ಯಡಿಯೂರಪ್ಪಗೆ ಸಿಎಂ ಪೋಸ್ಟ್: ಸಂಜಯ ಕಾಮೆಂಟರಿ

ಕೋರ್ಟ್ ಫ್ಯಾಕ್ಟರ್: ಇದುವರೆಗೂ ಸಾರಾಸಗಟಾಗಿ ಯಡಿಯೂರಪ್ಪ ಅವರ ಬೇಡಿಕೆಯನ್ನು ತಿರಸ್ಕರಿಸುತ್ತಿದ್ದ ಹೈಕಮಾಂಡ್ ಈಗ ಯಡಿಯೂರಪ್ಪ ಅವರತ್ತ ಮೃದು ಭಾವ ತಳೆದಿದೆ. ಹೀಗ್ಯಾಕೆ ಅಂತ ಕೆದಕಿದಾಗ ರಾಜ್ಯ ಇತ್ತೀಚೆಗೆ 2 ಬಾರಿ ರಾಜ್ಯ ಸರಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಅದು ನೇರವಾಗಿ ಮುಖ್ಯಮಂತ್ರಿ ಸದಾನಂದ ಗೌಡಗೆ ತಾಕಿದೆ. ಜತೆಗೆ, ಉಡುಪಿ-ಚಿಕ್ಕಮಗಳೂರು ಚುನಾವಣೆ ಸೋಲೂ ಸದಾನಂದ ಗೌಡರ ಹಣೆಗೆ ಕಟ್ಟಲಾಗಿದೆ.
ಇದರಿಂದ ಹೈಕಮಾಂಡಿನಲ್ಲಿ ಸದಾನಂದ ಗೌಡ ಹೆಸರು ಜಪಿಸುತ್ತಿದ್ದ ಮಂದಿಗೆ ಹಿನ್ನಡೆಯಾಗಿದೆ. ಇದರಿಂದ ಯಡಿಯೂರಪ್ಪ ಎಷ್ಟು ಅಗತ್ಯ ಅನ್ನುವುದಕ್ಕಿಂತ ಅನಿವಾರ್ಯ ಎಂಬ ಪರಿಸ್ಥಿತಿ ಮತ್ತೊಮ್ಮೆ ನಿರ್ಮಾಣವಾಗಿದೆ. ಹಾಗಾಗಿ, ಹೈಕಮಾಂಡ್ ಬೇಸಿಗೆ ಸರ್ಕಸ್ ಗೆ ಕಸರತ್ತು ನಡೆಸಿದೆ. ನೀವೂ ಒಂದು ಕೈನೋಡಿ ಎಂದು ಸಂಜಯ್ ಜೋಷಿಗೆ ವರದಿ ಸಲ್ಲಿಸುವಂತೆ ಹೇಳಲಾಗಿದೆ.
ಮುಖ್ಯಮಂತ್ರಿ ಬದಲಾವಣೆ ಅಗತ್ಯವೇ? ಎನ್ನುವುದಕ್ಕಿಂತ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿಸುವುದು ಅನಿವಾರ್ಯವೇ ಎಂಬುದರ ಬಗ್ಗೆ ವರದಿ ನೀಡುವಂತೆ ಜೋಷಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದ ರಾಜಕೀಯ ಸ್ಥಿತಿಗತಿ ಕುರಿತು ಪಕ್ಷದ ವಿವಿಧ ಮುಖಂಡರ ಜೊತೆ ಚರ್ಚಿಸಲು ಜೋಷಿ ಸದ್ಯದಲ್ಲೇ ಬೆಂಗಳೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ. ದೆಹಲಿಗೆ ಬೇರೆ ಬೇರೆ ತಂಡಗಳಲ್ಲಿ ಆಗಮಿಸುತ್ತಿರುವ ರಾಜ್ಯ ಬಿಜೆಪಿ ಮುಖಂಡರು ಇವರನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದಾರೆ.












Click it and Unblock the Notifications