ಮುಂದಿನ ವಾರ ನಿಲೇಕಣಿ ಪುತ್ರಿ ಜಾಹ್ನವಿ ಮದುವೆ

ಜಾಹ್ನವಿ ಮತ್ತು ಶ್ರೇಯಚಂದ್ರ ಯೇಲ್ ಯೂನಿವರ್ಸಿಟಿಯಲ್ಲಿ ಸಹಪಾಠಿಗಳು. ಕಳೆದ ವರ್ಷ ಇವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು. ನಂದನ್ ನಿಲೇಕಣಿ ಅವರ ಸ್ವಗೃಹದಲ್ಲಿ ಹೆಚ್ಚೇನು ಆಡಂಬರವಿಲ್ಲದೆ ಮುಂದಿನ ವಾರದಲ್ಲಿ ಈ ಜೋಡಿ ಮದುವೆಯಾಗಲಿದೆ.
ಜಮ್ಷೆಡ್ ಪುರ ಮೂಲದ ಶ್ರೇಯಚಂದ್ರ ಶಾಲಾ ಶಿಕ್ಷಕಿ ರೀಟಾ ಮತ್ತು ಸಂಜಯ್ ಚಂದ್ರ ಅವರ ಸುಪುತ್ರ. ಸಂಜಯ್ ಟಾಟಾ ಸ್ಟೀಲ್ ಕಂಪನಿಯಲ್ಲಿದ್ದಾರೆ. ಅಂದಹಾಗೆ, ಜಾಹ್ನವಿ ನಿಲೇಕಣಿ ವ್ಯಾಲಿ ಸ್ಕೂಲಿನಲ್ಲಿ ವ್ಯಾಸಂಗ ಮಾಡಿದ್ದಾರೆ. 2010ರಲ್ಲಿ ಯೇಲ್ ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಮುಂದೆ ಹಾರ್ವರ್ಡ್ ಕೆನೆಡಿ ಸ್ಕೂಲಿನಲ್ಲಿ ಪಿಎಚ್. ಡಿ ಮಾಡಿದರು.
ಕುತೂಹಲದ ಸಂಗತಿಯೆಂದರೆ ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯಲ್ಲಿ ಅತಿ ಹೆಚ್ಚು ಷೇರು ಪಾಲು ಹೊಂದಿರುವವರು ಇದೇ ಜಾಹ್ನವಿ ನಿಲೇಕಣಿ. ಅವರ ಪಾಲು ಕೇವಲ ಶೇ. 0.29ರಷ್ಟು. ಆದರೆ ಅದರ ಮೌಲ್ಯ ಪ್ರಸಕ್ತ ಮಾರುಕಟ್ಟೆಯಲ್ಲಿ ಬರೋಬ್ಬರಿ 400 ಕೋಟಿ ರುಪಾಯಿ! ನಂದನ್-ರೋಹಿಣಿ ನಿಲೇಕಣಿ ಅವರಿಗೆ ನಿಹಾರ್ ಎಂಬ ಪುತ್ರನಿದ್ದು, ಆತ ಯೇಲ್ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಹಾರ್ವರ್ಡ್ ಕೆನೆಡಿ ಸ್ಕೂಲ್ ವ್ಯಾಸಂಗದಿಂದ ಒಂದು ವರ್ಷದ break ತೆಗೆದುಕೊಂಡಿರುವ ಜಾನು, ಮತ್ತೆ ಅಮೆರಿಕಕ್ಕೆ ಮರಳಲಿದ್ದಾರೆ. ಮದುಮಗ ಶ್ರೇಯಚಂದ್ರ ಸಹ ಅದೇ ಹಾರ್ವರ್ಡ್ ಕೆನೆಡಿ ಸ್ಕೂಲಿನಲ್ಲಿ ಎಂಬಿಎ ವ್ಯಾಸಂಗ ಮಾಡಲಿದ್ದಾರೆ.
ಜಾನುರನ್ನು ವರಿಸಲಿರುವ ಶ್ರೇಯಚಂದ್ರ ಬೆಂಗಳೂರು ಮೂಲದ ಕಂಪನಿಯಲ್ಲಿ ಒಂದಷ್ಟು ದಿನ ಕೆಲಸ ಮಾಡಿದ್ದಾರೆ. ಜಾನು, ತಮ್ಮ ತಾಯಿ ರೋಹಿಣಿ ನಿಲೇಕಣಿ ಅವರು ನಡೆಸುತ್ತಿರುವ ಅರ್ಘ್ಯಂ ಎಂಬ NGOನಲ್ಲಿ ಟ್ರಸ್ಟಿಯಾಗಿದ್ದಾರೆ. ಅರ್ಘ್ಯಂ NGO, ನೈರ್ಮಲ್ಯೀಕರಣ ಮತ್ತು ಕುಡಿಯುವ ನೀರು ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications