ಅಪ್ಪನ ಕೊನೆಯಾಸೆ ತೀರಿಸಿದ ಯೋಗೇಶ್ವರನಿಗೆ ಒಲಿಂಪಿಕ್ಸ್ ಕಂಚು
ಲಂಡನ್, ಆ.12: ಒಲಿಂಪಿಕ್ಸ್ 2012 ಪದಕ ಪಟ್ಟಿಯಲ್ಲಿ ಭಾರತ ಮತ್ತೊಂದು ಹೆಜ್ಜೆ ಮೇಲಿಟ್ಟಿದೆ. ಶನಿವಾರ(ಆ.11) ನಡೆದ 60 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಕುಸ್ತಿಪಟು ಯೋಗೇಶ್ವರ್ ದತ್ ಕಂಚಿನ ಪದಕ ಗೆದ್ದಿದ್ದಾರೆ.
29 ವರ್ಷದ ಯೋಗೇಶ್ವರ್ ಅವರು ಉತ್ತರ ಕೊರಿಯಾದ ಜೊಂಗ್ ಮ್ಯಾಂಗ್ ರಿ ಅವರನ್ನು 3-1 ಅಂತರದಿಂದ ಸೋಲಿಸಿ ಪದಕ ಕೊರಳಿಗೇರಿಸಿಕೊಂಡರು. ಎಕ್ಸೆಲ್ ಅರೀನಾದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಪಟ್ಟಿನ ಪಟ್ಟು ಹಾಕಿ ಎದುರಾಳಿ ನೆಲಕಚ್ಚುವಂತೆ ಮಾಡುವಲ್ಲಿ ದತ್ ಸಫಲರಾದರು.ಒಲಿಂಪಿಕ್ಸ್ ಪದಕ ಗೆಲ್ಲುವ ಮೂಲಕ ದತ್ ಅವರು ತಮ್ಮ ತಂದೆಯ ಕೊನೆಯಾಸೆಯನ್ನು ಈಡೇರಿಸಿದ್ದಾರೆ. 2006ರಲ್ಲಿ ಮೃತರಾದ ಯೋಗೇಶ್ವರ್ ದತ್ ಅವರ ತಂದೆಗೆ ತಮ್ಮ ಮಗ ಒಲಿಂಪಿಕ್ಸ್ ಪದಕ ಗೆಲ್ಲುವುದನ್ನು ನೋಡುವ ಮಹದಾಸೆಯಿತ್ತು.
ದತ್ ಅವರ ಪದಕದೊಂದಿಗೆ ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತ ಪಡೆದ ಪದಕಗಳ ಸಂಖ್ಯೆ ಐದಕ್ಕೆ ಏರಿದೆ. ದತ್ತ್ ರಷ್ಯಾದ ಆಟಗಾರ ಬಿಸಿಕ್ ಕುಡುಕೋವ್ ವಿರುದ್ಧ ಸೋತಿದ್ದರು ಆದರೆ, ರಿಪಿಚೇಜ್ನ ಮೂರು ಸುತ್ತಿನ ಅವಕಾಶದ ಲಾಭ ಪಡೆದು ಪೋರ್ಟೊರಿಕಾದ ಗೋಮೆಜ್ ಮಾರ್ಟೊಸ್ ಫ್ರಾಂಕ್ಲೆನ್(3-0) ವಿರುದ್ಧ ಜಯ ಗಳಿಸಿದರು. ನಂತರ ಇರಾನ್ನ ಮಸೂದ್ ಇಸ್ಮಾಯಿಲ್ಪೂರ್ಜಾಯಿ ಬಾರಿ ವಿರುದ್ಧ 3-1 ಅಂತರದಿಂದ ಜಯಿಸಿ ಅಂತಿಮ ಸುತ್ತಿಗೆ ಅರ್ಹತೆ ಗಳಿಸಿದರು.
ಅಂತಿಮ ಸುತ್ತಿನಲ್ಲಿ ಉತ್ತರ ಕೊರಿಯದ ಜೊಂಗ್ರನ್ನು 3-1 ಅಂತರದಿಂದ ಬಗ್ಗುಬಡಿದು ಕಂಚು ಪಡೆದರು. ದತ್ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ರಷ್ಯಾದ ಆಟಗಾರ ಬಿಸಿಕ್ ಕುಡುಕೋವ್ ವಿರುದ್ಧ ಫೈನಲ್ಗೆ ಅರ್ಹತೆ ಪಡೆದ ಹಿನ್ನೆಲೆಯಲ್ಲಿ ದತ್ಗೆ ರಿಪಿಚೇಜ್ ಸುತ್ತಿನಲ್ಲಿ ಆಡುವ ಅವಕಾಶ ಲಭಿಸಿತ್ತು. ಕಂಚಿನ ಪದಕವನ್ನು ಜಯಿಸಲು ದತ್ ರಿಪಿಚೇಜ್ ಸುತ್ತಿನಲ್ಲಿ ಮೂರು ರೌಂಡ್ ಪಂದ್ಯವನ್ನು ಜಯಿಸಿ ಗಳಿಸಿ ಹೊಸ ಸಾಧನೆ ಮೆರೆದರು.
