ಅಜ್ಮೀರ್ ದರ್ಗಾಕ್ಕೆ ಜರ್ದಾರಿ ಭರ್ಜರಿ ಗಿಫ್ಟ್

ದರ್ಗಾದ ಅಭಿವೃದ್ಧಿಗಾಗಿ 10 ಲಕ್ಷ ಯುಎಸ್ ಡಾಲರ್ ದೇಣಿಗೆಯನ್ನು ಜರ್ದಾರಿ ಪರ ಅವರ ನಿಯೋಗದ ಸದಸ್ಯರೊಬ್ಬರು ಪ್ರಕಟಿಸಿದರೆಂದು ಅಂಜುಮಾನ್ ಸಮಿತಿಯ ಉಪಾಧ್ಯಕ್ಷ ಸಯ್ಯದ್ ಖಲಿಮುದ್ದೀನ್ ಚಿಸ್ತಿ ತಿಳಿಸಿದ್ದಾರೆ.
ಭರ್ಜರಿ ಗಿಫ್ಟ್: ಮಾಜಿ ಪಾಕ್ ಅಧ್ಯಕ್ಷರಾದ ಪರ್ವೇಜ್ ಮುಶರ್ರಫ್ ಮತ್ತು ಜಿಯಾ-ವುಲ್- ಹಕ್ ಅವರು ಈ ಹಿಂದೆ ದರ್ಗಾವನ್ನು ಸಂದರ್ಶಿಸಿದ್ದರು. ಭಾರತದ ಅನೇಕ ರಾಜಕಾರಣಿಗಳೂ ವಾಡಿಕೆಯಂತೆ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಿರುತ್ತಾರೆ. ಜರ್ದಾರಿ ಪ್ರಕಟಿಸಿರುವ ದೇಣಿಗೆ ಈಚಿನ ವರ್ಷಗಳಲ್ಲೇ ಅತ್ಯಂತ ದೊಡ್ಡ ಮೊತ್ತವಾಗಿದೆ ಎಂದು ಅಂಜುಮಾನ್ ಸಮಿತಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದನ್ನು ವೈಯಕ್ತಿಕ ನೆಲೆಯಲ್ಲಿ ನೀಡಲಾಯಿತೇ ಅಥವಾ ಅಧ್ಯಕ್ಷನೆಂಬ ನೆಲೆಯಲ್ಲಿ ನೀಡಲಾಯಿತೇ ಎಂಬುದು ತಿಳಿದುಬಂದಿಲ್ಲ.
ತಮಾಮ್ ಇನ್ಸಾನಿಯತ್ ಕೆ ಲಿಯೆ: ನೀಲಿ ಸಲ್ವಾರ್ ಕಮೀಜ್ ಧರಿಸಿದ್ದ 56 ವರ್ಷದ ಜರ್ದಾರಿ ತಮ್ಮ ಪುತ್ರ ಬಿಲಾವಲ್, ಒಳಾಡಳಿತ ಸಚಿವ ರೆಹ್ಮಾನ್ ಮಲಿಕ್ ಮತ್ತು 44 ಮಂದಿಯ ನಿಯೋಗದ ಸದಸ್ಯರೊಂದಿಗೆ ಸೂಫಿ ಸಂತರ ದರ್ಗಾದಲ್ಲಿ 20 ನಿಮಿಷಗಳ ಕಾಲ ಇದ್ದರು. ಜರ್ದಾರಿ ಅವರು 42 ಚದರ ಮೀಟರ್ ಉದ್ದದ ಕೆಂಪು 'ಚಾದರ್' ಮತ್ತು ಪುಷ್ಪಗುಚ್ಛಗಳನ್ನು ಸಮಾಧಿಗೆ ಅರ್ಪಿಸಿದರು. ಬಿಲಾವಲ್ ಹಸಿರು ಚಾದರ್ ಅರ್ಪಿಸಿದರು. ಚಾದರ್ ಎಂಬುದು ಧಾರ್ಮಿಕ ಶ್ಲೋಕಗಳು ಬರೆಯಲ್ಪಟ್ಟಿರುವ ಸಾಂಪ್ರದಾಯಿಕ ಬಟ್ಟೆಯಾಗಿದೆ.
'ಇಸ್ ಮುಕದ್ದಸ್ ಮುಕಾಮ್ ಪರ್ ಅಕರ್ ಮುಜೆ ಜೊ ರುಹಾನಿ ಖುಷಿ ಮೆಹಸೂಸ್ ಹುಯಿ ಹೈ ವೊ ನ ಕಭೀ ಎ ಬಯಾನ್ ಹೈ. ಅಲ್ಲಾ ತಲಾ ಸೆ ದುವಾ ಹೈ ಕಿ ವೊ ತಮಾಮ್ ಇನ್ಸಾನಿಯತ್ ಕೆ ಲಿಯೆ ಆಸಾನಿಯಾ ಪೈದಾ ಕರೇ. ಅಮೀನ್' (ಈ ಪವಿತ್ರ ಸ್ಥಳಕ್ಕೆ ಬಂದ ಬಳಿಕ ನನಗೆ ಆಧ್ಯಾತ್ಮಿಕ ಪರಮಾನಂದದ ಅನುಭಾವವಾಗುತ್ತಿದೆ. ಇದನ್ನು ಶಬ್ದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಮನುಕುಲದ ಒಳಿತಿಗೆ ತಕ್ಕ ವಾತಾವರಣ ನಿರ್ಮಿಸುವಂತೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಮೀನ್) ಎಂದು ಸಂದರ್ಶಕರ ಪುಸ್ತಕದಲ್ಲಿ ಜರ್ದಾರಿ ಬರೆದಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications