ಶಿವನಸಮುದ್ರ ಬಳಿ ತಲೆ ಎತ್ತಿದ ಸೌರ ವಿದ್ಯುತ್ ಘಟಕ

ಶಿವನಸಮುದ್ರ ಬಳಿ 5 ಮೆಗಾವ್ಯಾಟ್ ಸಾಮರ್ಥ್ಯದ ಪರಿಸರ-ಸ್ನೇಹಿ, ಮುಖ್ಯ ವಿದ್ಯುತ್ ಜಾಲದೊಂದಿಗೆ ಸಂಪರ್ಕ ಹೊಂದಿರುವ ಸೌರ ವಿದ್ಯುತ್ ಸ್ಥಾವರಕ್ಕೆ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಚ್ಇಎಲ್ ಚಾಲನೆ ನೀಡಿದೆ.
ಕೋಲಾರದ ಸೌರ ಘಟಕದ ನಂತರ ಶಿವನಸಮುದ್ರ ಸ್ಥಾವರವು ಕರ್ನಾಟಕದ ಮೊದಲ ಬೃಹತ್ ಸೌರ ವಿದ್ಯುತ್ ಸ್ಥಾವರವಾಗಿದೆ. ಬಿಎಚ್ಇಎಲ್ ಇದನ್ನು ಕರ್ನಾಟಕ ವಿದ್ಯುತ್ ನಿಗಮಕ್ಕಾಗಿ ಜಾರಿಗೊಳಿಸಿದೆ.
ಈ ಯೋಜನೆಯಲ್ಲಿ ಬಿಎಚ್ಇಎಲ್ ಕಾರ್ಯವ್ಯಾಪ್ತಿಯಲ್ಲಿ ಸೌರವಿದ್ಯುತ್ ಸ್ಥಾವರದ ವಿನ್ಯಾಸ, ಉತ್ಪಾದನೆ, ಸರಬರಾಜು, ಸ್ಥಾಪನೆ ಮತ್ತು ಕಾರ್ಯಾಚರಣೆ ಸೇರಿದೆ. ಅಲ್ಲದೆ, ಇನ್ನೂ 3 ವರ್ಷಗಳ ಅವಧಿಗೂ ಈ ಸೌರ ವಿದ್ಯುತ್ ಸ್ಥಾವರದ ಚಾಲನೆ, ನಿರ್ವಹಣೆ ಮತ್ತು ಸಂರಕ್ಷಣೆ ನೋಡಿಕೊಳ್ಳಲಿದೆ.
ಜೂನ್ನಿಂದಲೇ ಪ್ರಾಯೋಗಿಕ ಕಾರ್ಯಾರಂಭ ಮಾಡಿದ್ದ ಈ ಸೌರವಿದ್ಯುತ್ ಸ್ಥಾವರ ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿದೆ. ಸೂರ್ಯನ ಕಿರಣಗಳನ್ನು ಸೌರ ಪಟ್ಟಿಗಳಿಗೆ ಹಾಯಿಸಲಾಗುವುದು ಇದರಿಂದ ಉತ್ಪಾದಿಸಿದ ಡಿ.ಸಿ. ವಿದ್ಯುತ್ ಅನ್ನು ಇನ್ವರ್ಟರುಗಳ(ಸುಮಾರು 12 ಇನ್ವರ್ಟರ್ಸ್ 250KW/invertor) ಮೂಲಕ ಎಸಿ ವಿದ್ಯುತ್ತಾಗಿ ಪರಿವರ್ತನೆ ಮಾಡಲಾಗುವುದು, ಟ್ರಾನ್ಸ್ಫಾರ್ಮರ್ಗಳನ್ನು ಬಳಸಿ 66 ಕೆ.ವಿ. ಮುಖ್ಯ ವಿದ್ಯುತ್ ಜಾಲ(ಗ್ರಿಡ್) ಕ್ಕೆ ಹರಿಯುತ್ತಿದೆ.
