ಸೂಪರ್ ಮಾರಿಯೋ ಡಬ್ಬಲ್ ಡಿಚ್ಚಿಗೆ ಜರ್ಮನ್ ಶರಣು

ಮರಿಯೋ ಬಲೊಟೆಲ್ಲಿ ಆಕರ್ಷಕ ಆಟದ ನೆರವಿನಿಂದ ಸೋಲರಿಯದ ಸರದಾರರಾಗಿದ್ದ ಜರ್ಮನಿ ವಿರುದ್ಧ 2-1ರ ಗೆಲುವು ದಾಖಲಿಸಿಕೊಂಡ ಇಟಲಿ ಯುರೋ ಕಪ್ ನ ಫೈನಲಿಗೆ ಪ್ರವೇಶ ಪಡೆದಿದ್ದು, ಫೈನಲಿನಲ್ಲಿ ಸ್ಪೇನ್ ವಿರುದ್ಧ ಕಪ್ ಗಾಗಿ ಸೆಣಸಲಿದೆ.
ಜರ್ಮನಿಯ ದಾಳಿ ಹಾಗೂ ಇಟಲಿಯ ಖ್ಯಾತ ಸಿಸಿಲಿಯನ್ ಡಿಫೆನ್ಸ್ ನಡುವಿನ ಹೋರಾಟ ನೋಡಲು ಪ್ರೇಕ್ಷಕರನ್ನು ರಂಜಿಸಿದೆ.
ಬಲೊಟೆಲ್ಲಿ ಮೊದಲು ಹೆಡ್ಡರ್ ಮೂಲಕ ಇಟಲಿಗೆ ಮುನ್ನಡೆಯನ್ನು ಒದಗಿಸಿಕೊಟ್ಟರು. ಇದರ ಬಳಿಕ ಮತ್ತೊಂದು ಗೋಲು ಬಾರಿಸಿ ಜರ್ಮನಿಯನ್ನು ಮನೆಗೆ ಅಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇಟಲಿ ದ್ವಿತೀಯಾರ್ಧದಲ್ಲಿ ಮತ್ತಷ್ಟು ಅವಕಾಶಗಳನ್ನು ಪಡೆದುಕೊಂಡಿತ್ತು. ಆದರೆ ಗೋಲು ಬಾರಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಜರ್ಮನಿ ಫಾರ್ವರ್ಡ್ ಆಟಗಾರರು ಗೋಲು ಬಾರಿಸಲು ಸತತ ಪ್ರಯತ್ನ ಮಾಡಿದ್ದರಿಂದ ಇಟಲಿಗೆ ಹೆಚ್ಚಿನ ಅವಕಾಶ ಸಿಕ್ಕಿತು.
21 ವರ್ಷದ ಬಲೊಟೆಲ್ಲಿ 20ನೇ ನಿಮಿಷದಲ್ಲಿ ಹೆಡ್ಡರ್ ಮೂಲಕ ಇಟಲಿಗೆ ಮುನ್ನಡೆಯನ್ನು ಒದಗಿಸಿಕೊಟ್ಟರು. ಇದರ ಬಳಿಕ 36ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಜರ್ಮನಿಗೆ ಚೇತರಿಸಲಾರದಂತಹ ಹೊಡೆತ ನೀಡಿದರು.
ಜರ್ಸಿ ಬಿಚ್ಚಿ ಸಂಭ್ರಮಿಸಿ, ಹಳದಿ ಕಾರ್ಡ್ ಪಡೆದರು. ಕಸ್ಸಾನೋ, ಪಿರ್ಲೊ ಜೊತೆಯಾಟದಿಂದ ಮರಿಯೋ ಸೂಪರ್ ಆಟ ನೀಡಿದರು.
ಮೆಸಟ್ ಓಜಿಲ್ ಪೆನಾಲ್ಟಿಯಲ್ಲಿ ಬಾರಿಸಿದ ಗೋಲಿನಿಂದ ಜರ್ಮನಿ ತನ್ನ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತು. ಜರ್ಮನಿ ಸತತ ಎರಡನೇ ಸಲ ಮಹತ್ವದ ಟೂರ್ನಮೆಂಟ್ ನಿಂದ ಹೊರಬಿದ್ದಿದೆ.
ಈ ಟೂರ್ನಮೆಂಟ್ ನಲ್ಲಿ ಸೋಲನ್ನೇ ಕಾಣದ ಜರ್ಮನಿ ಇಟಲಿಯ ರಕ್ಷಣಾ ವಲಯವನ್ನು ಭೇದಿಸಲಾಗದೆ ಸೋಲುಂಡಿದೆ. ಈ ಸೋಲಿನಿಂದ ಮಹತ್ವದ ಟೂರ್ನಮೆಂಟ್ ನಲ್ಲಿ ಪ್ರಶಸ್ತಿ ಗೆಲ್ಲುವ ಜರ್ಮನಿಯ ಆಸೆಗೆ ಮತ್ತೊಮ್ಮೆ ಇಟಲಿ ತಣ್ಣೀರೆರಚಿದೆ.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications