ಶೂನಲ್ಲಿ ಭಗವಾನ್ ಬುದ್ಧನ ಚಿತ್ರ, ಐಕಾನ್ ಪ್ರಮಾದ

ಐಕಾನ್ ಕಂಪೆನಿಯ ಫೇಸ್ಬುಕ್ ಪುಟದಲ್ಲಿ ಬೌದ್ಧರು ಖಂಡನಾ ವಾಕ್ಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಆದರೆ, ಶೂ ತಯಾರಿಕಾ ಸಂಸ್ಥೆ ಐಕಾನ್ ಶೂಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
''ಬೌದ್ಧ ದೇವತೆಗಳ ಚಿತ್ರಗಳನ್ನು ಪರಮ ಪಾವನವೆಂದು ಪೂಜಿಸುವುದು ಬೌದ್ಧ ಧರ್ಮೀಯರ ಒಂದು ಮಹತ್ವದ ಸಂಪ್ರದಾಯವಾಗಿದೆ. ಪಾದರಕ್ಷೆಗಳಲ್ಲಿ ಅಂತಹ ಚಿತ್ರಗಳನ್ನು ಬರೆಯುವುದು ಬೌದ್ಧರಿಗೆ ಒಂದು ಮಹಾ ಅಪಮಾನವಾಗಿದೆ'' ಎಂದು ಇಂಟರ್ನ್ಯಾಶನಲ್ ಕ್ಯಾಂಪೇನ್ ಫಾರ್ ಟಿಬೆಟ್ನ ಬುಚುಂಗ್ ತ್ಸೆರಿಂಗ್ ಬರೆದಿದ್ದಾರೆ.
''ಭಗವಾನ್ ಬುದ್ಧರನ್ನು ಜಗತ್ತಿನಾದ್ಯಂತದ ಮಿಲಿಯಾಂತರ ಜನರು ಆರಾಧಿಸುತ್ತಾರೆ. ಆದುದರಿಂದ ಕಂಪೆನಿಯು ಮಾರಾಟ ಮಾಡಿರುವ ಬುದ್ಧನ ಚಿತ್ರದ ಎಲ್ಲ ಶೂಗಳನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಇಂತಹ ಉತ್ಪನ್ನಗಳ ಮಾರಾಟವನ್ನು ಕೂಡಲೇ ನಿಲ್ಲಿಸಬೇಕು.
ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಕೃತ್ಯದ ಬಗ್ಗೆ ಕಂಪೆನಿಯು ತನ್ನ ವೆಬ್ಸೈಟ್ನಲ್ಲಿ ಕೂಡಲೇ ಕ್ಷಮೆಯಾಚನೆಯನ್ನು ಪ್ರಕಟಿಸಬೇಕು ಎಂಬುದು ನನ್ನ ಆಗ್ರಹವಾಗಿದೆ'' ಎಂದು ಟಿಬೆಟ್ ಸಂಸತ್ತಿನ ಉತ್ತರ ಅಮೆರಿಕನ್ ಸದಸ್ಯ ತಾಹ್ಸಿ ನಾಮ್ಗ್ಯಾಲ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಪಾಲ್ ಡೆಸಾರ್ಟ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಐಕಾನ್ ಸಂಸ್ಥೆ 1999ರಲ್ಲಿ ಹಾಲಿವುಡ್ ಚಿತ್ರ ನಿರ್ಮಾಣಗಾರರೊಬ್ಬರಿಂದ ಸ್ಥಾಪಿತವಾಯಿತು. ಶೂ ಹಾಗೂ ಹ್ಯಾಂಡ್ ಬ್ಯಾಗ್ಸ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಐಕಾನ್ ಶೂನಲ್ಲಿ ಬಳಸಲ್ಪಡುವ ಚಿತ್ರಗಳನ್ನು ವಿವಿಧೆಡೆಗಳಿಂದ ಎರವಲು ಪಡೆಯಲಾಗುತ್ತದೆ. ನಂತರ ಈ ಚಿತ್ರಕಾರರಿಗೆ ಸಂಭಾವನೆ ನೀಡಲಾಗುತ್ತದೆ ಎಂದು ಫೇಸ್ ಬುಕ್ ಪುಟದಲ್ಲಿ ಹೇಳಲಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications