ಬ್ರಾಹ್ಮಣ ಹುಡುಗನ ವೀರ್ಯಕ್ಕೆ ಭಾರೀ ಬೇಡಿಕೆ
ಆ ಗಂಡಸು ಥೇಟ್ ತನ್ನ ಗಂಡನಂತಯೇ ಇರಬೇಕು, ಗಂಡನಿಗಿಂದ ಎತ್ತರ ಇರದಿದ್ದರೂ ಪರವಾಗಿಲ್ಲ, ಗಂಡನಿಗಿಂತ ಕರ್ರಗೆ ಇರಬಾರದು, ಮೈಕಟ್ಟು ಹೀಗೇ ಇರಬೇಕು, ಆ ವ್ಯಕ್ತಿಗೆ ಯಾವುದೇ ರೋಗರುಜಿನಗಳು ಇರಬಾರದು, ಅತ್ಯಂತ ಆರೋಗ್ಯವಂತನಾಗಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಬ್ರಾಹ್ಮಣನಾಗಿರಬೇಕು!
ತಕ್ಕಳ್ಳಪ್ಪ. ಈ ಬೇಡಿಕೆಗಳೆಲ್ಲ ಮದುವೆಯಾಗಲು ಸಿದ್ಧವಾಗಿರುವ ಬ್ರಾಹ್ಮಣ ವಧು ಅಥವಾ ಅವರ ಮನೆಯವರದಲ್ಲ. ವೀರ್ಯದ ಕೊರತೆಯಿಂದಾಗಿ ಮಡಿಲಲ್ಲಿ ಮಗುವನ್ನು ತುಂಬಿಕೊಳ್ಳಲು ಸಾಧ್ಯವಾಗದ, ಅಮ್ಮಂದಿರಾಗಲು ಕಾತುರದಿಂದಿರುವ ಮಹಿಳೆಯರನೇಕರ ಬೇಡಿಕೆಗಳು.
ಇವು ಮಗುವನ್ನು ಪಡೆಯಬಯಸುವ ದಂಪತಿಗಳ ಬೇಡಿಕೆಗಳಾದರೆ, ವೀರ್ಯ ದಾನ ಮಾಡಲು ಸಿದ್ಧರಾಗಿರುವ ವೀರರ ಕಥೆ ಏನು ಹೇಳೋಣ. ದಾನ ಮಾಡಿದ ವೀರ್ಯ ಪರೀಕ್ಷೆಗೊಳಗಾಗಬೇಕು, ಪರೀಕ್ಷೆ ಪಾಸಾದರೆ ಮೊಬೈಲ್ ಬಿಲ್ ಕಟ್ಟಲು ಪುಡಿಗಾಸು, ನಪಾಸಾದರೆ ಜೀವನಪರ್ಯಂತ ಕೀಳರಿಮೆ ಅನುಭವಿಸಬೇಕಾಗುತ್ತದೆ. [ಬೈಗುಳಕ್ಕೆ ಬ್ರಾಹ್ಮಣ ಮಾತ್ರ ಗುರಿ, ಇದ್ಯಾವ ನ್ಯಾಯರಿ?]

ಒಂದು ಘಟನೆಯಲ್ಲಿ, ವೀರ್ಯ ದಾನ ಮಾಡಿದ್ದು ಬಹಿರಂಗವಾಗಿ, ಗಂಡ ತನಗೆ ಮೋಸ ಮಾಡಿದ್ದಾನೆಂದು ಆರೋಪಿಸಿ ಹೆಂಡತಿ ಗಂಡನಿಗೆ ವಿಚ್ಛೇದನ ನೀಡುವ ಹಂತಕ್ಕೆ ಹೋಗಿತ್ತು. ಕೊನೆಗೆ ಅದರ ಹಿಂದಿನ ಮರ್ಮ ತಿಳಿದು, ಆಕೆ ಸಮಾಧಾನಗೊಂಡರೂ ಆ ವೀರ್ಯದಿಂದ ಹುಟ್ಟಿದ ಮಕ್ಕಳನ್ನೆಲ್ಲ ತಂದು ಸಾಕಿರಿ ಎಂಬ ಅಸಾಧ್ಯವಾದ ಬೇಡಿಕೆಯನ್ನು ಇಟ್ಟಿದ್ದಳು.
ಇನ್ನೂ ವಿಚಿತ್ರ ವಿಚಿತ್ರ ಬೇಡಿಕೆಗಳೂ ವೈದ್ಯರ ಬಳಿ ಬಂದಿವೆ. ಮಕ್ಕಳನ್ನು ಅಪೇಕ್ಷಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ದಂಪತಿಗಳು, ವೀರ್ಯವಂತ 5 ಅಡಿ 10 ಅಂಗುಲವೇ ಎತ್ತರಿರಬೇಕು, ಬೆಳ್ಳಗಿರಬೇಕು, ಕಣ್ಣು ಕಂದು ಬಣ್ಣದ್ದಿರಬೇಕು ಮತ್ತು ನೋಡಲು ಗಂಡನಂತೆಯೇ ಕಾಣಿಸಬೇಕು ಎಂಬ ಬೇಡಿಕೆ ಇಟ್ಟಿದ್ದರಂತೆ. ಕೊನೆಗೆ ಅಂಥದೇ ವ್ಯಕ್ತಿಯನ್ನು ಹುಡುಕಿ ಆತನಿಂದ ವೀರ್ಯವನ್ನು ಪಡೆಯಲಾಯಿತು.
ಇಂತಹ ಬೇಡಿಕೆಗಳು ವೀರ್ಯ ದಾನ ಮಾಡುವವರನ್ನು ಮಾತ್ರವಲ್ಲ ವೀರ್ಯದ ಬ್ಯಾಂಕ್ ಸ್ಥಾಪಿಸಿರುವ ಸಂಸ್ಥೆಗಳನ್ನು ದ್ವಂದ್ವದಲ್ಲಿ ಸಿಲುಕಿಸಿವೆ. ದಾನ ಮಾಡುವವರ ಜಾತಿಯನ್ನು ಬಹಿರಂಗ ಪಡಿಸುವುದು ಅನೈತಿಕ, ಕಾನೂನಿಗೆ ವಿರುದ್ಧವಾಗಿದ್ದರೂ ದಾನ ಪಡೆಯುವವರು ಇಂತಹ ವಿವರಗಳನ್ನು ಗಂಟುಬಿದ್ದು ಕೇಳುತ್ತಾರೆ. ಕೆಲವರು ಐಐಟಿ ಮತ್ತು ಐಐಎಂನಲ್ಲಿ ಓದುತ್ತಿರುವ ವಿದ್ಯಾರ್ಥಿ ಅಥವಾ ಓದಿದ ವ್ಯಕ್ತಿಗಳ ವೀರ್ಯ ಬೇಡುತ್ತಾರಂತೆ.
ಇನ್ನೂ ಕೆಲವೊಬ್ಬರಿರುತ್ತಾರೆ. ವೀರ್ಯ ದಾನ ಮಾಡುವ ವ್ಯಕ್ತಿ ಪೇಜ್ 3ಗೆ ಸೂಕ್ತವಾದಂತಹ ವ್ಯಕ್ತಿಯಾಗಿರಬೇಕು. ಅವರ ರಕ್ತದ ಗುಂಪು ಇಂತಹುದೇ ಇರಬೇಕು ಅಂತ ಕೇಳುವವರು ಕೆಲವರಾದರೆ, ಜಾನ್ ಅಬ್ರಹಾಂ, ಇಮ್ರಾನ್ ಹಶ್ಮಿ, ಸಲ್ಮಾನ್ ಖಾನ್ ಮುಂತಾದವರ ಪಟ್ಟಿ ಹಿಡಿದುಕೊಂಡು ಬರುವವರು ಕೆಲವರು. ಇಂತಹ ವೀರ್ಯ ಪಡೆಯಲು ಎಷ್ಟು ಬೇಕಾದರೂ ದುಡ್ಡು ಬಿಸಾಕಲು ಅವರು ರೆಡಿಯಾಗಿರುತ್ತಾರೆ. ಇಂದು ವೀರ್ಯ ದಾನ ಮಾಡುವುದು ತಮಾಷೆ ಸಂಗತಿಯಾಗಿ ಉಳಿದಿಲ್ಲ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications