ಸದಾ ಟಾರ್ಗೆಟ್ ಶೋಭಾ ಮೇಡಂ ಮಾತ್ರ ಅಲ್ಲ

CM DV Sadananda Gowda
ಬೆಂಗಳೂರು, ಮೇ.10: ಡಿವಿ ಸದಾನಂದ ಗೌಡರು ತಮ್ಮ ಮೇಲಿನ ಹೊರೆ ಕಳೆದುಕೊಳ್ಳಲು ಮಾಡುತ್ತಿರುವ ಯತ್ನಗಳು ಯಾಕೋ ಒಂದೊಂದಾಗಿ ವೈಫಲ್ಯ ಕಾಣುತ್ತಿದೆ. ಸಿಟಿ ರವಿ ಹಾಗೂ ಈಶ್ವರಪ್ಪ ಅವರ 'ಕಾಮರಾಜ ಮಾರ್ಗ' ಕೈ ಕೊಟ್ಟಿದೆ. ಹಿರಿಯರೇ ಪಕ್ಷವನ್ನು ಸಂಘಟಿಸೋಣ ಬನ್ನಿ ಎಂದು ನೀಡಿದ ಕರೆ ಈಗ ಪತ್ರ ಚಳವಳಿಗೆ ಬಂದು ನಿಂತಿದೆ.

ಯಡಿಯೂರಪ್ಪ ಬಣದ ಸಚಿವರಿಗೆ ಕೊಕ್ ಇಲ್ಲ ಎಂದು ಸದಾನಂದ ಗೌಡರು ಹೇಳಿದ್ದರು. ಆದರೆ, ನಿತಿನ್ ಗಡ್ಕರಿಗೆ ಪತ್ರ ಬರೆದು ನಮ್ಮ ಮೇಲೆ ದೂರು ನೀಡಿದ್ದಾರೆ ಎಂದು ಕ್ಯಾಬಿನೆಟ್ ನ ಹಿರಿಯ ಸಚಿವರು ತಿರುಗಿ ಬಿದ್ದಿದ್ದಾರೆ. ಯಡಿಯೂರಪ್ಪ ಬಣದ ಸಚಿವರು ಸುಮಾರು 30 ಜನ ಸಹಿ ಇರುವ ಪತ್ರವನ್ನು ಹೈಕಮಾಂಡ್ ಗೆ ರವಾನಿಸಿ ಕೂಡಲೇ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ.

ಆದರೆ, ಇದರಿಂದ ಬೇಸರಗೊಂಡಿರುವ ಮುಖ್ಯಮಂತ್ರಿ ಸದಾನಂದ ಗೌಡ, ನಾನು ಯಾರ ವಿರುದ್ಧವೂ ಪತ್ರ ಬರೆದಿಲ್ಲ. ಹಾಗಂತ ಹೈಕಮಾಂಡ್ ಗೆ ಯಾರು ಬೇಕಾದರೂ ಪತ್ರ ಬರೆಯಬಹುದಾಗಿದೆ.

"It is an old issue being blown out of proportion. Anybody can write to party chief," ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳ ಪ್ರಶ್ನೆಗೆ ಸದಾ 'ಸ್ಮೈಲಿ' ಗೌಡರು ಉತ್ತರಿಸಿದ್ದಾರೆ.

ಅಸಲಿಗೆ, ಸದಾನಂದ ಗೌಡರ ಟಾರ್ಗೆಟ್ ಶೋಭಾ ಕರಂದ್ಲಾಜೆ ಮಾತ್ರ ಅಲ್ಲ ಎಂಬುದು ಸ್ಪಷ್ಟವಾಗಿದೆ. ಬಸವರಾಜ ಬೊಮ್ಮಾಯಿ, ಸಿಎಂ ಉದಾಸಿ, ಮುರುಗೇಶ್ ನಿರಾಣಿ, ಎಂಪಿ ರೇಣುಕಾಚಾರ್ಯ, ಉಮೇಶ್ ಕತ್ತಿ ಹಾಗೂ ರೇವೂ ನಾಯಕ ಬೆಳಮಗಿ ಅವರ ಮೇಲೆ ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊರೆಸಿ ಪತ್ರ ಕಳುಹಿಸಲಾಗಿದೆ ಎಂದು ಯಡಿಯೂರಪ್ಪ ಬೆಂಬಲಿಗರು ಆರೋಪಿಸಿದ್ದಾರೆ.

ಆದರೆ, ಸದಾ ಕಳಿಸಿದ ಪತ್ರದ ವಿಷಯ ಲೀಕ್ ಆಗಿದ್ದು, ಈಗ ಭಾರಿ ಗದ್ದಲಕ್ಕೆ ದಾರಿಯಾಗಿದೆ. ಯಡಿಯೂರಪ್ಪ ಬೆಂಬಲಿಗರು ಶಾಸಕಾಂಗ ಸಭೆಗೆ ಆಗ್ರಹಿಸಿ ಬರೆದಿರುವ ಪತ್ರ ನನಗೆ ತಲುಪಿಲ್ಲ ಎನ್ನುವ ಮೂಲಕ ಸದಾನಂದ ಗೌಡರು ಹೊಸ ತಿರುವು ನೀಡಿದ್ದಾರೆ. ಒಟ್ಟಿನಲ್ಲಿ ಪತ್ರ ಚಳವಳಿ ಎಲ್ಲಿಗೆ ಮುಟ್ಟುವುದೋ ಯಾರಿಗೆ ತಟ್ಟುವುದೋ ಗೊತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+