ಜಗದೇಕ ಮಲ್ಲ ಸುಶೀಲ್ ಗೆ ಚಿನ್ನ ಕೈ ತಪ್ಪಿದ ರಹಸ್ಯ
ಲಂಡನ್, ಆ.12: ಜಗದೇಕ ಮಲ್ಲ ಸುಶೀಲ್ ಕುಮಾರ್ ಒಲಿಂಪಿಕ್ಸ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಭಾನುವಾರ (ಆ.12) ಪುರುಷರ 66 ಕೆಜಿ ಫ್ರೀಸ್ಟೈಲ್ ನ ಫೈನಲ್ ಪಂದ್ಯದಲ್ಲಿ ಸೋತು ರಜತ ಪದಕ ಗಳಿಸಿದರೂ ಭಾರತದ ಸರ್ವಶ್ರೇಷ್ಠ ವೈಯಕ್ತಿಕ ಒಲಿಂಪಿಕ್ಸ್ ಕ್ರೀಡಾಪಟು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಎಕ್ಸೆಲ್ ಅರೀನಾದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಗೆಲ್ಲುವ ನೆಚ್ಚಿನ ಪಟುವಾಗಿದ್ದ ಸುಶೀಲ್ ಯಾಕೋ ಮಂಕಾಗಿ ಬಿಟ್ಟರು. ತಮಗಿಂತ ಮೂರು ವರ್ಷ ಕಿರಿಯ ಹಾಗೂ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಗೆ ಪ್ರವೇಶ ಪಡೆದಿರುವ ಅಥ್ಲೀಟ್ ಮುಂದೆ ಸೋಲಲು ಕಾರಣವೇನು?
ಬೆಳಗ್ಗೆ ತಾನೇ ಬೀಜಿಂಗ್ ಚಿನ್ನದ ಪದಕ ವಿಜೇತನನ್ನು ಸುಲಭವಾಗಿ ಸೋಲಿಸಿದ್ದ ಸುಶೀಲ್ ಗೆ ಯಾವ ಸಮಸ್ಯೆ ಕಾಡುತ್ತಿತ್ತು? ಫೈನಲ್ ನಲ್ಲಿ ಮಂಕು ಹಿಡಿದಂತೆ, ಚಲನೆ ಮರೆತಂತೆ ಸುಶೀಲ್ ಆಡಿದ್ದಾದರೂ ಏಕೆ? ಎಂಬ ಪ್ರಶ್ನೆಗಳು ಕಾಡುತ್ತಿದೆ.29 ವರ್ಷದ ದೆಹಲಿ ಮೂಲದ ಸುಶೀಲ್ ಕುಮಾರ್ ಅವರು ಜಪಾನಿನ ಸೈನ್ಯದ ಯೋಧ ಟಾಟ್ಸುಯಿರೊ ಯೋನೆಮಿಟ್ಸು ಅವರ ಮುಂದೆ ತಲೆ ಬಾಗಿದ್ದು ಏಕೆ ಎಂಬ ಪ್ರಶ್ನೆಗೆ ಸುಶೀಲ್ ಅವರ ಮ್ಯಾನೇಜರ್ ರಾಜ್ ಸಿಂಗ್ ಉತ್ತರ ನೀಡಿದ್ದಾರೆ.
ನೋವು ನುಂಗಿ ಕಣಕ್ಕಿಳಿದ ಪಟು: 'ಫೈನಲ್ ಪಂದ್ಯಕ್ಕೂ ಮುನ್ನ ಸುಶೀಲ್ ಅಸ್ವಸ್ಥರಾಗಿದ್ದರು. ಫೈನಲ್ ಗೆ ತಯಾರಾಗುತ್ತಿದ್ದ ಸುಶೀಲ್ ಅದೇನು ತಿಂದರು ಎಂಬುದು ಇನ್ನೂ ತಿಳಿಯುತ್ತಿಲ್ಲ. ಮೂರು ಬಾರಿ ವಾಂತಿ ಮಾಡಿಕೊಂಡರು. ನಿತ್ರಾಣರಾಗಿ ಗ್ಲುಕೋಸ್ ತೆಗೆದುಕೊಂಡು ಸುಧಾರಿಸಿಕೊಂಡರೂ ನಿರ್ಜಲೀಕರಣ(dehydration)ಕ್ಕೆ ಒಳಗಾಗಿ ಸಾಕಷ್ಟು ದೇಹ ತೂಕ ಕಳೆದುಕೊಂಡರು.
