ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ರೆಡ್ಡಿ ಅರ್ಜಿ, ಸುಪ್ರೀಂಕೋರ್ಟಿನಲ್ಲಿ ವಜಾ

By Mahesh
|
Google Oneindia Kannada News

YS Jagan Mohan Reddy
ನವದೆಹಲಿ, ಆ.9: ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ, ಕಡಪ ಸಂಸದ ವೈಎಸ್ ಜಗನ್ ಮೋಹನ್ ರೆಡ್ಡಿಗೆ ಮತ್ತೊಮ್ಮೆ ಹಿನ್ನೆಡೆ ಉಂಟಾಗಿದೆ. ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಜಗನ್ ಗೆ ನಿರಾಶೆಯಾಗಿದೆ. ಜಗನ್ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ (ಆ.9) ವಜಾಗೊಳಿಸಿದೆ.

ಈ ಮೂಲಕ ಜಗನ್ ಪರ ವಾದಿಸುತ್ತಿರುವ ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರಿಗೆ ತೀವ್ರ ಮುಖಭಂಗವಾಗಿದೆ.ರೆಡ್ಡಿ ಪರ ಸಮರ್ಥವಾಗಿ ವಾದ ಮಂಡಿಸಿದ ರಾಮ್ ಜೇಠ್ಮಲಾನಿ ಅವರು ಹಲವು ನಿಯಮಗಳನ್ನು ನ್ಯಾಯಲಯದ ಮುಂದೆ ಹಾಜರುಪಡಿಸಿದರು. ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ಕೂಡಾ ಹಿಂಪಡೆದಿರುವುದರಿಂದ ಜಗನ್ ಸದ್ಯಕ್ಕೆ ಜೈಲಲ್ಲೇ ನೆಲೆಸಬೇಕಾಗುತ್ತದೆ.

ಆದರೆ, ಅಫ್ತಾಬ್ ಆಲಂ ಹಾಗೂ ರಂಜನಾ ಪ್ರಕಾಶ್ ಅವರಿದ್ದ ನ್ಯಾಯಪೀಠ ಜಗನ್ ಅರ್ಜಿಯನ್ನು ವಜಾಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹೈಕೋರ್ಟ್ ಹಾಗೂ ಸಿಬಿಐ ಕೋರ್ಟಿನ ತೀರ್ಪನ್ನು ಪರಿಶೀಲಿಸಿದ ಸುಪ್ರೀಂ ನ್ಯಾಯಪೀಠ ಮೇಲ್ಕಂಡ ತೀರ್ಪು ನೀಡಿದೆ.

ಜಗನ್ ಅವರಿಗೆ ಜಾಮೀನು ನೀಡುವ ಬಗ್ಗೆ ಸಿಬಿಐ ಪ್ರತಿಕ್ರಿಯೆ ಕೇಳಿದ್ದು, ಸಿಬಿಐ ಆಕ್ಷೇಪಣಾ ಅರ್ಜಿ ಸಲ್ಲಿಸಿದರೆ ಜಗನ್ ಅವರಿಗೆ ಜಾಮೀನು ಸಿಗುವುದು ಕಷ್ಟವಾಗುತ್ತದೆ.

ಇಡಿ ಉರುಳು: ಈ ಪ್ರಕರಣದಲ್ಲಿ ಜಗನ್ ಅವರನ್ನು ಆರೋಪಿಯಾಗಿ ಕಾಣುತ್ತಿಲ್ಲ, ಶಂಕಿತರನ್ನಾಗಿ ವಿಚಾರಣೆ ಒಳಪಡಿಸಬಹುದಾಗಿದೆ ಎಂದು ಇಡಿ ತಂಡ ಹೇಳಿಕೆ ನೀಡಿತ್ತು. ಜಗತಿ ಪಬ್ಲಿಕೇಷನ್ ಪ್ರೈ ಲಿ ಗೆ ಸಂಬಂಧಿಸಿದಂತೆ ಜಗನ್ ಹೇಳಿಕೆ ಪಡೆಯುವ ಅವಶ್ಯಕತೆಯಿದೆ ಎಂದು ಕೋರ್ಟಿಗೆ ಇಡಿ ಮನವಿ ಸಲ್ಲಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡ ತನ್ನ ನಾಲ್ಕನೇ ಚಾರ್ಚ್ ಶೀಟ್ ಅನ್ನು ನ್ಯಾಯಲಯಕ್ಕೆ ಸಲ್ಲಿಸಲಾಗಿತ್ತು. ಜಗತಿ ಪಬ್ಲಿಕೇಷನ್ ಗೂ ನನಗೂ ಸಂಬಂಧವಿಲ್ಲ ಎಂದು ಜಗನ್ ಹೇಳಿದ್ದರೂ ಅವರನ್ನು ಆರೋಪಿ ನಂ.12 ಎಂದು ಹೆಸರಿಸಿ ಚಾರ್ಚ್ ಶೀಟ್ ಹಾಕಲಾಗಿದೆ. ಈ ಚಾರ್ಚ್ ಶೀಟ್ ಆಧಾರದ ಮೇಲೆ ಇಡಿ ತನ್ನ ತನಿಖೆ ಮುಂದುವರೆಸುವ ಸಾಧ್ಯತೆ ಇದ್ದು, ಜಗನ್ ಹೇಳಿಕೆ ದಾಖಲಿಸಲು ಬಯಸಿದೆ.

ಆದರೆ, ಜಗನ್ ಪರ ವಕೀಲರು ಸಮರ್ಥವಾಗಿ ವಾದ ಮಂಡಿಸಿ ಫೆ.1, 2011ರಲ್ಲೇ ಜಗತಿ ಪಬ್ಲಿಕೇಷನ್ ಗೆ ಜಗನ್ ರಾಜೀನಾಮೆ ನೀಡಿದ್ದಾರೆ. ಸಿಬಿಐ ಆರೋಪ ಪಟ್ಟಿಯಲ್ಲಿ ಆರೋಪಿ 12 ಆಗಿರುವುದಕ್ಕೆ ಸೂಕ್ತ ಸಾಕ್ಷಿ ಇಲ್ಲ. ಈ ದೋಷಾರೋಪಣ ಪಟ್ಟಿ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಸೆಕ್ಷನ್ 50(2) ಪ್ರಕಾರ, ಸಿಬಿಐ ನಿರ್ದೇಶನದಂತೆ ಜಗನ್ ಮೋಹನ್ ರೆಡ್ಡಿಗೆ ಸಮನ್ಸ್ ನೀಡಲಾಗಿದೆ. ನಾವು ಇನ್ನೂ ಜಗನ್ ಅವರನ್ನು ಆರೋಪಿಯಾಗಿ ಪರಿಗಣಿಸಿಲ್ಲ. ಈ ಪ್ರಕರಣ(ಮನಿ ಲಾಂಡ್ರಿಂಗ್, ಅಕ್ರಮ ಹಣ ಸಂಪಾದನೆ) ಹಿಂದಿನ ಸಂಪೂರ್ಣ ವಿವರ ಕಲೆ ಹಾಕಿ, ಸಂಚಿನ ರಹಸ್ಯ ಹೊರಕೆಡವಿದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.

ಜಗನ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಬಿಐ ಇದುವರೆವಿಗೂ ನಾಲ್ಕು ಆರೋಪಪಟ್ಟಿಗಳನ್ನು ದಾಖಲಿಸಿದೆ. ಮೊದಲ ಆರೋಪಪಟ್ಟಿಯಲ್ಲಿ ಜಗನ್ ಮತ್ತಿತರ 11 ಆರೋಪಿಗಳಿಗೆ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ ಉಳಿದೆರಡು ಆರೋಪಪಟ್ಟಿಗಳಲ್ಲಿ ಅವರಿಗೆ ಜಾಮೀನು ದೊರೆತಿಲ್ಲ.

ಸಿಬಿಐ ವಿಶೇಷ ನ್ಯಾಯಾಲಯ ಜಗನ್ ಮೋಹನ್ ರೆಡ್ಡಿ ಅವರನು ನ್ಯಾಯಾಂಗ ಬಂಧನವನ್ನು ಜು.18ರ ತನಕ ವಿಸ್ತರಿಸಿದೆ. ಜಗನ್ ಅವರ ಮೇಲೆ ಐಪಿಸಿ ಸೆಕ್ಷನ್ 120B, 409, 420 ಮತ್ತು 477A ಅನ್ವಯ ಕೇಸು ದಾಖಲಿಸಲಾಗಿದೆ.

English summary
The Supreme Court today(Aug.9) dismissed a petition of YSR Congress leader YS Jaganmohan Reddy challenging his arrest in a disproportionate assets case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X