ಕ್ರಿಸ್ಟಲಿನ್ ಸಿಲಿಕಾನ್ ತಂತ್ರಜ್ಞಾನ: ಈ ವಿದ್ಯುತ್ ಸ್ಥಾವರಕ್ಕೆ ಕ್ರಿಸ್ಟಲಿನ್ ಸಿಲಿಕಾನ್ ಸೌರ ವಿದ್ಯುತ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಈ ತಂತ್ರಜ್ಞಾನವು ವಿಶ್ವಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿದೆ. ವಿದ್ಯುತ್ ಸ್ಥಾವರವು ಸೌರ ಪಟ್ಟಿಗಳನ್ನು ಸಾಲು ಸಾಲಾಗಿ ಹೊಂದಿರುತ್ತದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯಳೇಸಂದ್ರ ಗ್ರಾಮದಲ್ಲಿ ದೇಶದಲ್ಲೇ ಪ್ರಪ್ರಥಮ ಸೌರಶಕ್ತಿ ವಿದ್ಯುತ್ ಸ್ಥಾವರವನ್ನು 2010ರಲ್ಲಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗಿತ್ತು.
ಮೊದಲ ಹಂತದಲ್ಲಿ 500 ಮೆಗಾವ್ಯಾಟ್, ದ್ವಿತೀಯ ಹಂತದಲ್ಲಿ 500 ಮೆಗಾ ವ್ಯಾಟ್ ಹಾಗೂ ಮೂರನೆ ಹಂತದಲ್ಲಿ 1000 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ.
2022ನೆ ಇಸವಿಯಲ್ಲಿ ದೇಶದಲ್ಲಿ 20 ಸಾವಿರ ಮೆಗಾ ವ್ಯಾಟ್ ಸೌರ ವಿದ್ದುತ್ ಉತ್ಪಾದನೆಯ ಗುರಿಯನ್ನು ಭಾರತ ಹೊಂದಲಾಗಿದೆ. 59 ಕೋಟಿ ರೂ. ವೆಚ್ಚದ ಯಳೇಸಂದ್ರದ ಸೌರವಿದ್ಯುತ್ ಸ್ಥಾವರದಲ್ಲಿ 13,330 ಪ್ಯಾನೆಲ್ ಗಳಿದ್ದು, ಪ್ರತಿ ಪ್ಯಾನೆಲ್ ಗಳು 230 ವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಪ್ರತಿ ದಿನ 15,000 ಯುನಿಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಈ ಘಟಕದ ಗುರಿಯಾಗಿದೆ.
ಇನ್ನಷ್ಟು ಘಟಕಗಳು: ಕೋಲಾರ, ಶಿವನಸಮುದ್ರ ನಂತರ ರಾಜ್ಯದ 10 ಕಡೆ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.ಹಾವೇರಿ, ಬಾಗಲಕೋಟೆ, ತುಮಕೂರು, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಈ ಘಟಕಗಳು ತಲೆ ಎತ್ತಲಿದೆ.
ಹಾವೇರಿಯ ಕಾಗಿನೆಲೆ, ಶಿಗ್ಗಾಂವಿ; ಬಾಗಲಕೋಟೆಯ ಕೂಡಲಸಂಗಮ; ಶಿವಮೊಗ್ಗದ ಶಿಕಾರಿಪುರ; ತುಮಕೂರಿನ ಮಧುಗಿರಿ ಹಾಗೂ ಮೈಸೂರು ಜಿಲ್ಲೆಯ ಸೂಕ್ತ ಸ್ಥಳದಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸಲಾಗುವುದು ಎಂದು ಕೆಪಿಸಿಎಲ್ ಪ್ರಕಟಿಸಿದೆ. ಪ್ರತಿ ಸೌರ ಘಟಕವು 10 MW ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುತ್ತದೆ.
ಜವಹರಲಾಲ್ ನೆಹರೂ ರಾಷ್ಟ್ರೀಯ ಸೌರ ಮಿಷನ್ ಅಡಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಕೆಪಿಸಿಎಲ್ ಹೇಳಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications