ಗೋಡೆ ಮೇಲೆ ಮೂತ್ರ ವಿಸರ್ಜಿಸಿದ ಸಚಿನ್ ಹತ್ಯೆ

ಏಪ್ರಿಲ್ 17ರ ರಾತ್ರಿ 11 ಗಂಟೆಯಲ್ಲಿ ಪೂರ್ವ ದೆಹಲಿಯ ಪಾಂಡವನಗರದ ಮಂಡವಲಿಯಲ್ಲಿ ಏನಾಯಿತೆಂದರೆ... ಹದಿಹರಯದ ಸಚಿನ್ ಮಾರುಕಟ್ಟೆಗೆ ತೆರಳಿ ವಾಪಸಾಗುತ್ತಿದ್ದ ವೇಳೆ ನಿಸರ್ಗದ ಕರೆ ತಾಳಲಾರದೆ ಪಕ್ಕದ ಮನೆಯ ಗೋಡೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಎನ್ನಲಾಗಿದೆ.
ಇದರಿಂದ ಕುಪಿತಗೊಂಡ ವಿಜಯ್ ಮತ್ತು ಅಜಯ್ ಎಂಬವರು ಆತನನ್ನು ಹಿಂಬಾಲಿಸಿಕೊಂಡು ಹೋಗಿ, ಜಗಳ ನಡೆಸಿದರೆನ್ನಲಾಗಿದೆ. ಜಗಳ ಹಿಂಸಾಚಾರಕ್ಕೆ ತಿರುಗಿ, ಆರೋಪಿಗಳು ಸಚಿನ್ ಗೆ ಥಳಿಸಿದರೆಂದು ಪೊಲೀಸರು ತಿಳಿಸಿದ್ದಾರೆ.
ದುರ್ದೈವಿ ಸಚಿನ್ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗಂಭೀರವಾಗಿ ಗಾಯಗೊಂಡಿದ್ದ ಆತ ಸಾವನ್ನಪ್ಪಿದನೆಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಇಬ್ಬರ ಮೇಲೂ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications