ಕುಮಾರಸ್ವಾಮಿಗೆ ಸಿಬಿಐ ತನಿಖೆ ಎಚ್ಚರಿಕೆಯ ಗಂಟೆ

kumaraswamy-welcomes-cbi-enquiry-against-bsy
ದಾವಣಗೆರೆ, ಮೇ 12: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳು ಸಿಬಿಐ ತನಿಖೆಯಾಗುವ ಮಟ್ಟ ತಲುಪಲು ಮೂಲ ಕಾರಣ ಮತ್ತೂಬ್ಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಿಜೆಪಿ ನಾಯಕರು ತಮ್ಮ ವಿರುದ್ಧ ತೊಡೆತಟ್ಟಿದರೆಂದು ಲೋಕಾಯುಕ್ತ ತನಿಖೆಗೆ ತಥಾಸ್ತು ಅಂದೇ ಬಿಟ್ಟರು. ಆನಂತರವೂ ಅನೇಕ ದಾಖಲೆಗಳ ಸಮೇತ ಯಡಿಯೂರಪ್ಪನವರ ಒಂದೊಂದೇ ಹಗರಣವನ್ನು ಬಯಲು ಅವರು ಮಾಡುತ್ತಾ ಬಂದರು.

ಇಂತಿಪ್ಪ ಕುಮಾರಸ್ವಾಮಿ ನಿನ್ನೆ ಆ ಪ್ರಕರಣಗಳನ್ನೆಲ್ಲ ಸಿಬಿಐ ತನಿಖೆಗೆ ಒಪ್ಪಿಸುತ್ತಿದ್ದಂತೆ ಒಮ್ಮೆ ಬೆಚ್ಚಿಬಿದ್ದಿದ್ದಾರೆ. ಸುಪ್ರೀಂ ನಿರ್ಧಾರ ಎಲ್ಲ ಜನನಾಯಕರಿಗೂ ಒಂದು ಎಚ್ಚರಿಕೆಯ ಗಂಟೆ ಎಂದಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗುವ ವೇಳೆ ದಾವಣಗೆರೆಯ ಚನ್ನಗಿರಿಯಲ್ಲಿದ್ದ ಎಚ್ಡಿಕೆ, ತಮ್ಮ ವಿರುದ್ಧವೂ ಆರೋಪಗಳಿದ್ದು, ಸಿಬಿಐ ತನಿಖೆಗೆ ಆದೇಶಿಸಿದರೆ ಸಂಪೂರ್ಣವಾಗಿ ಸಹಕರಿಸುವೆ ಎಂದು ಹೇಳಿದ್ದಾರೆ.

ಈ ಮಧ್ಯೆ, ಸುಪ್ರೀಂ ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ದೂರುದಾರ ಎಸ್ ಆರ್ ಹಿರೇಮಠ ಅವರು ತಾವು ಯಡಿಯೂರಪ್ಪ ಅವರ ವಿರುದ್ಧವಷ್ಟೇ ಹೋರಾಡುತ್ತಿಲ್ಲ. ತಕ್ಷಣಕ್ಕೆ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ವಿರುದ್ಧದ ಪ್ರಕರಣಕ್ಕೆ ಜೀವತುಂಬುವೆ. ಆ ನಂತರ ರಾಜ್ಯದ ಮೂವರು ಮಾಜಿ ಸಿಎಂ ಗಳಾದ ಕುಮಾರಸ್ವಾಮಿ, ಧರಂಸಿಂಗ್ ಹಾಗೂ ಕೃಷ್ಣ ವಿರುದ್ಧ ಇದೇ ರೀತಿ ಗಣಿ ಅಕ್ರಮ ಪ್ರಕರಣಗಳನ್ನು ದಾಖಲಿಸುತ್ತೇನೆ ಎಂದು ಹೇಳಿರುವುದು ಈ ಜನನಾಯಕರಿಗೆ ನಡುಕವನ್ನುಂಟುಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+