ಬಿಎಸ್ ವೈ ಆಪ್ತರಿಗೆ ಸಂಪುಟದಿಂದ ಕೊಕ್ ಇಲ್ಲ

ಅಂತರಿಕ ಬಿಕ್ಕಟ್ಟು ಇನ್ನೂ ಶಮನವಾಗಿಲ್ಲ. ವೈಯಕ್ತಿಕ ನೆಲೆಯಲ್ಲಿ ಯಡಿಯೂರಪ್ಪ ಅವರ ಏನೇ ಭಿನ್ನಾಭಿಪ್ರಾಯ ಇದ್ದರೂ ಅವರ ಆಪ್ತರು ಎನ್ನುವ ಕಾರಣಕ್ಕೆ ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನುಭವಿಗಳನ್ನು ಸಂಪುಟದಿಂದ ಕೈ ಬಿಡುವುದು ಸರಿಯಲ್ಲ ಎಂದು ಬಿಜೆಪಿಗೆ ಮನವರಿಕೆಯಾಗಿದೆ.
ಸಚಿವರನ್ನು ಕೈಬಿಡುವ ಮೂಲಕ ಆಡಳಿತಕ್ಕೆ ಧಕ್ಕೆ ಉಂಟುಮಾಡಕೂಡದು ಎಂದು ಹೈಕಮಾಂಡ್ ಸದಾನಂದಗೌಡರಿಗೆ ಎಚ್ಚರಿಸಿದೆ.
ಯಡಿಯೂರಪ್ಪ ಕುರಿತ ಕೋರ್ಟ್ ನಿರ್ಧಾರ ಬಂದ ಕೂಡಲೇ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಯಿದೆ. ಆದರೆ, ಸಂಪುಟ ವಿಸ್ತರಣೆಗೂ ಯಡಿಯೂರಪ್ಪ ಅವರ ಕೇಸಿಗೂ ಸಂಬಂಧವಿಲ್ಲ ಎಂದು ಸದಾನಂದ ಗೌಡ ಹೇಳಿದ್ದಾರೆ.
ಆದರೆ, ಏತಕ್ಕೆ ಸುಮ್ಮನೆ ರಿಸ್ಕ್, ಕೋರ್ಟ್ ತೀರ್ಮಾನ ಹೊರಬೀಳಲಿ ಎಂದು ಹೈಕಮಾಂಡ್ ನಿರ್ಧರಿಸಿದೆ. ಹೀಗಾಗಿ ಸಂಪುಟ ವಿಸ್ತರಣೆ ಇನ್ನಷ್ಟು ವಿಳಂಬವಾಗಿದೆ.
ಹೊಸಬರಿಗೆ ಆದ್ಯತೆ: ತಮ್ಮ ತಲೆ ಮೇಲಿರುವ 20 ಪ್ಲಸ್ ಖಾತೆಗಳ ಹೊರೆಯನ್ನು ಹೊಸಬರಿಗೆ ನೀಡಲು ಸದಾನಂದ ಗೌಡ ಯೋಜಿಸಿದ್ದಾರೆ. ಯಾವುದಕ್ಕೂ ಧರ್ಮೇಂದ್ರ ಪ್ರಧಾನ್ ಅವರು ಬೆಂಗಳೂರಿಗೆ ಬಂದ ನಂತರ ಪಟ್ಟಿ ಅಂತಿಮವಾಗುವ ಸಾಧ್ಯತೆಯಿದೆ. ಸದ್ಯಕ್ಕಂತೂ ಯಡಿಯೂರಪ್ಪ ಆಪ್ತರು ಸೇಫ್.












Click it and Unblock the Notifications