ರು. 9498 ಕೋಟಿ ಬಿಬಿಎಂಪಿ ಬಜೆಟ್ ಮುಖ್ಯಾಂಶಗಳು
ಚುನಾವಣಾ ದೃಷ್ಟಿಯಿಂದ ಹೆಚ್ಚು ತೆರಿಗೆ ಇಲ್ಲದ ಜನಪರ ಬಜೆಟ್ ಮಂಡಿಸಲಾಗಿದೆ. ಬಜೆಟ್ ಗಾತ್ರ 9,498 ಕೋಟಿ ರು.ಗೂ ಅಧಿಕ ಗಾತ್ರದ ಬಜೆಟ್ ಅನ್ನು ಉಳಿತಾಯದ ಬಜೆಟ್, ಜನಸ್ನೇಹಿ ಬಜೆಟ್ ಎಂದು ಮೇಯರ್ ವೆಂಕಟೇಶ್ ಮೂರ್ತಿ ಕೊಂಡಾಡಿದ್ದಾರೆ.
ಗೃಹ ಸಚಿವ ಆರ್ ಅಶೋಕ್, ಮೇಯರ್ ಡಿ ವೆಂಕಟೇಶ ಮೂರ್ತಿ, ಆಡಳಿತ ಪಕ್ಷದ ನಾಯಕ ಎನ್ ನಾಗರಾಜ್, ಉಪ ಮೇಯರ್ ಎನ್ ಶ್ರೀನಿವಾಸ್ ಅವರು ಬಜೆಟ್ ಮಂಡನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಂಡಲ್ ಬಜೆಟ್: ಬಿಜೆಪಿ ಆಡಳಿತ ಮಂಡಿಸಿರುವ ಬಜೆಟ್ ಫುಲ್ ಬಂಡಲ್. ಯಾವುದೇ ಪಾರದರ್ಶಕತೆ ಇಲ್ಲದೆ ಕೇವಲ ಚುನಾವಣೆ ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದ ಬಜೆಟ್ ಆಗಿದೆ. ಇದರಿಂದ ಜನ ಸಾಮಾನ್ಯರಿಗೆ ಯಾವುದೆ ಪ್ರಯೋಜನವಿಲ್ಲ ಎಂದು ಕಾಂಗ್ರೆಸ್ ನಾಯಕ ಎಂಕೆ ಗುಣ ಶೇಖರ್ ಅಭಿಪ್ರಾಯಪಟ್ಟಿದ್ದಾರೆ.ಥಿತರಿದ್ದರು.
ಬೆಂಗಳೂರು
ಮಹಾನಗರ
ಪಾಲಿಕೆ
ಬಜೆಟ್
ಮುಖ್ಯಾಂಶಗಳು
ಇಂತಿದೆ:
*
ಜಯನಗರದಲ್ಲಿ
ಹೈಟೆಕ್
ಕ್ರೀಡಾಂಗಣ
ನಿರ್ಮಾಣಕ್ಕೆ
6
ಕೋಟಿ
ರು
ಅನುದಾನ
*
ತಳ್ಳುವ
ಗಾಡಿ
ಖರೀದಿ
ಮಾಡುವವರಿಗೆ
5
ಕೋಟಿ.
*
500
ಬಡ
ನೌಕರರಿಗೆ
ಸ್ವಾವಲಂಬಿಯಾಗಲು
5
ಕೋಟಿ
ರು
(ಹೊಸ
ಯೋಜನೆ)
*
ನಿರೋಧಕ
ಲಸಿಕೆಗಾಗಿ
5
ಕೋಟಿ
ರು
ಮೀಸಲು.
