ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸ್ಥಾನ ಆಕಾಂಕ್ಷಿ ಸಿಟಿ ರವಿ ಕಂಗಾಲು

By Srinath
|
Google Oneindia Kannada News

dvs-high-letter-bsy-rebel-worries-ct-ravi
ಬೆಂಗಳೂರು, ಮೇ10: ಶೋಭಾ ಕರಂದ್ಲಾಜೆ ಅವರ 'ಮೀರ್ ಸಾದಿಕ್' ತೆಗಳಿಕೆಗೆ ಕೆಂಡಾಮಂಡಲಗೊಂಡ ಸಿಎಂ ಮತ್ತು ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು ಹೈಕಮಾಂಡಿಗೆ ಬರೆದಿರುವ ಪತ್ರ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಗುಮ್ಮನಿಂದಾಗಿ ಮಂಕಾಗಿದ್ದ ಯಡಿಯೂರಪ್ಪ ಬಣಕ್ಕೆ ಸಿಎಂ ಪತ್ರ ಪ್ರಮುಖ ಅಸ್ತ್ರವಾಗಿದೆ. ಪಕ್ಷಕ್ಕೆ ಅದರಿಂದ ಭಾರಿ damage ಉಂಟಾಗಲಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಈ ಮಧ್ಯೆ, ಜೀವಮಾನದಲ್ಲಿ ಒಮ್ಮೆಯಾದರೂ ಮಂತ್ರಿ ಅನ್ನಿಸಿಕೊಳ್ಳಬೇಕು ಎಂಬ ಹಪಹಪಿಗೆ ಬಿದ್ದಿರುವ ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರು ಈ ಬೆಳವಣಿಗೆಗಳಿಂದ ಕಂಗಾಲಾಗಿದ್ದಾರೆ. ಇನ್ನೇನು ಸುಪ್ರೀಂಕೋರ್ಟ್ ಆಗ್ಲೋ ಈಗ್ಲೋ ಯಡಿಯೂರಪ್ಪ ವಿರುದ್ಧ ತೀರ್ಪು ನೀಡಲಿದೆ.

ಆಗ ತಕ್ಷಣ ಹೈಕಮಾಂಡ್ ಹಸಿರು ನಿಶಾನೆ ಮೇರೆಗೆ ಮುಖ್ಯಮಂತ್ರಿ ಸದಾನಂದರು ತಮ್ಮ ಸಂಪುಟ ವಿಸ್ತರಿಸುತ್ತಾರೆ. ಆಗ ಮಂತ್ರಿಯಾಗುವ ಯೋಗ ತನಗೆ ದಕ್ಕುತ್ತದೆ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ ಸೀಟಿ ರವಿಗೆ ಈಗ ಹೃದಯವೇ ಬಾಯಿಗೆ ಬಂದಂತಾಗಿದೆ.

ಹಾಗಾಗಿ 'ದೇವ್ರು, ಯಡಿಯೂರಪ್ನೋರೆ. ದಯವಿಟ್ಟು ಸುಮ್ಕಿರಿ. ಸಂಪುಟ ವಿಸ್ತರಣೆಗೆ ಬ್ರೇಕ್ ಹಾಕಬೇಡಿ. ನಾನು ಮಂತ್ರಿ ಆಗುವುದಕ್ಕೆ ಕತ್ತರಿ ಆಡಿಸಬೇಡಿ. ಸದ್ಯಕ್ಕೆ ನೀವು ಏನೂ ತಗಾದೆ ತೆಗೆಯಬೇಡಿ' ಎಂದು ಯಡಿಯೂರಪ್ಪನವರಿಗೆ ಅಡ್ಡಬಿದ್ದಿದ್ದಾರೆ.

ಅಷ್ಟೇ ಸಾಲದು ಅಂತ ಸುಮಾರು 70ಕ್ಕೂ ಹೆಚ್ಚು ಶಾಸಕರ ಸಹಿಯುಳ್ಳ ಪತ್ರವನ್ನು ಮೊದಲು ಮಾಜಿ ಸಿಎಂ, ನಂತರ ಹಾಲಿ ಸಿಎಂ ಹಾಗೂ ಪಕ್ಷದ ರಾಜ್ಯಾದ್ಯಕ್ಷರೂ, ಕೊನೆಗೆ ದೆಹಲಿಗೆ ತೆರಳಿ ಅಲ್ಲಿರುವ ವರಿಷ್ಠರಿಗೂ ಪತ್ರ ತಲುಪಿಸುವ ಯೋಜನೆ ಹಾಕಿಕೊಂಡಿದ್ದಾರೆ. ಆಗಲಾದರೂ ಸಿಟಿ ರವಿ, ಸಚಿವ ಸಿಟಿ ರವಿ ಆಗುತ್ತಾರಾ? ಕಾಲಾಯತಸ್ಮೈನಮಃ !

English summary
As a fall out of CM DV Sadananda Gowda's letter to BJP high command BSY group is on all hammers and tongs. But Chickmagalur MLA aka Minister aspirant CT Ravi is worried as expected DVS cabinet expansion may not take place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X