ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀನಾಮೆ ಕೊಡ್ತೀನಿ ಬನ್ನಿ; ಬೋಪಯ್ಯಾಗೆ ಬುಲಾವ್

By Srinath
|
Google Oneindia Kannada News

bs-yeddyurappa-asks-bopaiah-to-be-in-bangalore
ಬೆಂಗಳೂರು, ಮೇ 14: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷ ತೊರೆಯುವುದು ಗ್ಯಾರಂಟಿಯಾಗಿದೆ. ಆ ಪ್ರಯತ್ನವಾಗಿ ರಾಜೀನಾಮೆ ಪರ್ವಕ್ಕೆ ಚಾಲನೆ ನೀಡಲು ನಿರ್ಧರಸಿದ್ದಾರೆ. ಮೊದಲು ತಾವೊಬ್ಬರೇ ರಾಜೀನಾಮೆ ನೀಡುವ ಕಾರ್ಯತಂತ್ರವನ್ನು ಅವರು ರೂಪಿಸಿದ್ದಾರೆ. ಹಾಗಾಗಿ,

ಕೆಲವೇ ಕ್ಷಣಗಳಲ್ಲಿ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ತಕ್ಷಣ ನೀವು ಬೆಂಗಳೂರಿಗೆ ಬನ್ನಿ ಎಂದು ಯಡಿಯೂರಪ್ಪ ಅವರು ಸ್ಪೀಕರ್ ಕೆಜಿ ಬೋಪಯ್ಯ ಅವರಿಗೆ ಯಡಿಯೂರಪ್ಪ ಅವರು ಆಗ್ರಹ ಪೂರ್ವಕ ಮನವಿ ಮಾಡಿದ್ದಾರೆ. ಇಲ್ಲವಾದಲ್ಲಿ ಅಂದರೆ ಸಂಜೆ 4 ಗಂಟೆಯೊಳಗಾಗಿ ನೀವು ಬೆಂಗಳೂರಿಗೆ ಬರದೇ ಇದ್ದರೆ ನಾನೇ ಮಡಿಕೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂಬ ಬೆದರಿಕೆಯನ್ನು ಹಾಕಿದ್ದಾರೆ.

ಗಮನಾರ್ಹವೆಂದರೆ, ಬೋಪಯ್ಯ ಅವರು ಪ್ರಸ್ತುತ, ಸ್ವಕ್ಷೇತ್ರವಾದ ಪೊನ್ನಂಪೇಟೆಯಲ್ಲಿ ಬಿಡಾರ ಹೂಡಿದ್ದಾರೆ. ಈ ಹಿಂದೆ ಶ್ರೀರಾಮುಲು ಸಹ ಇದೇ ರೀತಿ ಮಡಿಕೇರಿಗೆ ಬಂದು ರಾಜೀನಾಮೆ ಒಗಾಯಿಸುವುದಾಗಿ ಬೋಪಯ್ಯಗೆ ತಿಳಿಸಿದ್ದರು.

English summary
BJP crisis BSY gets ready for resignation, BS Yeddyurappa asks KG Bopaiah to be in Bangalore,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X