ರಾಜೀನಾಮೆ ಕೊಡ್ತೀನಿ ಬನ್ನಿ; ಬೋಪಯ್ಯಾಗೆ ಬುಲಾವ್

ಕೆಲವೇ ಕ್ಷಣಗಳಲ್ಲಿ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ತಕ್ಷಣ ನೀವು ಬೆಂಗಳೂರಿಗೆ ಬನ್ನಿ ಎಂದು ಯಡಿಯೂರಪ್ಪ ಅವರು ಸ್ಪೀಕರ್ ಕೆಜಿ ಬೋಪಯ್ಯ ಅವರಿಗೆ ಯಡಿಯೂರಪ್ಪ ಅವರು ಆಗ್ರಹ ಪೂರ್ವಕ ಮನವಿ ಮಾಡಿದ್ದಾರೆ. ಇಲ್ಲವಾದಲ್ಲಿ ಅಂದರೆ ಸಂಜೆ 4 ಗಂಟೆಯೊಳಗಾಗಿ ನೀವು ಬೆಂಗಳೂರಿಗೆ ಬರದೇ ಇದ್ದರೆ ನಾನೇ ಮಡಿಕೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂಬ ಬೆದರಿಕೆಯನ್ನು ಹಾಕಿದ್ದಾರೆ.
ಗಮನಾರ್ಹವೆಂದರೆ, ಬೋಪಯ್ಯ ಅವರು ಪ್ರಸ್ತುತ, ಸ್ವಕ್ಷೇತ್ರವಾದ ಪೊನ್ನಂಪೇಟೆಯಲ್ಲಿ ಬಿಡಾರ ಹೂಡಿದ್ದಾರೆ. ಈ ಹಿಂದೆ ಶ್ರೀರಾಮುಲು ಸಹ ಇದೇ ರೀತಿ ಮಡಿಕೇರಿಗೆ ಬಂದು ರಾಜೀನಾಮೆ ಒಗಾಯಿಸುವುದಾಗಿ ಬೋಪಯ್ಯಗೆ ತಿಳಿಸಿದ್ದರು.












Click it and Unblock the Notifications