*
ವಾಜಪೇಯಿ
ಆರೋಗ್ಯ
ಶ್ರೀ
ಕಾರ್ಯಕ್ರಮ
ಮುಂದುವರಿಕೆಗೆ
20
ಕೋಟಿ
*
ಪ್ರತಿ
ವಲಯದಲ್ಲಿ
ಡಯಾಲಿಸಿಸ್
ಸೆಂಟರ್
ತೆರೆಯಲು
6
ಕೋಟಿ
*
ಹೆರಿಗೆ
ಮತ್ತು
ರೆಫ್ರಲ್
ಆಸ್ಪತ್ರೆಗೆ
ಬರುವ
ಗರ್ಭಿಣಿಯರಿಗೆ
ಉಚಿತ
ಅಲ್ಟ್ರಾ
ಸೌಂಡ್
ಸ್ಕ್ಯಾನಿಂಗ್
ಸೇವೆ
*
ಬಿಬಿಎಂಪಿ
ಹೊಸದಾಗಿ
ಸೇರ್ಪಡೆಗೊಂಡ
110
ಗ್ರಾಮಗಳಲ್ಲಿ
ಕುಡಿಯುವ
ನೀರು
ಮತ್ತು
ಬೀದಿ
ದೀಪ
ಅಳವಡಿಕೆಗೆ
25
ಲಕ್ಷ
*
ಕೆರೆಗಳ
ಒತ್ತುವರಿ
ತೆರವು
ಮತ್ತು
ಅಭಿವೃದ್ಧಿಗೆ
158
ಕೋಟಿ
*
ಹೊಸ
ವಲಯಗಳ
13
ರಸ್ತೆ
ಅಗಲೀಕರಣಕ್ಕೆ
60
ಕೋಟಿ
*
ಒಂದು
ಸಾವಿರ
ಕೋಟಿ
ರು.ಗಳ
ವಿಶೇಷ
ಯೋಜನೆಯಡಿ
ಸಾರ್ವಜನಿಕ
ಸಹಭಾಗಿತ್ವದಲ್ಲಿ
ಘನತ್ಯಾಜ್ಯ
ಘಟಕ,
ಮಾರುಕಟ್ಟೆ
ಸ್ವಯಂಚಾಲಿತ
ವಾಹನ
ನಿಲುಗಡೆ,
ಬಸ್
ತಂಗುದಾಣ,
ಕ್ರೀಡಾ
ಸಂಕೀರ್ಣ
ನಿರ್ಮಾಣ,
*
ವಾಹನ
ದಟ್ಟಣೆ
ಗಮನದಲ್ಲಿಟ್ಟುಕೊಂಡು
52.5
ಕಿ.ಮೀ
ಸಿಗ್ನಲ್
ಮುಕ್ತ
ಕಾರಿಡಾರ್
ನಿರ್ಮಾಣಕ್ಕೆ
426
ಕೋಟಿ
*
ಪಾಲಿಕೆ
ವ್ಯಾಪ್ತಿಯಲ್ಲಿ
3.75
ಲಕ್ಷ
ಸಸಿ
ನೆಡಲು
8
ಕೋಟಿ
*
ಬೆಂಗಳೂರು
8
ದಿಕ್ಕುಗಳಲ್ಲಿ
ಹೆಬ್ಬಾಗಿಲು
ನಿರ್ಮಾಣ
*
ಪಾಲಿಕೆಯ
ಆಸ್ತಿ
ಸರಂಕ್ಷಣೆಗೆ
10
ಕೋಟಿ
ರು
ಮೀಸಲು.
*
ಬೀದಿ
ನಾಯಿಗಳ
ರಕ್ಷಣೆಗಾಗಿ
1
ಲಕ್ಷ
ಬೀದಿ
ನಾಯಿಗಳಿಗೆ
ಸಂತಾನ
ಹರಣ
ಶಸ್ತ್ರ
ಚಿಕಿತ್ಸೆ.
*
ಆಸ್ತಿ
ತೆರಿಗೆ
ಸಂಗ್ರಹಣೆಗೆ
ಪ್ರತ್ಯೇಕ
ತಂತ್ರಾಂಶ
ಅಭಿವೃದ್ಧಿ
ಕೋಶ.
*
ಸಕಾಲ
ಯೋಜನೆಯಡಿ
ವ್ಯಾಪಾರಿ
ಅನುಮತಿ
ಪತ್ರ(trade
license)
ಪಡೆಯಲು
28
ವಿತರಣಾ
ಕೇಂದ್ರಗಳ
ಸ್ಥಾಪನೆ.
*
OFC
ಕೇಬಲ್
ಗಳ
ಅಳವಡಿಕೆಗೆ
ಶಾಶ್ವತ
ರಸ್ತೆ
ಸಂಖ್ಯೆ
ಕಡ್ಡಾಯ.
*
ಮಲ್ಲೇಶ್ವರಂನಲ್ಲಿ
ನೂತನ
ಡಾಟಾ
ಸೆಂಟರ್
ನಿರ್ಮಾಣ.
*
ಅವಶ್ಯವಿರುವ
10
ಕಡೆ
ಬಹುಮಹಡಿ
ವಾಹನ
ನಿಲ್ದಾಣ
ನಿರ್ಮಾಣಕ್ಕೆ
200
ಕೋಟಿ
*
ಪ್ರತಿ
ವಾರ್ಡಿನ
100
ಮಂದಿ
ಬಡವರಿಗೆ
ಅಡುಗೆ
ಅನಿಲ
ಸಂಪರ್ಕ
ಹಾಗೂ
ಸ್ಟವ್
ಗೆ
10
ಕೋಟಿ(ದಿವಂಗತ
ಸಚಿವ
ವಿಎಸ್
ಆಚಾರ್ಯ
ಅವರ
ಸ್ಮರಣೆಯಲ್ಲಿ
ಯೋಜನೆ)
*
ಮಹಿಳಾ
ಸದಸ್ಯರಿರುವ
ವಾರ್ಡ್
ಗಳಿಗೆ
ಸಾಮಾಜಿಕ
ಶೈಕ್ಷಣಿಕ
ಕಾರ್ಯಕ್ರಮಕ್ಕೆ
3.50
ಕೋಟಿ.
*
ಆಟೋರಿಕ್ಷಾ
ಚಾಲಕರಿಗೆ
ಹೊಸ
ಡಿಜಿಟಲ್
ಮೀಟರ್
ಅಳವಡಿಸಲು
ಸಾರಥಿ
ಹೆಸರಿನಲ್ಲಿ
ಹಣಕಾಸು
ಸಹಾಯ.