ಭಾರತದ ರೈಲುಗಳು ವಿಶ್ವದ ದೊಡ್ಡ ಟಾಯ್ಲೆಟ್ಟುಗಳು
ನವದೆಹಲಿ, ಜುಲೈ 27: 'ಭಾರತೀಯ ರೈಲ್ವೆಯು ವಿಶ್ವದ ಅತಿ ದೊಡ್ಡ ಪಾಯಖಾನೆ' ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಸಚಿವ ಜೈರಾಂ ರಮೇಶ್ ಬಣ್ಣಿಸಿದ್ದಾರೆ.

ರೈಲ್ವೆ- ಬೃಹತ್ತಾದ ಮೊಬೈಲ್ ಪಾಯಖಾನೆ: ಪರಿಸರ-ಸ್ನೇಹಿ ಟಾಯ್ಲೆಟ್ಟುಗಳ ಬಗ್ಗೆ ಒಡಂಬಡಿಕೆಗೆ ಸಹಿ ಹಾಕಿದ ಸಂದರ್ಭದಲ್ಲಿ ಭಾರತದ ಪಾಯಖಾನೆಗಳ ಸ್ಥಿತಿಗತಿಗಳ ಬಗ್ಗೆ ಅವರು ಈ ಷರಾ ಬರೆದರು. 'ಭಾರತದಲ್ಲಿ ನೈಮರ್ಲೀಕರಣ ಸಮಸ್ಯೆ ಸೃಷ್ಟಿಸುವ ಅತಿ ದೊಡ್ಡ ತಾಣ ಇದಾಗಿದೆ. ನಿಜಕ್ಕೂ ಇದು ವಿಶ್ವದ ಅತಿ ದೊಡ್ಡ 'ಬಯಲು ಪಾಯಖಾನೆ' ಆಗಿದೆ. 11 ದಶಲಕ್ಷ ಪ್ರಯಾಣಿಕರನ್ನು ಹೊತ್ತು ಸಂಚರಿಸುವ ಈ ಮೊಬೈಲ್ ಪಾಯಖಾನೆ ಬಗ್ಗೆ ನಮಗೆಲ್ಲ ಚೆನ್ನಾಗಿ ಗೊತ್ತು' ಎಂದು ಅವರು ವಿಮರ್ಶಿಸಿದರು.
'ಭಾರತದಲ್ಲಿ ಶೇ. 60ರಷ್ಟು ಬಯಲು ಪಾಯಖಾನೆ ನಡೆಯುತ್ತದೆ. ಹೆಚ್ಚು ಹೆಚ್ಚು ಜೈವಿಕ ಟಾಯ್ಲೆಟ್ಟುಗಳನ್ನು ಬಳಸುವುದಕ್ಕೆ ನಾವು ಒತ್ತು ನೀಡಬೇಕಾಗಿದೆ. ಮುಂದಿನ 2 ವರ್ಷಗಳಲ್ಲಿ ಹಿಂದುಳಿದ 300 ಗ್ರಾಮ ಪಂಚಾಯತ್ ಗಳಲ್ಲಿ 1 ಲಕ್ಷ ಜೈವಿಕ ಟಾಯ್ಲೆಟ್ಟುಗಳನ್ನು ಸ್ಥಾಪಿಸಲಾಗುವುದು. ಈ ಮಹತ್ಕಾರ್ಯಕ್ಕೆ 150 ಕೋಟಿ ರೂ. ಸುರಿಯಲಾಗುವುದು' ಎಂದು ಸಚಿವ ರಮೇಶ್ ಇದೇ ವೇಳೆ ಪ್ರಕಟಿಸಿದರು.
ಸದ್ಯಕ್ಕೆ 436 ಕೋಚ್ ಗಳಲ್ಲಿ ಜೈವಿಕ ಟಾಯ್ಲೆಟ್ಟುಗಳನ್ನು ಅಳವಡಿಸಲಾಗಿದೆ. ವಾರ್ಷಿಕ 4,000 ಕೋಚ್ ಗಳನ್ನು ಹೊಸದಾಗಿ ತಯಾರಿಸಲಾಗುತ್ತಿದೆ. ಅವುಗಳಿಗೆಲ್ಲ ಜೈವಿಕ ಟಾಯ್ಲೆಟ್ಟುಗಳನ್ನು ಕಡ್ಡಾಯವಾಗಿ ತೊಡಿಸಲಾಗುವುದು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾದ DRDO ಇದನ್ನು ಅಭಿವದ್ಧಿಪಡಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications