ಸೋದರಿಯ ರೇಪ್: ಗುಪ್ತಾಂಗ ಕತ್ತರಿಸಿ ಕೊಲೆ

ಆರೋಪಿ ಕಣ್ಣನ್ ಪಿಳ್ಳೆ ಈ ಬರ್ಬರ ಕೃತ್ಯ ಎಸಗಿದ್ದಾನೆ. ರಕ್ತಸಿಕ್ತ ಚೂರಿಯನ್ನು ಕೈಯಲ್ಲಿ ಹಿಡಿದುಕೊಂಡು ಕಾಮರಾಜ್ ನಗರ ಪೊಲೀಸ್ ಚೌಕಿ ಪೊಲೀಸರೆದುರು ಆತ ಶರಣಾಗಿದ್ದಾನೆ. ತನ್ನ ಸ್ನೇಹಿತ ಗೋವಿಂದನ್ ಗುಪ್ತಾಂಗ ಕತ್ತರಿಸಿ, ಹತ್ಯೆ ಮಾಡಿರುವುದಾಗಿ ಪಿಳ್ಳೆ ತಪ್ಪೊಪ್ಪಿಕೊಂಡಿದ್ದಾನೆ. ಪಿಳ್ಳೆಯನ್ನು ಬಂಧಿಸಲಾಗಿದ್ದು, ಅವನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪಂತ್ನಗರ ಪೊಲೀಸರು ತಿಳಿಸಿದ್ದಾರೆ.
ಐದು ವರ್ಷಗಳ ಹಿಂದೆ ಮುಂಬಯಿಗೆ ಬಂದಿದ್ದ ಗೋವಿಂದನ್ಗೆ ನೆಲೆಸಲು ಪಿಳ್ಳೆ ನೆಲೆ ಒದಗಿಸಿದ್ದ. ಇಬ್ಬರೂ ಜತೆಯಾಗಿ ಮೀನಿನ ವ್ಯಾಪಾರ ಮಾಡುತ್ತಿದ್ದರು. 'ಗೋವಿಂದನ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ' ಎಂದು ಸಹೋದರಿ ಹೇಳಿದಳು. ಇದರಿಂದಾಗಿ ಆತನನ್ನು ಕೊಲೆ ಮಾಡಲು ತೀರ್ಮಾನಿಸಿದ್ದೆ. ಮಂಗಳವಾರ ರಾತ್ರಿ ಹೊರಗೆ ಕರೆದುಕೊಂಡು ಹೋಗಿ ಇಬ್ಬರೂ ಮದ್ಯ ಸೇವಿಸಿದ ಬಳಿಕ ಆತನನ್ನು ಕೊಂದಿರುವುದಾಗಿ ಪಿಳ್ಳೆ ಪೊಲೀಸರಿಗೆ ಹೇಳಿದ್ದಾನೆ.












Click it and Unblock the Notifications