ಶಿವನಸಮುದ್ರ ಬಳಿ ತಲೆ ಎತ್ತಿದ ಸೌರ ವಿದ್ಯುತ್ ಘಟಕ

ಶಿವನಸಮುದ್ರ ಬಳಿ 5 ಮೆಗಾವ್ಯಾಟ್ ಸಾಮರ್ಥ್ಯದ ಪರಿಸರ-ಸ್ನೇಹಿ, ಮುಖ್ಯ ವಿದ್ಯುತ್ ಜಾಲದೊಂದಿಗೆ ಸಂಪರ್ಕ ಹೊಂದಿರುವ ಸೌರ ವಿದ್ಯುತ್ ಸ್ಥಾವರಕ್ಕೆ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಚ್ಇಎಲ್ ಚಾಲನೆ ನೀಡಿದೆ.
ಕೋಲಾರದ ಸೌರ ಘಟಕದ ನಂತರ ಶಿವನಸಮುದ್ರ ಸ್ಥಾವರವು ಕರ್ನಾಟಕದ ಮೊದಲ ಬೃಹತ್ ಸೌರ ವಿದ್ಯುತ್ ಸ್ಥಾವರವಾಗಿದೆ. ಬಿಎಚ್ಇಎಲ್ ಇದನ್ನು ಕರ್ನಾಟಕ ವಿದ್ಯುತ್ ನಿಗಮಕ್ಕಾಗಿ ಜಾರಿಗೊಳಿಸಿದೆ.
ಈ ಯೋಜನೆಯಲ್ಲಿ ಬಿಎಚ್ಇಎಲ್ ಕಾರ್ಯವ್ಯಾಪ್ತಿಯಲ್ಲಿ ಸೌರವಿದ್ಯುತ್ ಸ್ಥಾವರದ ವಿನ್ಯಾಸ, ಉತ್ಪಾದನೆ, ಸರಬರಾಜು, ಸ್ಥಾಪನೆ ಮತ್ತು ಕಾರ್ಯಾಚರಣೆ ಸೇರಿದೆ. ಅಲ್ಲದೆ, ಇನ್ನೂ 3 ವರ್ಷಗಳ ಅವಧಿಗೂ ಈ ಸೌರ ವಿದ್ಯುತ್ ಸ್ಥಾವರದ ಚಾಲನೆ, ನಿರ್ವಹಣೆ ಮತ್ತು ಸಂರಕ್ಷಣೆ ನೋಡಿಕೊಳ್ಳಲಿದೆ.
ಜೂನ್ನಿಂದಲೇ ಪ್ರಾಯೋಗಿಕ ಕಾರ್ಯಾರಂಭ ಮಾಡಿದ್ದ ಈ ಸೌರವಿದ್ಯುತ್ ಸ್ಥಾವರ ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿದೆ. ಸೂರ್ಯನ ಕಿರಣಗಳನ್ನು ಸೌರ ಪಟ್ಟಿಗಳಿಗೆ ಹಾಯಿಸಲಾಗುವುದು ಇದರಿಂದ ಉತ್ಪಾದಿಸಿದ ಡಿ.ಸಿ. ವಿದ್ಯುತ್ ಅನ್ನು ಇನ್ವರ್ಟರುಗಳ(ಸುಮಾರು 12 ಇನ್ವರ್ಟರ್ಸ್ 250KW/invertor) ಮೂಲಕ ಎಸಿ ವಿದ್ಯುತ್ತಾಗಿ ಪರಿವರ್ತನೆ ಮಾಡಲಾಗುವುದು, ಟ್ರಾನ್ಸ್ಫಾರ್ಮರ್ಗಳನ್ನು ಬಳಸಿ 66 ಕೆ.ವಿ. ಮುಖ್ಯ ವಿದ್ಯುತ್ ಜಾಲ(ಗ್ರಿಡ್) ಕ್ಕೆ ಹರಿಯುತ್ತಿದೆ.
