ಲಂಡನ್ ಒಲಿಂಪಿಕ್ಸ್ ಗೆ ಎರಡು ಟೆನಿಸ್ ತಂಡ

ಲಂಡನ್ ಒಲಿಂಪಿಕ್ಸ್ 2012 ಗೆ ಎರಡು ತಂಡಗಳನ್ನು ಕಳಿಸಲಾಗುತ್ತಿದೆ. ಲಿಯಾಂಡರ್ ಪೇಯಸ್ ಹಾಗೂ ಜಗದೀಶನ್ ವಿಷ್ಣುವರ್ಧನ್, ಮಹೇಸ್ ಭೂಪತಿ ಮತ್ತು ರೋಹನ್ ಬೋಪಣ್ಣ ಅವರನ್ನು ಕಳಿಸಲಾಗುತ್ತಿದೆ.
ಒಲಿಂಪಿಕ್ಸ್ ಗೆ ಕಳಿಸುವ ತಂಡ ಪ್ರಕಟಿಸಲು ಗುರುವಾರ(ಜೂ.21) ಕೊನೆ ದಿನಾಂಕವಾಗಿತ್ತು. ಲಿಯಾಂಡರ್ ಪೇಸ್ ಜೊತೆ ಡಬಲ್ಸ್ ಆಡಲು ಮಹೇಶ್ ಭೂಪತಿ ಹಾಗೂ ಬೋಪಣ್ಣ ನಿರಾಕಸಿದ್ದರಿಂದ ಸಮಸ್ಯೆ ಆರಂಭವಾಗಿತ್ತು.
ಸೋಮದೇವ್ ದೇವ್ ವರ್ಮನ್ ಆಡುವುದಾಗಿ ಪೇಸ್ ಹೇಳಿದ್ದರು. ಆದರೆ ಸೋಮದೇವ್ ಅವರು ಸಂಪೂರ್ಣವಾಗಿ ಫಿಟ್ ಆಗಿರದ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ಗೆ ಅವಕಾಶ ಸಿಕ್ಕಿದೆ. ಸಾನಿಯಾ ಮಿರ್ಜಾಗೆ ಒಂದು ವೇಳೆ ವೈಲ್ಡ್ ಸಿಕ್ಕಿದರೆ ಆಕೆ ಮಿಶ್ರ ಡಬಲ್ಸ್ ನಲ್ಲಿ ಪೇಸ್ ಜತೆ ಆಡಲಿದ್ದಾರೆ ಎಂದು ಎಐಟಿಎ ಹೇಳಿದೆ.
ಲಿಯಾಂಡರ್ ಹಾಗೂ ಮಹೇಶ್ ಭೂಪತಿ ಇಬ್ಬರು ಭಾರತದ ಶ್ರೇಷ್ಠ ಆಟಗಾರರು ಅವರ ಸೇವೆ ಅಗತ್ಯವಿದೆ. ಡೇವಿಡ್ ಕಪ್ ನಂತೆ ಒಲಿಂಪಿಕ್ಸ್ ನಲ್ಲೂ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ. ಸೋಮದೇವ್ ಅಲಭ್ಯತೆಯಿಂದ ವಿಷ್ಣುವರ್ಧನ್ ಗೆ ಸ್ಥಾನ ಕಲ್ಪಿಸಲಾಗಿದೆ ಎಂದು ಎಐಟಿಎ ಅಧ್ಯಕ್ಷ ಅನಿಲ್ ಖನ್ನ ಹೇಳಿದ್ದಾರೆ.
ಸಾನಿಯಾ ಮಿರ್ಜಾ ಅವರು ಫ್ರೆಂಚ್ ಓಪನ್ ವೇಳೆಯಲ್ಲಿ ಮಹೇಶ್ ಭೂಪತಿ ಜೊತೆ ಒಲಿಂಪಿಕ್ಸ್ ನಲ್ಲಿ ಆಡಲು ಬಯಸುವುದಾಗಿ ಹೇಳಿದ್ದರು. ಆದರೆ, ಲಿಯಾಂಡರ್ ಪೇಸ್ ಜೊತೆ ಆಡಲು ನಿರಾಕರಿಸಿಲ್ಲ. ಹೀಗಾಗಿ ಯಾರು ಲಭ್ಯ ಇರುತ್ತಾರೋ ನೋಡಬೇಕು ಎಂದು ಅನಿಲ್ ಖನ್ನ ತಿಳಿಸಿದರು.
ಲಿಯಾಂಡರ್ ಪೇಸ್ ಅವರು ಒಲಿಂಪಿಕ್ಸ್ ನಿಂದ ದೂರವುಳಿಯುವುದಾಗಿ ಹೇಳಿದ ಮೇಲೆ ಎಐಟಿಎ ಈ ಪರಿಹಾರ ಕಂಡು ಕೊಂಡಿದೆ. ಮಹೇಶ್ ಭೂಪತಿ ಹಾಗೂ ಬೋಪಣ್ಣ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲಾಗಿದೆ.
ಆದರೆ, ನಿಯಮ ಮೀರಿರುವ ಭೂಪತಿ ಹಾಗೂ ಬೋಪಣ್ಣ ಮೇಲೆ ಕ್ರಮ ಜರುಗಿಸುವ ಬಗ್ಗೆ ಲಂಡನ್ ಒಲಿಂಪಿಕ್ಸ್ ನಂತರ ನಿರ್ಧರಿಸಲಾಗುವುದು ಎಂದು ಖನ್ನ ಹೇಳಿದ್ದಾರೆ.
ಎಐಟಿಎಗೆ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಜೊತೆಯಾಟದ ಮೇಲೆ ನಂಬಿಕೆ ಇನ್ನೂ ಬಂದಿಲ್ಲ. ಅದರೆ, ಕ್ರೀಡಾಸಕ್ತಿಯಿಂದ ಎರಡು ತಂಡವನ್ನು ಕಳಿಸಲು ನಿರ್ಧರಿಸಲಾಗಿದೆ. ಪೇಸ್ ಅವರು ಯುವ ಆಟಗಾರ ವಿಷ್ಣುವರ್ಧನ್ ಅವರ ಜೊತೆ ಉತ್ತಮ ಆಟ ಪ್ರದರ್ಶಿಸುವ ನಿರೀಕ್ಷೆಯಿದೆ ಎಂದು ಅನಿಲ್ ಖನ್ನ ಭರವಸೆ ವ್ಯಕ್ತಪಡಿಸಿದರು.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications