ಯಡಿಯೂರಪ್ಪ ಹಠ, ಛಲಕ್ಕೆ ಒಂದು sample

ಬೆಟ್ಟದ ಮೇಲೆ ಸಿದ್ದೇಶ್ವರ ಸ್ವಾಮಿಗೆ ಸಾಷ್ಟಾಂಗ ಹಾಕಲು ಬರೋಬ್ಬರಿ 620 ಮೆಟ್ಟಿಲು ಹತ್ತಬೇಕು. ಡೊಳ್ಳುಹೊಟ್ಟೆ ಹೊತ್ತ ಯಾವುದೇ ರಾಜಕಾರಣಿ ಖಂಡಿತ ಇಂಥ ಸಾಹಸಕ್ಕೆ ಮುಂದಾಗಲಾರ. ಆದರೆ ಇಂದಿಗೂ ಉತ್ತಮ ಆರೋಗ್ಯ, ದೇಹಶಕ್ತಿ ಕಾಪಾಡಿಕೊಂಡಿರುವ ಯಡಿಯೂರಪ್ಪ ಅವರು ಮಾನಸಿಕವಾಗಿಯೂ ತಾವೆಷ್ಟು ಸದೃಢರು, ಅದರಲ್ಲೂ ಛಲ, ಹಠ ಮೈದಾಳಿದರೆ ತಮ್ಮ ತಾಕತ್ತು ಏನು ಎಂಬುದನ್ನು ಬೆಟ್ಟದಲ್ಲಿ ತೋರಿಸಿದ್ದಾರೆ.
ಒಂದೆಡೆ ಜೇನುಕಲ್ಲು ಬೆಟ್ಟಕ್ಕಿಂತ ಅಗಾಧ ಎತ್ತರದಲ್ಲಿ ಸುಪ್ರೀಂಕೋರ್ಟ್ ಗೋಚರವಾಗಿ, ಕಾಡುತ್ತಿದ್ದರೂ ಯಡಿಯೂರಪ್ಪ ಎದೆಗುಂದದೆ 'ತಂದೆ, ಕಾಪಾಡೋ' ಎಂದು ಸಿದ್ದೇಶ್ವರನಿಗೆ ಭಕ್ತಿಯಿಂದ ಬೇಡಿಕೊಂಡಿದ್ದಾರೆ. ಸಿದ್ದೇಶ್ವರರ ಆಶೀರ್ವಾದ ಏನೆಂಬುದು ಕಾಲವೇ ಹೇಳಬೇಕು. ಆದರೂ ಯಡಿಯೂರಪ್ಪನವರ ಮನೋಸ್ಥೈರ್ಯ ಎಂತಹುದೆಂದರೆ ...
ವಿರೋಧಿಗಳ ಮೇಲೂ ಸಲೀಸಾಗಿ ಹತ್ತಿಳಿದರಪ್ಪ: ಬಯಲುಸೀಮೆ ಅಂಚಿನಲ್ಲಿರುವ ಅರಸೀಕೆರೆ ಬೇಸಿಗೆಯಲ್ಲಿ ಸುಡುಗಾವಲಿಯಂತಿರುತ್ತದೆ. ಅದೂ ಬೆಟ್ಟ ಪ್ರದೇಶ ಕಾದ ಕಬ್ಬಿಣವೇ. ಅಂತಹ ಸ್ಥಿತಿಯಲ್ಲಿ ಯಡಿಯೂರಪ್ಪನವರು ಒಳಗೆ ಬೇಗುದಿಯಿದ್ದರೂ 620 ಮೆಟ್ಟಿಲುಗಳನ್ನೂ ಪ್ರಶಾಂತರಾಗಿ ಹತ್ತಿದ್ದಾರೆ.
ಡೋಲಿಯಲ್ಲಿ ಬೆಟ್ಟ ಕ್ರಮಿಸುತ್ತಾರೆ ಎಂಬ ನಿರೀಕ್ಷೆಯನ್ನು ಹುಸಿಗೊಳಿಸಿ, ಮಧ್ಯೆ ಒಂದು ಬಾರಿ ಕುಳಿತು ದಣಿವಾರಿಸಿಕೊಂಡರೆ 2 ಬಾರಿ ನಿಂತುಕೊಂಡೇ ಸುಧಾರಿಸಿಕೊಂಡಿದ್ದಾರೆ. ಈ ಹಿಂದೆ ದೇವೇಗೌಡರು ಗೊಮ್ಮಟೇಶ್ವರನ ದರ್ಶನ ಪಡೆಯಲು ಡೋಲಿಯಲ್ಲಿ ತೇಲಿಹೋಗಿದ್ದರು ಎಂಬುದು ಈಗ ನೆನಪಿಗೆ ಬರುತ್ತಿದೆ.
ಜೇನುಕಲ್ಲು ಸಿದ್ದೇಶ್ವರ ಸ್ವಾಮೀಜಿಗೆ ರುದ್ರಾಭಿಷೇಕ ಮತ್ತಿತರ ವಿಶೇಷ ಪೂಜೆಗಳನ್ನು ಸಲ್ಲಿಸಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪನವರು 'ಬೆಟ್ಟದ ಮೇಲೆ ಸಲೀಸಾಗಿ ಹತ್ತಿಳಿದಂತೆ ವಿರೋಧ ಪಕ್ಷದವರು, ಸ್ವಪಕ್ಷದವರು ಎಂಬ ಭೇಧವೆಣಿಸಿದೆ ಸರ್ವ ವಿರೋಧಿಗಳ ಮೇಲೂ ಅಷ್ಟೇ ಹಠ, ಛಲದೊಂದಿಗೆ ಸಲೀಸಾಗಿ ಹತ್ತಿಳಿದರು ಎಂಬುದು ಗಮನಾರ್ಹ'. ಅಬಕಾರಿ ಸಚಿವ ರೇಣುಕಾಚಾರ್ಯ, ರಾಜ್ಯ ಕೈಮಗ್ಗದ ನಿಗಮದ ಅಧ್ಯಕ್ಷ ಲಕ್ಷ್ಮಿನಾರಾಯಣ ಅವರಿಗೆ ಸಾಥ್ ನೀಡಿದರು.
-
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು












Click it and Unblock the Notifications