ಸಚಿವ ಸ್ಥಾನ ಆಕಾಂಕ್ಷಿ ಸಿಟಿ ರವಿ ಕಂಗಾಲು

dvs-high-letter-bsy-rebel-worries-ct-ravi
ಬೆಂಗಳೂರು, ಮೇ10: ಶೋಭಾ ಕರಂದ್ಲಾಜೆ ಅವರ 'ಮೀರ್ ಸಾದಿಕ್' ತೆಗಳಿಕೆಗೆ ಕೆಂಡಾಮಂಡಲಗೊಂಡ ಸಿಎಂ ಮತ್ತು ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು ಹೈಕಮಾಂಡಿಗೆ ಬರೆದಿರುವ ಪತ್ರ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಗುಮ್ಮನಿಂದಾಗಿ ಮಂಕಾಗಿದ್ದ ಯಡಿಯೂರಪ್ಪ ಬಣಕ್ಕೆ ಸಿಎಂ ಪತ್ರ ಪ್ರಮುಖ ಅಸ್ತ್ರವಾಗಿದೆ. ಪಕ್ಷಕ್ಕೆ ಅದರಿಂದ ಭಾರಿ damage ಉಂಟಾಗಲಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಈ ಮಧ್ಯೆ, ಜೀವಮಾನದಲ್ಲಿ ಒಮ್ಮೆಯಾದರೂ ಮಂತ್ರಿ ಅನ್ನಿಸಿಕೊಳ್ಳಬೇಕು ಎಂಬ ಹಪಹಪಿಗೆ ಬಿದ್ದಿರುವ ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರು ಈ ಬೆಳವಣಿಗೆಗಳಿಂದ ಕಂಗಾಲಾಗಿದ್ದಾರೆ. ಇನ್ನೇನು ಸುಪ್ರೀಂಕೋರ್ಟ್ ಆಗ್ಲೋ ಈಗ್ಲೋ ಯಡಿಯೂರಪ್ಪ ವಿರುದ್ಧ ತೀರ್ಪು ನೀಡಲಿದೆ.

ಆಗ ತಕ್ಷಣ ಹೈಕಮಾಂಡ್ ಹಸಿರು ನಿಶಾನೆ ಮೇರೆಗೆ ಮುಖ್ಯಮಂತ್ರಿ ಸದಾನಂದರು ತಮ್ಮ ಸಂಪುಟ ವಿಸ್ತರಿಸುತ್ತಾರೆ. ಆಗ ಮಂತ್ರಿಯಾಗುವ ಯೋಗ ತನಗೆ ದಕ್ಕುತ್ತದೆ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ ಸೀಟಿ ರವಿಗೆ ಈಗ ಹೃದಯವೇ ಬಾಯಿಗೆ ಬಂದಂತಾಗಿದೆ.

ಹಾಗಾಗಿ 'ದೇವ್ರು, ಯಡಿಯೂರಪ್ನೋರೆ. ದಯವಿಟ್ಟು ಸುಮ್ಕಿರಿ. ಸಂಪುಟ ವಿಸ್ತರಣೆಗೆ ಬ್ರೇಕ್ ಹಾಕಬೇಡಿ. ನಾನು ಮಂತ್ರಿ ಆಗುವುದಕ್ಕೆ ಕತ್ತರಿ ಆಡಿಸಬೇಡಿ. ಸದ್ಯಕ್ಕೆ ನೀವು ಏನೂ ತಗಾದೆ ತೆಗೆಯಬೇಡಿ' ಎಂದು ಯಡಿಯೂರಪ್ಪನವರಿಗೆ ಅಡ್ಡಬಿದ್ದಿದ್ದಾರೆ.

ಅಷ್ಟೇ ಸಾಲದು ಅಂತ ಸುಮಾರು 70ಕ್ಕೂ ಹೆಚ್ಚು ಶಾಸಕರ ಸಹಿಯುಳ್ಳ ಪತ್ರವನ್ನು ಮೊದಲು ಮಾಜಿ ಸಿಎಂ, ನಂತರ ಹಾಲಿ ಸಿಎಂ ಹಾಗೂ ಪಕ್ಷದ ರಾಜ್ಯಾದ್ಯಕ್ಷರೂ, ಕೊನೆಗೆ ದೆಹಲಿಗೆ ತೆರಳಿ ಅಲ್ಲಿರುವ ವರಿಷ್ಠರಿಗೂ ಪತ್ರ ತಲುಪಿಸುವ ಯೋಜನೆ ಹಾಕಿಕೊಂಡಿದ್ದಾರೆ. ಆಗಲಾದರೂ ಸಿಟಿ ರವಿ, ಸಚಿವ ಸಿಟಿ ರವಿ ಆಗುತ್ತಾರಾ? ಕಾಲಾಯತಸ್ಮೈನಮಃ !

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+