ಬಂಧನದ ಭೀತಿ: ಸೋಮಶೇಖರ ರೆಡ್ಡಿ ನಾಪತ್ತೆ
ಬಳ್ಳಾರಿ, ಜುಲೈ4: ಪೆದ್ದನ್ನ ಜನಾರ್ದನ ರೆಡ್ಡಿಗೆ ಜಾಮೀನು ದೊರಕಿಸಲು ಜಡ್ಜ್ ಪಟ್ಟಾಭಿ ರಾಮರಾವ್ ಗೆ ತಿನ್ನಿಸಬಾರದ್ದನ್ನು ತಿನ್ನಿಸಿದ ಆರೋಪಕ್ಕೆ ತುತ್ತಾಗಿರುವ ಕೆಎಂಎಫ್ ಗೋಪಾಲಕ ಸೋಮಶೇಖರ ರೆಡ್ಡಿ ಮತ್ತು ಕಂಪ್ಲಿ ಶಾಸಕ ಸುರೇಶ್ ಬಾಬು ಅವರ where abouts ಕಳೆದ 2-3 ದಿನದಿಂದ ಯಾರ ಕಣ್ಣು-ಕಿವಿಗೂ ಬಿದ್ದಿಲ್ಲ.

ಅತ್ತ, ಪ್ರಕರಣದಲ್ಲಿ KMF ಸೋಮಶೇಖರ ರೆಡ್ಡಿ ಪ್ರಧಾನ ಪಾತ್ರ ವಹಿಸಿರುವ ಬಗ್ಗೆ ಬಂಧಿತ ಆರೋಪಿ ರೌಡಿ ಶೀಟರ್ ಯಾದಗಿರಿ ರಾವ್ ಆಂಧ್ರದ ಭ್ರಷ್ಟಾಚಾರ ನಿಗ್ರಹ ದಳದ (ACB) ಮುಂದೆ ಸೋಮವಾರ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದೇ ಬಂತು ಇತ್ತ KMF ಸೋಮಶೇಖರ ಜಾಗ ಖಾಲಿ ಮಾಡಿದ್ದಾರೆ.
Headquarters ಬಳ್ಳಾರಿಯಲ್ಲಿ KMF ಸೋಮಶೇಖರ ರೆಡ್ಡಿ ಮೂರು ದಿನಗಳಿಂದ ಯಾರಿಗೂ ಕಾಣಿಸಿಕೊಂಡಿಲ್ಲ. ಮತ್ತು ಕೋಟ್ಯಂತಯರ ರು. ಲಂಚ ಸಾಗಿಸಲು ನೆರವಾದರೆ ಕಂಪ್ಲಿ ಬಾಬು ಸಹ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇಬ್ಬರ ಮೊಬೈಲುಗಳೂ ಸ್ಚಿಚ್ಡ್ ಆಫ್ ಆಗಿವೆ. ಮೂಲಗಳ ಪ್ರಕಾರ ಈ ಶಾಸಕದ್ವಯರನ್ನು ವಶಕ್ಕೆ ತೆಗೆದುಕೊಂಡಿರುವ ACB ಅಧಿಕಾರಿಗಳು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಓಬಳಾಪುರಂ ಅಕ್ರಮ ಗಣಿಗಾರಿಕೆ ಸಂಬಂಧ ಸಿಬಿಐ ಬಂಧನದಲ್ಲಿದ್ದ ಜನಾರ್ದನ ರೆಡ್ಡಿಯನ್ನು ಜೈಲಿನಿಂದ ಬಿಡಿಸಿಕೊಳ್ಳಲು ಜಡ್ಜ್ ಪಟ್ಟಾಭಿಗೆ ಕೋಟ್ಯಂತರ ರುಪಾಯಿ ಲಂಚ ಸಂದಾಯವಾದ ಪ್ರಕರಣದಲ್ಲಿ ಈಗಾಗಲೇ ಜಡ್ಜ್ ಪಟ್ಟಾಭಿ, ಆತನ ಪುತ್ರ ತಲ್ಲೂರಿ ರವಿಚಂದ್ರ, ನಿವೃತ್ತ ಜಡ್ಜ್ ಚಲಪತಿ ರಾವ್ ಹಾಗೂ ನಾಲ್ಕನೆಯವನಾಗಿ ರೌಡಿಶೀಟರ್ ಯಾದಗಿರಿ ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ.
ಇವರ ವಿಚಾರಣೆ ವೇಳೆ ಲಭ್ಯವಾದ ಮಹತ್ವದ ಮಾಹಿತಿಯನ್ನಾಧರಿಸಿ ಸೋಮಶೇಖರ ರೆಡ್ಡಿ ಮತ್ತು ಕಂಪ್ಲಿ ಬಾಬುರನ್ನು ACB ವಶಕ್ಕೆ ತೆಗೆದುಕೊಂಡಿದ್ದು, ಅವರ ಬಂಧನ ಕುರಿತು ಅಧಿಕೃತ ಪ್ರಕಟಣೆಯಷ್ಟೇ ಹೊರಬೀಳಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
ಬೇಲ್ ಡೀಲ್ ಗೆ ಕೊಟ್ಟಿರುವ 9.5 ಕೋಟಿ ರುಪಾಯಿ ಹಣವನ್ನು ಇವರಿಬ್ಬರೂ ತಮ್ಮ ವಾಹನಗಳಲ್ಲಿ ಆಂಧ್ರ ಪ್ರದೇಶಕ್ಕೆ ಸಾಗಿಸಿದ್ದರು. ಹಾಗೆಯೇ, ಡೀಲ್ ಕುದುರಿಸುವಲ್ಲಿ ಈರ್ವರೂ ಪ್ರಮುಖ ಪಾತ್ರವಹಿಸಿರುವ ಬಗ್ಗೆ ACBಗೆ ಸಾಕ್ಷ್ಯಾಧಾರಗಳು ಲಭಿಸಿವೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications