ಕಸಾಪ ಅಧ್ಯಕ್ಷರಾಗಿ ಪುಂಡಲೀಕ ಹಾಲಂಬಿ ಆಯ್ಕೆ?

ಕಸಾಪ ಅಧ್ಯಕ್ಷ ಸ್ಥಾನಕ್ಕೆ ಪ್ರೊ. ಚಂದ್ರಶೇಖರ ಪಾಟೀಲ ಹಾಗೂ ಪುಂಡಲೀಕ ಹಾಲಂಬಿ ಅವರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಮೇ. 2ರಂದು ಅಧಿಕೃತವಾಗಿ ಫಲಿತಾಂಶ ಹೊರಬೀಳಲಿದೆ. ಒಟ್ಟು 192 ಮತಗಟ್ಟೆಗಳಲ್ಲಿ 1,08,028 ಮತದಾರರು ತಮ್ಮ ಗುರುತಿನ ಚೀಟಿ ತೋರಿಸಿ ಎರೆಡೆರಡು ಮತ ಚೀಟಿಗಳನ್ನು ಪಡೆದು ವೋಟ್ ಮಾಡಿದರು.
ಈ ನಡುವೆ ಜಿಲ್ಲಾ ಘಟಕ, ಗಡಿನಾಡು ಭಾಗದ ಘಟಕಗಳ ಫಲಿತಾಂಶ ಭಾನುವಾರ(ಏ.29) ಹೊರ ಬಿದ್ದಿದೆ. ಬೆಂಗಳೂರು ಗ್ರಾಮಾಂತರ ಅಧ್ಯಕ್ಷರಾಗಿ ಹುಲಿಕಲ್ ನಟರಾಜ್ ಆಯ್ಕೆಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಗೆ ಸೋಮಶೇಖರ್ ಬಿಸಲವಾಡಿ, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರದೀಪ್ ಕುಮಾರ್ ಕಲ್ಕೂರ ಅವರು ಅಧ್ಯಕ್ಷರಾಗಿದ್ದಾರೆ.
ಉಳಿದಂತೆ ವಿವಿಧ ಜಿಲ್ಲಾ ಕಸಾಪ ಅಧ್ಯಕ್ಷರ ವಿವರ ಇಂತಿದೆ:
* ಬೆಂಗಳೂರು ನಗರ: ಟಿ. ತಿಮ್ಮೇಶ್
* ಬೆಂಗಳೂರು ಗ್ರಾಮಾಂತರ- ಹುಲಿಕಲ್ ನಟರಾಜ್
* ಯಾದಗಿರಿ: ಸಿದ್ದಪ್ಪ ಹೊಟ್ಟಿ
* ತುಮಕೂರು: ಸೋಮು ಭಾಸ್ಕರಾಚಾರ್
* ಚಿತ್ರದುರ್ಗ: ಆರ್. ಮಲ್ಲಿಕಾರ್ಜುನಯ್ಯ
* ದಾವಣಗೆರೆ: ಎ.ಆರ್. ಉಜ್ಜನಪ್ಪ
* ಮಂಡ್ಯ: ಮೀರಾ ಶಿವಲಿಂಗಯ್ಯ
* ಹಾಸನ: ಎಚ್.ಎಲ್. ಜನಾರ್ದನ
* ಚಿಕ್ಕಮಗಳೂರು: ಎನ್.ಎಸ್.ಶಿವಸ್ವಾಮಿ
* ಧಾರವಾಡ: ಲಿಂಗರಾಜ ರುದ್ರಪ್ಪ ಅಂಗಡಿ
* ಉಡುಪಿ: ನೀಲಾವರ ಸುರೇಂದ್ರ ಅಡಿಗ
* ಕೊಡಗು: ಟಿ.ಪಿ. ರಮೇಶ್
* ವಿಜಾಪುರ: ಮಲ್ಲಿಕಾರ್ಜುನ ಇಂಡಿಗೇರಿ
* ಬಾಗಲಕೋಟೆ: ವಿಜಯಕುಮಾರ ಸ್ವಾಮಿ
* ಗುಲ್ಬರ್ಗ: ಮಹಿಪಾಲ್ರೆಡ್ಡಿ ಮುನ್ನೂರ
* ರಾಯಚೂರು: ಮಹಾಂತೇಶ್ ಮಸ್ಕಿ
* ಶಿವಮೊಗ್ಗ: ಡಿ. ಮಂಜುನಾಥ್
* ಕೊಪ್ಪಳ: ಈರಪ್ಪ ಮಲ್ಲಪ್ಪ ನಿಂಗೋಜಿ
* ಬೀದರ್: ಸಿದ್ದರಾಮಪ್ಪ ಮಾಸಿ ಮಡಿ












Click it and Unblock the Notifications