ಕತಾರ್ : ಬೆಂಕಿಯ ಆರ್ಭಟಕ್ಕೆ13 ಮಕ್ಕಳು ಬಲಿ

ದೋಹಾದಲ್ಲಿರುವ ಅತ್ಯಂತ ವಿಸ್ತೃತವಾದ ಮಾಲ್ ಆದ ವಿಲ್ಲಾಜಿಯೊನಲ್ಲಿ ನಡೆದ ಈ ದುರಂತದಲ್ಲಿ ಕೆಲ ಮಕ್ಕಳು ಬೆಂಕಿಯ ನಾಲಗೆಗೆ ಸಿಕ್ಕು ಸಾವನ್ನಪ್ಪಿದ್ದು, ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ಅಂತರಿಕ ಸಚಿವ ಶೇಕ್ ಅಬ್ದುಲ್ಲಾ ಬಿನ್ ನಸೀಲ್ ಅಲ್ ಥಾನಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
2 ವರ್ಷ ವಯಸ್ಸಿನ ತ್ರಿವಳಿಗಳಾದ ಲಿಲ್ಲಿ, ಜಾಕ್ಸನ್ ಹಾಗೂ ವಿಲ್ಶೇರ್ ವೀಕೆಸ್ ಸಾವಿನ ಜೊತೆಗೆ ನಾಲ್ವರು ಸ್ಪಾನಿಷ್ ಮಕ್ಕಳು ಹಾಗೂ 3 ವರ್ಷದ ಫ್ರೆಂಚ್ ಮೂಲದ ಮಗು ಕೂಡಾ ಸಾವನ್ನಪ್ಪಿರುವುದು ದೃಢಪಟ್ಟಿದೆ. ಮಾಲ್ ಒಳ ಭಾಗದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದರಿಂದ ಸಾರ್ವಜನಿಕರು ಸುರಕ್ಷಿತವಾಗಿ ಹೊರ ಬರಲು ಸಾಧ್ಯವಾಗಲಿಲ್ಲ.
ಮೃತರಲ್ಲಿ ನಾಲ್ಕು ಜನ ಶಿಕ್ಷಕರು ಹಾಗೂ 2 ಸರ್ಕಾರಿ ಅಧಿಕಾರಿಗಳು ಇದ್ದಾರೆ. ಸುಮಾರು 17ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದೆ.
ಮೃತರಲ್ಲಿ ಸ್ಪೇನ್, ಜಪಾನ್, ಫಿಲಿಫೈನ್ಸ್ ಹಾಗೂ ಬೆನಿನ್ ಮೂಲದ ಮಕ್ಕಳು ಎಂದು ತಿಳಿದು ಬಂದಿದೆ. ವಿಲ್ಲಾಜಿಯೋ ಶಾಪಿಂಗ್ ಮಾಲ್ ನ 3 ಹಾಗೂ 4ನೇ ಗೇಟ್ ನ ಬೆಂಕಿ ಕಾಣಿಸಿಕೊಂಡಿತು. ಬೆಂಕಿಗಿಂತ ಹೆಚ್ಚಾಗಿ ದಟ್ಟವಾದ ಹೊಗೆ ಆವರಿಸಿದ್ದರಿಂದ ಮಾಲ್ ನಿಂದ ಹೊರ ಬೀಳಲು ಸಾಧ್ಯವಾಗದೆ ಅನೇಕರ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ.
ಜಾಗತಿಕವಾಗಿ ಇಂಧನ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸ್ಥಾನ ಹೊಂದಿರುವ ಕತಾರ್ ಶ್ರೀಮಂತ ರಾಷ್ಟ್ರವಾಗಿದೆ. ವಿಲ್ಲಾಜಿಯೋ ಮಾಲ್ 2006ರಲ್ಲಿ ನಿರ್ಮಿಸಲಾಯಿತು. ದೋಹಾದ ಅತ್ಯಂತ ಜನಪ್ರಿಯ ತಾಣಗಳಲ್ಲಿ ವಿಲ್ಲಾಜಿಯೋ ಶಾಪಿಂಗ್ ಮಾಲ್ ಕೂಡಾ ಒಂದು. ರಿಟೈಲ್ ಮಳಿಗೆಗಳು, ಫುಟ್ ಲಾಕರ್, ಪಿಜಾ ಹಟ್, ಸ್ಟಾರ್ ಬಕ್ಸ್ ಹಾಗೂ ಬ್ರಿಟಿಷ್ ಮಳಿಗೆಗಳಾದ ಮಾರ್ಕ್ಸ್ ಅಂಡ್ ಸ್ಪೆನ್ಸರ್ ಇಲ್ಲಿನ ಆಕರ್ಷಣೆಯಾಗಿದೆ.