ಕ್ರಿಸ್ಟಲಿನ್ ಸಿಲಿಕಾನ್ ತಂತ್ರಜ್ಞಾನ: ಈ ವಿದ್ಯುತ್ ಸ್ಥಾವರಕ್ಕೆ ಕ್ರಿಸ್ಟಲಿನ್ ಸಿಲಿಕಾನ್ ಸೌರ ವಿದ್ಯುತ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಈ ತಂತ್ರಜ್ಞಾನವು ವಿಶ್ವಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿದೆ. ವಿದ್ಯುತ್ ಸ್ಥಾವರವು ಸೌರ ಪಟ್ಟಿಗಳನ್ನು ಸಾಲು ಸಾಲಾಗಿ ಹೊಂದಿರುತ್ತದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯಳೇಸಂದ್ರ ಗ್ರಾಮದಲ್ಲಿ ದೇಶದಲ್ಲೇ ಪ್ರಪ್ರಥಮ ಸೌರಶಕ್ತಿ ವಿದ್ಯುತ್ ಸ್ಥಾವರವನ್ನು 2010ರಲ್ಲಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗಿತ್ತು.
ಮೊದಲ ಹಂತದಲ್ಲಿ 500 ಮೆಗಾವ್ಯಾಟ್, ದ್ವಿತೀಯ ಹಂತದಲ್ಲಿ 500 ಮೆಗಾ ವ್ಯಾಟ್ ಹಾಗೂ ಮೂರನೆ ಹಂತದಲ್ಲಿ 1000 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ.
2022ನೆ ಇಸವಿಯಲ್ಲಿ ದೇಶದಲ್ಲಿ 20 ಸಾವಿರ ಮೆಗಾ ವ್ಯಾಟ್ ಸೌರ ವಿದ್ದುತ್ ಉತ್ಪಾದನೆಯ ಗುರಿಯನ್ನು ಭಾರತ ಹೊಂದಲಾಗಿದೆ. 59 ಕೋಟಿ ರೂ. ವೆಚ್ಚದ ಯಳೇಸಂದ್ರದ ಸೌರವಿದ್ಯುತ್ ಸ್ಥಾವರದಲ್ಲಿ 13,330 ಪ್ಯಾನೆಲ್ ಗಳಿದ್ದು, ಪ್ರತಿ ಪ್ಯಾನೆಲ್ ಗಳು 230 ವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಪ್ರತಿ ದಿನ 15,000 ಯುನಿಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಈ ಘಟಕದ ಗುರಿಯಾಗಿದೆ.
ಇನ್ನಷ್ಟು ಘಟಕಗಳು: ಕೋಲಾರ, ಶಿವನಸಮುದ್ರ ನಂತರ ರಾಜ್ಯದ 10 ಕಡೆ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.ಹಾವೇರಿ, ಬಾಗಲಕೋಟೆ, ತುಮಕೂರು, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಈ ಘಟಕಗಳು ತಲೆ ಎತ್ತಲಿದೆ.
ಹಾವೇರಿಯ ಕಾಗಿನೆಲೆ, ಶಿಗ್ಗಾಂವಿ; ಬಾಗಲಕೋಟೆಯ ಕೂಡಲಸಂಗಮ; ಶಿವಮೊಗ್ಗದ ಶಿಕಾರಿಪುರ; ತುಮಕೂರಿನ ಮಧುಗಿರಿ ಹಾಗೂ ಮೈಸೂರು ಜಿಲ್ಲೆಯ ಸೂಕ್ತ ಸ್ಥಳದಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸಲಾಗುವುದು ಎಂದು ಕೆಪಿಸಿಎಲ್ ಪ್ರಕಟಿಸಿದೆ. ಪ್ರತಿ ಸೌರ ಘಟಕವು 10 MW ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುತ್ತದೆ.
ಜವಹರಲಾಲ್ ನೆಹರೂ ರಾಷ್ಟ್ರೀಯ ಸೌರ ಮಿಷನ್ ಅಡಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಕೆಪಿಸಿಎಲ್ ಹೇಳಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications