Get Updates
Get notified of breaking news, exclusive insights, and must-see stories!

ನೀವು ಭ್ರಷ್ಟಾಚಾರ ವಿರೋಧಿಯಾಗಿದ್ದರೆ ಮಲ್ಲೇಶ್ವರಕ್ಕೆ ಬನ್ನಿ

Meet Santosh Hegde in Malleshwaram
ಬೆಂಗಳೂರು, ಮೇ. 25 : ಮತ ಚಲಾಯಿಸುವುದು ನಿಮ್ಮ ಜನ್ಮಸಿದ್ಧ ಹಕ್ಕು ಎಂದು ನೀವು ತಿಳಿಸಿದಿದ್ದರೆ, ಸೂಕ್ತವಾದ ಅಭ್ಯರ್ಥಿಯನ್ನು ಗೆಲ್ಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ನಿಮಗೆ ಅನಿಸಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಿಮಗೆ ನಂಬಿಕೆಯಿದ್ದರೆ ಶುಕ್ರವಾರ ಸಂಜೆ ಮಲ್ಲೇಶ್ವರಕ್ಕೆ ಬನ್ನಿ. ಅಲ್ಲಿ ನಿಮಗಾಗಿ ನ್ಯಾ. ಸಂತೋಷ್ ಹೆಗ್ಡೆ ಕಾಯುತ್ತಿರುತ್ತಾರೆ.

ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರಿರುವ, ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆಯವರು ನಾಗರಿಕರನ್ನು ಖುದ್ದಾಗಿ ಭೇಟಿ ಮಾಡಿ, ಜೂನ್ 10ರಂದು ನಡೆಯಲಿರುವ ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ 'ಭ್ರಷ್ಟಾಚಾರ ವಿರೋಧಿ' ಅಭ್ಯರ್ಥಿಗೆ ಮತ ಹಾಕಬೇಕೆಂದು ಕರೆ ನೀಡಲಿದ್ದಾರೆ.

'ನ್ಯಾಯದ ಹಾದಿಯಲ್ಲಿ ನಡೆಯಿರಿ' ಎಂಬ ಅಭಿಯಾನವನ್ನು ಸಂತೋಷ್ ಹೆಗ್ಡೆಯವರು ಬೆಂಗಳೂರು ನಗರದ ಉದ್ದಗಲಕ್ಕೂ ಕೊಂಡೊಯ್ಯುತ್ತಿದ್ದಾರೆ. ಮೊದಲಿಗೆ ಮಲ್ಲೇಶ್ವರ 17ನೇ ಕ್ರಾಸ್‌ನಲ್ಲಿರುವ 'ಭೂಮಿಕಾ'ದಲ್ಲಿ ಸಂಜೆ 5.30ಕ್ಕೆ ಮತದಾರರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದರ ನೇತೃತ್ವವನ್ನು ಪರಸರ ಹೋರಾಟಗಾರ್ತಿ ಡಾ. ಮೀನಾಕ್ಷಿ ಭರತ್ ಅವರು ವಹಿಸುತ್ತಿದ್ದಾರೆ.

ಇದರ ನಂತರ ಸಂಜೆ 7 ಗಂಟೆ ಹೊತ್ತಿಗೆ ರಾಜಾಜಿನಗರದ ಪಶ್ಚಿಮ ಕಾರ್ಡ್ ರಸ್ತೆಯ ಎರಡನೇ ಹಂತದಲ್ಲಿರುವ ಡಾ. ಅಂಬೇಡ್ಕರ್ ಕಾಲೇಜ್ ಆಫ್ ಎಜ್ಯುಕೇಷನ್‌ನಲ್ಲಿ ನಾಗರಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಭ್ರಷ್ಟಾಚಾರದ ವಿರುದ್ಧ ತಮ್ಮ ಅಭಿಯಾನವನ್ನು ಮನೆಮನೆಗೂ ಕೊಂಡೊಯ್ಯಲಿದ್ದಾರೆ. ನೀವು ಭ್ರಷ್ಟಾಚಾರದ ಕಟ್ಟಾ ವಿರೋಧಿಯಾಗಿದ್ದರೆ ಖಂಡಿತ ಬನ್ನಿ ಎಂದು ಆಯೋಜಕರು ನಾಗರಿಕರನ್ನು ಕಳಕಳಿಯಿಂದ ಕೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+