ಗಲ್ಫ್ ರಾಷ್ಟ್ರ ಎಷ್ಟು ಸುರಕ್ಷಿತ?: 2022 ರ ಫುಟ್ಬಾಲ್ ವಿಶ್ವಕಪ್ ಆಯೋಜನೆಯ ಹೊಣೆ ಹೊತ್ತಿರುವ ಕತಾರ್ ದೇಶಕ್ಕೆ ಈ ಅಗ್ನಿ ದುರಂತ ಹಿನ್ನೆಡೆಯಾಗುವ ಸಾಧ್ಯತೆಯಿದೆ. ಮಾಲ್ ಗಳ ಸುರಕ್ಷಿತೆ ಬಗ್ಗೆ ಎಷ್ಟೇ ಗಮನ ಹರಿಸಿದರೂ ಮಂಗಳವಾರ ಕೂಡಾ ದೋಹಾದ ಎರಡು ಕಾಲೇಜುಗಳಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ವರದಿಯಾಗಿದೆ.
ಸಾಮಾನ್ಯವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಅಗ್ನಿ ಆಕಸ್ಮಿಕ ಕಡಿಮೆ ಎನ್ನಬಹುದು. ರಕ್ಷಣಾ ಸಚಿವಾಲಯದ ಇತ್ತೀಚೆಗೆ ತನ್ನ ನಾಗರೀಕರಿಗೆ ಸಂದೇಶವನ್ನು ಕಳಿಸಿದ್ದು, ಕಾರು ಹೊಂದಿರುವವರು ಫುಲ್ ಟ್ಯಾಂಕ್ ಇಂಧನ ಭರಿಸದಿರುವಂತೆ ವಿನಂತಿಸಿಕೊಂಡಿದೆ. ಮೇ ನಲ್ಲಿ 55 ಡಿಗ್ರಿ ಸೆ. ನಿಂದ 65 ಡಿ.ಸೆ ತನಕ ತಾಪಮಾನದಲ್ಲಿ ಏರಿಕೆಯಾಗುವುದರಿಂದ ಪೆಟ್ರೋಲ್ ತುಂಬಿದ ಟ್ಯಾಂಕ್ ಹೊಂದಿದ್ದರೆ ಬೆಂಕಿ ತಗುಲುವ ಅಪಾಯವಿರುತ್ತದೆ ಎಂದು ಎಲ್ಲರಿಗೂ ಮೆಸೇಜ್ ಕಳಿಸಲಾಗಿದೆ.
ಕತಾರ್ ಗಾಂಧಿ ಲಿಂಕ್: ಭಾರತ ಮೂಲದ ಕಲಾವಿದ ಸುಬೋಧ್ ಗುಪ್ತ ಅವರು ಗಾಂಧೀಜಿ ಅವರ ಅಹಿಂಸಾ ತತ್ತ್ವ ಸಾರುವ ಮೂರು ಕೋತಿಗಳ ಪ್ರತಿಕೃತಿಯನ್ನು ದೋಹಾದ ಸಾಂಸ್ಕೃತಿಕ ಗ್ರಾಮದಲ್ಲಿ ಮಂಗಳವಾರ(ಮೇ.29) ಸ್ಥಾಪಿಸಲಾಯಿತು. 'ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ ಹಾಗೂ ಕೆಟ್ಟದ್ದನ್ನು ಮಾತಾಡಬೇಡ' ಎಂಬ ಸಂದೇಶವನ್ನು ಈ ಮೂರು ಕೋತಿಗಳು ಸಾರುತ್ತದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications