ಮಧೂರು ವಿನಾಯಕ ದೇವಸ್ಥಾನದಲ್ಲಿ ಆಭರಣ ಕಳವು

ಭಕ್ತರು ಇಷ್ಟದೇವರಿಗೆ ಕಾಣಿಕೆ ರೂಪದಲ್ಲಿ ಅರ್ಪಿಸಿದ ಆಭರಣಗಳೇ ಕಾಣೆಯಾಗಿವೆ. ಲೆಕ್ಕಪತ್ರ ವಿಭಾಗ ವಾರ್ಷಿಕ ತಪಾಸಣೆ ನಡೆಸಿದಾಗ ಕೋಟ್ಯಂತರ ಮೌಲ್ಯದ ಆಭರಣ ಕಾಣೆಯಾಗಿರುವುದು ಗೊತ್ತಾಗಿದೆ.
ಮಾರ್ಚ್ ಮೂರನೇ ವಾರದಲ್ಲಿ ದೇವಾಲಯದ ಕ್ಷೇತ್ರದ ಲೆಕ್ಕ ಪತ್ರಗಳ ಪರಿಶೀಲನೆ ನಡೆದಿತ್ತು. ಕಾಣೆಯಾದ ಆಭರಣಗಳ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಆದರೆ ದೇವಸ್ಥಾನದ ದೈನಂದಿನ ದೇವರ ಪೂಜೆಗೆ ಬಳಸುವ ಆಭರಣ, ಅಮೂಲ್ಯ ಸಾಮಗ್ರಿಗಳು ಭದ್ರವಾಗಿವೆ.












Click it and Unblock the Notifications