ಭಾವನಾತ್ಮಕ ಜಯ: 2006ರ ದೋಹಾ ಏಷ್ಯನ್ ಗೇಮ್ಸ್ ಗೆ ನಾನು ಹೊರಡುವ ಎರಡು ದಿನ ಮೊದಲು ನನ್ನಪ್ಪನನ್ನು ಕಳೆದುಕೊಂಡೆ. ನನಗೆ ಆಕಾಶ ಕಳಚಿ ತಲೆ ಮೇಲೆ ಬಿದ್ದಂತೆ ಭಾಸವಾಯಿತು.
ನಾನು ನನ್ನ ತಂದೆಗಾಗಿ ಏಷ್ಯನ್ ಗೇಮ್ಸ್ ಗೆ ಹೋಗುವುದನ್ನು ತಪ್ಪಿಸಿಕೊಳ್ಳಲಿಲ್ಲ. ಇವತ್ತು ನನಗೆ ತುಂಬಾ ಸಂತೋಷವಾಗಿದೆ. ನನ್ನ ತಂದೆಯ ಮಹದಾಸೆಯನ್ನು ಪೂರೈಸಿದ ತೃಪ್ತಿ ಇದೆ. ನನ್ನ ಗೆಲುವಿನ ಹಿಂದಿನ ಶಕ್ತಿ ನನ್ನ ತಂದೆಯೇ ಆಗಿದ್ದಾರೆ.
ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ನನ್ನ ಕೈಯಿಂದ ಪದಕ ಜಾರಿ ಹೋಗಿತ್ತು. ಅಪ್ಪನ ನೆನಪು, ಆಸೆ ಸದಾ ಕಾಲ ನನ್ನನ್ನು ಕಾಡುತ್ತಿತ್ತು. ಈ ಬಾರಿ ಶಕ್ತಿಮೀರಿ ಪ್ರದರ್ಶನ ನೀಡುವ ಪ್ರದರ್ಶನ ನೀಡುವ ಆತ್ಮ ವಿಶ್ವಾಸ ನನ್ನಲ್ಲಿತ್ತು. ಪದಕ ಗೆಲ್ಲುವ ಗುರಿ ಮುಟ್ಟಿದ್ದೇನೆ ಎಂದು ದತ್ ಅವರು ಹೇಳಿದ್ದಾರೆ.
ಕುಸ್ತಿ ವಿಕ್ರಮ: ಒಲಿಂಪಿಕ್ಸ್ ಇತಿಹಾಸದಲ್ಲಿ ಕುಸ್ತಿಯಲ್ಲಿ ಇದು ಭಾರತದ ಮೂರನೇ ಪದಕವಾಗಿದೆ. ಕೆಡಿ ಜಾಧವ್ (ಕಂಚು, 1952 ಹೆಲ್ಸಿಂಕಿ) ಹಾಗೂ ಸುಶೀಲ್ ಕುಮಾರ್ (ಕಂಚು, 2008 ಬೀಜಿಂಗ್) ನಂತರ ಯೋಗೇಶ್ವರ್ ದತ್ (ಕಂಚು, 2012 ಲಂಡನ್)
2009ರಲ್ಲಿ ಸ್ನಾಯು ಸೆಳೆತ, ಕೀಲು ನೋವು ಅನುಭವಿಸಿದ ಯೋಗೇಶ್ವರ್ ಪುನಃ ಕುಸ್ತಿ ಅಖಾದಕ್ಕೆ ಇಳಿಯುವುದು ಕಷ್ಟ ಎಂದು ಎಲ್ಲರೂ ಊಹಿಸಿದ್ದರು. ಶಸ್ತ್ರಚಿಕಿತ್ಸೆಗೂ ಒಳಪಟ್ಟ ದತ್, ಕಠಿಣ ಪರಿಶ್ರಮದ ಮೂಲಕ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.
2010 ದೆಹಲಿ ಕಾಮನ್ ವೆಲ್ತ್ ಗೇಮ್ಸ್ ಹಾಗೂ ಏಷ್ಯಾದ ಕುಸ್ತಿ ಚಾಂಪಿಯನ್ ಶಿಪ್ 2010 ರಲ್ಲಿ ಚಿನ್ನದ ಪದಕ ಗೆದ್ದಿರುವ ಯೊಗೇಶ್ವರ್ ಅವರು 2003 ರಲ್ಲಿ ಲಂಡನ್ ನ ಕಾಮನ್ ವೆಲ್ತ್ ಕುಸ್ತಿ ಚಾಂಪಿಯನ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಲಂಡನ್ ಒಲಿಂಪಿಕ್ಸ್ 2012ರಲ್ಲಿ ಶೂಟರ್ ಗಗನ್ ನಾರಂಗ್ (ಕಂಚು), ವಿಜಯ್ ಕುಮಾರ್ (ಬೆಳ್ಳಿ), ಶಟ್ಲರ್ ಸೈನಾ ನೆಹ್ವಾಲ್ (ಕಂಚು), ಬಾಕ್ಸರ್ ಮೇರಿ ಕೋಮ್ (ಕಂಚು) ಹಾಗೂ ಕುಸ್ತಿಪಟು ಯೋಗೇಶ್ವರ್ ದತ್ (ಕಂಚು) ಗಳಿಸಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ













Click it and Unblock the Notifications