ಬೆಂಗಳೂರಿನಲ್ಲಿ ಕಿಡ್ನಿ ಮಾರಾಟ ದಂಧೆ ಪತ್ತೆ
ಬಡ ಗ್ರಾಮಸ್ಥರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಕಿಡ್ನಿ ಮಾರಾಟ ದಂಧೆಯನ್ನು ಕಳೆದ ಭಾನುವಾರ ಪತ್ತೆಯಾಗಿತ್ತು. ವೈದ್ಯರು ಒಂದು ಕಿಡ್ನಿಗೆ 5 ಲಕ್ಷ ರುಪಾಯಿ ಪಾವತಿಸುತ್ತಿದ್ದರು. ಹಾಗೆಯೇ ಅದನ್ನು 15 ಲಕ್ಷ ರುಪಾಯಿಗೆ ಮಾರಾಟ ಮಾಡುತ್ತಿದ್ದರು. ಇದು 5-6 ತಿಂಗಳಿಂದ ಅನೂಚವಾಗಿ ನಡೆಯುತ್ತಿರುವುದಾಗಿ ಆಂಧ್ರ ಪೊಲೀಸರು ಹೇಳಿದ್ದಾರೆ.
ಬೆಂಗಳೂರಿನ ಶ್ರುತಿ ಕ್ಲಿನಿಕ್ ನ ಪ್ರಸೂತಿತಜ್ಞೆ ಡಾ. ಶ್ರುತಿ ಅವರ ಮೂಲಕ ಕಿಡ್ನಿ ಮಾರಾಟ ದಂಧೆಯಲ್ಲಿ ಪಾಲ್ಗೊಂಡಿದ್ದಾಗಿ ಡಾ. ರಮೇಶ್ ತಂಡದ ಬ್ರೋಕರುಗಳು ಅಲ್ಲಿನ ಪೊಲೀಸರಿಗೆ ತಿಳಿಸಿದ್ದಾರೆ. ಇನ್ನೂ ಹಲವಾರು ಖಾಸಗಿ ಆಸ್ಪತ್ರೆಗಳು ಕಾನೂನುಬಾಹಿರ ಕಿಡ್ನಿ ಮಾರಾಟ ದಂಧೆಯಲ್ಲಿ ಭಾಗಿಯಾಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ಪ್ರಕರಣದ ಆರೋಪಿ, ಖೈರತಾಬಾದಿನ ಮೆಡಿಕಲ್ ಇನ್ಸೂರೆನ್ಸ್ ಏಜಂಟ್ ರಾಜೇಂದ್ರ ಪ್ರಸಾದ್ ಅಲಿಯಾಸ್ ರಾಜೇಂದ್ರ ಕುಮಾರ್ ಎಂಬ ವ್ಯಕ್ತಿ ಕರ್ನಾಟಕದಲ್ಲಿ ವಿಮಾ ವಹಿವಾಟು ನಡೆಸುತ್ತಾರೆ. ಮೆಡಿಕಲ್ ಇನ್ಸೂರೆನ್ಸ್ ಹೆಸರಿನಲ್ಲಿ ರಾಜೇಂದ್ರ ಕಿಡ್ನಿ ಆರಾಟ ಜಾಲದಲ್ಲಿ ಸಕ್ರಿಯರಾಗಿ ಭಾಗಿಯಾಗಿದ್ದಾರೆ. ಪ್ರಸ್ತುತ ಆರೋಪಿಗಳು ನ್ಯಾಯಾಂಗ ಬಂಧನಲ್ಲಿದ್ದಾರೆ ಎಂದು ಅಲ್ಲಿನ ಪೊಲೀಸ್ ಆಯುಕ್ತ ಜೆ ಸುಬ್ಬಿ ರಾಮಿ ರೆಡ್ಡಿ ತಿಳಿಸಿದ್ದಾರೆ.