ತಿರುಮಲ ದೇವಸ್ಥಾನದಲ್ಲಿ ಕಾಲ್ತುಳಿತ : 10 ಭಕ್ತರಿಗೆ ಗಾಯ
ಬೇಸಿಗೆ ರಜೆಯಾದ್ದರಿಂದ ವಾರಾಂತ್ಯದಲ್ಲಿ ತಿರುಮಲದಲ್ಲಿ 1 ಲಕ್ಷಕ್ಕೂ ಹೆಚ್ಚು ಜಮಾಯಿಸಿದ್ದರು. ಆದರೆ, ತಿರುಪತಿ ತಿರುಮಲ ದೇವಸ್ಥಾನಂನ ಅಜಾಗರೂಕತೆಯಿಂದಾಗಿ ನೂಕುನುಗ್ಗಲು ಸಂಭವಿಸಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾರದ ಎಲ್ಲಾ ದಿನಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರಾದರೂ ಇಂದು ಶನಿವಾರವಾದ್ದರಿಂದ ದಾಖಲೆ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಸಾಮಾನ್ಯ ದರ್ಶನಕ್ಕೆ ಭಕ್ತರಿಗೆ 24 ಗಂಟೆ ತಗಲುತ್ತಿದ್ದು, ವಿಶೇಷ ದರ್ಶನಕ್ಕೆ ನಿಂತವರಿಗೆ ಸುಮಾರು 7 ಗಂಟೆ ತಲಗುತ್ತಿದೆ. ಭಕ್ತರಿಗೆ ವಾಸಕ್ಕೆ ಜಾಗವೂ ಸಿಗುತ್ತಿಲ್ಲ.
ವಿಶೇಷ ಪೂಜೆ ಏರ್ಪಡಿಸಿದ ಸಂದರ್ಭದಲ್ಲಿ ಟಿಟಿಡಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಮತ್ತು ನೂಕುನುಗ್ಗಲಾಗದಂತೆ ಪೊಲೀಸರಿಂದ ರಕ್ಷಣೆ ನೀಡಬೇಕು ಎಂಬುದು ಭಕ್ತರು ಹೇಳುತ್ತಿದ್ದಾರೆ. ಒಂದು ವರ್ಷಕ್ಕಿಂತ ಕಡಿಮೆ ಮಕ್ಕಳ ಪಾಲಕರಿಗೆ ಮತ್ತು ವಯಸ್ಸಾದವರಿಗೆ ವಿಶೇಷ ವ್ಯವಸ್ಥೆ ಇರುತ್ತದಾರದೂ ಗರ್ಭಗುಡಿ ಪ್ರವೇಶಿಸುವಾಗ ಎಲ್ಲ ಭಕ್ತಾದಿಗಳು ಇಕ್ಕಟ್ಟಾದ ಸ್ಥಳದಲ್ಲಿ ಬಂದು ಸೇರುತ್ತಾರೆ. ಅವಘಡಗಳಾಗುವುದು ಈ ಜಾಗದಲ್ಲಿಯೇ.