ಇದಲ್ಲದೆ ಸೆಮಿಫೈನಲ್ ನಲ್ಲಿ ಟಂಟಾರೋವ್ ವಿರುದ್ಧ 3-1 ರಲ್ಲಿ ಜಯ ಗಳಿಸಿದ್ದ ಸುಶೀಲ್ , ಅಖಾಡದಲ್ಲಿ ಸಾಕಷ್ಟು ಚುರುಕಾಗಿ ಹೆಜ್ಜೆ ಹಾಕಿದ್ದರು. ಸೆಮಿಸ್ ಗೆಲ್ಲುವ ಹುಮ್ಮಸ್ಸಿನಲ್ಲಿ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದರು.
ಒಂದು ಕಡೆ ಭುಜದ ನೋವು, ಇನ್ನೊಂದೆಡೆ ಹೊಟ್ಟೆನೋವು ಅನುಭವಿಸುತ್ತಿದ್ದ ಸುಶೀಲ್ ರನ್ನು ಜಪಾನಿನ ಯೋಧ ಸುಲಭವಾಗಿ ಸೋಲಿಸಿದ್ದರಲ್ಲಿ ಅಚ್ಚರಿ ಏನಿಲ್ಲ. ಒಂದೇ ದಿನ ಎಲ್ಲಾ ಪಂದ್ಯಗಳನ್ನು ಆಡುವ ಕಾರ್ಯಕ್ರಮ ಪಟ್ಟಿ ಕೂಡಾ ಸುಶೀಲ್ ಗೆ ಮುಳುವಾಗಿದೆ. 2 ನಿಮಿಷದ 2-3 ಅವಧಿಯ ಪಂದ್ಯಗಳಾದರೂ ತಯಾರಿಗೂ ಮುನ್ನ ಆಗುವ ಅವಾಂತರದಿಂದ ತಪ್ಪಿಸಿಕೊಳ್ಳಲು ಅವಕಾಶ ಇಲ್ಲದ್ದಂತಾಗಿದ್ದು ಭಾರತಕ್ಕೆ ಚಿನ್ನದ ಪದಕ ತಪ್ಪಿಸಿದೆ.
ಸುಶೀಲ್ ರನ್ನು ಹತ್ತಿರದಿಂದ ಕಂಡವರಿಗೆ ಫೈನಲ್ ನಲ್ಲಿ ಸುಶೀಲ್ ಹಾಕುತ್ತಿದ್ದ ತಪ್ಪು ಹೆಜ್ಜೆಗಳನ್ನು ಕಂಡು ಹಿಡಿಯುವುದು ಕಷ್ಟವಾಗಲಿಲ್ಲ. ದೈಹಿಕ ಅಸಮರ್ಥತೆ ಹೊಂದಿದ್ದ ಪಟು ಕಣಕ್ಕಿಳಿದು ಸ್ಪರ್ಧಿಸುವುದು ಕಷ್ಟ. ಅದರಲ್ಲೂ ಎರಡನೇ ಸುತ್ತಿನಲ್ಲಿ ಸುಶೀಲ್ ರನ್ನು ಜಪಾನ್ ಕುಸ್ತಿಪಟು ಭುಜದ ಮೇಲೆ ಹೊತ್ತುಕೊಂಡಿದ್ದು ನೋಡಿದರೆ, ಸುಶೀಲ್ ಯಾವ ಪರಿ ಮೈಮರೆತಿದ್ದರು ಎಂಬುದು ಸ್ಪಷ್ಟವಾಗುತ್ತದೆ.
ಇದಕ್ಕೂ ಸುಶೀಲ್ ಉಜ್ಬೆಕ್ ಪ್ರತಿಸ್ಪರ್ಧಿ ನವರುಜೊರ್ ಇಕ್ತಿಯೊರ್ ರನ್ನು 6-3 ಅಂತರದಲ್ಲಿ ಸೋಲಿಸಿದ್ದರು. ಪ್ರೀ ಕ್ವಾಟರ್ ಫೈನಲ್ ನಲ್ಲಿ ಬೀಜಿಂಗ್ 2008ರಲ್ಲಿ ಚಿನ್ನ ಗೆದ್ದಿದ್ದ ಸ್ಪರ್ಧಿಯನ್ನು ಸುಶೀಲ್ ಸುಲಭವಾಗಿ ಕೆಡವಿದ್ದರು ಹಾಗೂ ಟರ್ಕಿಯ ರಮಜಾನ್ ಸಹೀನ್ ಅವರನ್ನು 3-1 ಅಂತದಿಂದ ಸುಶೀಲ್ ಸೋಲಿಸಿದ್ದರು.
ಸುಶೀಲ್ ಸಾಧನೆ: ದೆಹಲಿ ಬಸ್ ಡ್ರೈವರ್ ದಿವಾನ್ ಸಿಂಗ್ ಪುತ್ರ ಶಾಖಾಹಾರಿ ಪೈಲ್ವಾನ್ ಸುಶೀಲ್ ಸಾಧನೆ ಅನುಕರಣೀಯ
* 2010 ಲಂಡನ್ ಒಲಿಂಪಿಕ್ಸ್ 66 ಕೆಜಿ ವಿಭಾಗ- ಬೆಳ್ಳಿ
* 2008 ಬೀಜಿಂಗ್ ಒಲಿಂಪಿಕ್ಸ್ 66 ಕೆಜಿ ವಿಭಾಗ-ಕಂಚು
* 2010 ಮಾಸ್ಕೋ ವಿಶ್ವ ಚಾಂಪಿಯನ್ ಶಿಪ್ 66 ಕೆಜಿ ವಿಭಾಗ-ಚಿನ್ನ
* 2010 ದೆಹಲಿ ಕಾಮನ್ ವೆಲ್ತ್ ಗೇಮ್ಸ್ -66 ಕೆಜಿ ವಿಭಾಗ-ಚಿನ್ನ
* 2009 ಜಲಂಧರ್ ಕಾಮನ್ ವೆಲ್ತ್ ಚಾಂಪಿಯನ್ ಶಿಪ್ -66 ಕೆಜಿ ವಿಭಾಗ-ಚಿನ್ನ
* 2007 ಲಂಡನ್ ಕಾಮನ್ ವೆಲ್ತ್ ಚಾಂಪಿಯನ್ ಶಿಪ್ -66 ಕೆಜಿ ವಿಭಾಗ-ಚಿನ್ನ
* 2005 ಕೇಪ್ ಟೌನ್ ಕಾಮನ್ ವೆಲ್ತ್ ಚಾಂಪಿಯನ್ ಶಿಪ್ -66 ಕೆಜಿ ವಿಭಾಗ-ಚಿನ್ನ
* 2003 ಲಂಡನ್ ಕಾಮನ್ ವೆಲ್ತ್ ಚಾಂಪಿಯನ್ ಶಿಪ್ -60 ಕೆಜಿ ವಿಭಾಗ-ಚಿನ್ನ
* 2010 ನವದೆಹಲಿ ಏಷ್ಯನ್ ಚಾಂಪಿಯನ್ ಶಿಪ್ -66 ಕೆಜಿ ವಿಭಾಗ-ಚಿನ್ನ
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ













Click it and Unblock the Notifications