದೋಹಾ, ಬಹರೇನ್, ಕುವೈಟ್ ಹಾಗೂ ಶಾರ್ಜಾಗಳಿಗೆ ವಿಮಾನ ಸೌಲಭ್ಯ ಸಾಧಿಸಲಾಗಿದೆ.
10 ಟನ್ ಸಾಮರ್ಥ್ಯದ ಏರ್ ಕಾರ್ಗೋ ಬೇಸ್ ಈಗ ಮತ್ತಷ್ಟು ನವೀಕರಣಕ್ಕೆ ಒಳಪಡುತ್ತಿದೆ. ಕರ್ನಾಟಕ ಸರ್ಕಾರದಿಂದ 15 ಎಕರೆ ಜಾಗ ಪಡೆದು ಕೋಸ್ಟ್ ಗಾರ್ಡ್ ಪಡೆ ತನ್ನ ಹೆಲಿಕಾಪ್ಟರ್ ಗಳ ನಿಲ್ದಾಣ ಸ್ಥಾಪಿಸಲು ಬಜ್ಪೆ ವಿಮಾನ ನಿಲ್ದಾಣ ಬಳಸಲಾಗುತ್ತದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications