ಜೈಲುಹಕ್ಕಿ ಜನಾ ರೆಡ್ಡಿ ನಿವೃತ್ತಿ, ಮುಂದೇನು?

ಹಾಗೆ ನೋಡಿದರೆ ಮೇಲ್ಮನೆಯ ಒಟ್ಟು 75 ಸದಸ್ಯರ ಪೈಕಿ 20 ಸದಸ್ಯರ ಅವಧಿ ಮೇ-ಜೂನ್ನಲ್ಲಿ ಮುಕ್ತಾಯವಾಗಲಿದೆ. ಕೆಳಮನೆ ಸದಸ್ಯರು ಅಭ್ಯರ್ಥಿಗಳನ್ನು ಆರಿಸಿ, ಮೇಲ್ಮನೆಗೆ ಕಳಿಸುತ್ತಾರೆ. ಅಭ್ಯರ್ಥಿಗಳು ತಲಾ 18 ಮತ ಪಡೆಯಲೇಬೇಕು. ಪದವೀಧರ-ಶಿಕ್ಷಕ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಮತದಾರರಿಂದ ನೇರ ಆಯ್ಕೆಯಾಗುತ್ತದೆ. ಉನ್ನತ ಶಿಕ್ಷಣ ಸಚಿವರಾಗಿದ್ದ ವಿ.ಎಸ್. ಆಚಾರ್ಯರ ಅವಧಿ 2014ರವರೆಗೆ ಇತ್ತು. ಅಕಾಲಿಕ ನಿಧನದಿಂದಾಗಿ ಆ ಸ್ಥಾನಕ್ಕೂ ಚುನಾವಣೆ ನಡೆಯಬೇಕಾಗಿದೆ.
ಬಿಜೆಪಿ ಸಭಾಧ್ಯಕ್ಷರು ಸೇರಿ 120 ಸದಸ್ಯರು: ಸಾಧ್ಯತೆ 6 ಸದಸ್ಯರನ್ನು ಗೆಲ್ಲಿಸಿಕೊಳ್ಳಬಹುದು. ಈಗಿರುವುದು 4 ಸ್ಥಾನ.
ಕಾಂಗ್ರೆಸ್ 71 ಸದಸ್ಯರು: 3 ಸದಸ್ಯರನ್ನು ಗೆಲ್ಲಿಸಿಕೊಳ್ಳಬಹುದು. ಈಗಿರುವುದು 4 ಸ್ಥಾನ
ಜೆಡಿಎಸ್ 26 ಸದಸ್ಯರು: ಈಗಿರುವುದು 3 ಸ್ಥಾನ; 2 ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.
ಏಳು ಪಕ್ಷೇತರ ಶಾಸಕರು: ಕಾಂಗ್ರೆಸ್ ಅಥವಾ ಬಿಜೆಪಿ ಹೆಚ್ಚುವರಿಯಾಗಿ ಒಂದು ಸ್ಥಾನ ಪಡೆದುಕೊಳ್ಳಬಹುದು.
ನಾಮ ನಿರ್ದೇಶನ: ಹಾಲಿ 3ರ ಅವಧಿ ಮೇ 20ಕ್ಕೆ ಕೊನೆ. ಇಲ್ಲೂ ಜೆಡಿಎಸ್ 1 ಸ್ಥಾನ ಕಳೆದುಕೊಳ್ಳುವುದು ಅನಿವಾರ್ಯ. ಬಿಜೆಪಿ 3 ಸ್ಥಾನ ದಕ್ಕಿಸಿಕೊಳ್ಳಬಹುದು.
ಪದವೀಧರ-ಶಿಕ್ಷಕ: ಮತದಾರರಿಂದ ನೇರ ಆಯ್ಕೆ- ಹಾಲಿ 3ರ ಅವಧಿ ಜೂ. 21ಕ್ಕೆ ಅಂತ್ಯ. ಈ ಮೂವರನ್ನೂ ಬಿಜೆಪಿಯೇ ಮುಂದುವರಿಸಬಹುದು.
ಶಿಕ್ಷಕರ ಕ್ಷೇತ್ರ: ಮತದಾರರಿಂದ ನೇರ ಆಯ್ಕೆ - ಬಿಜೆಪಿಯ ಗಣೇಶ್ ಕಾರ್ನಿಕ್, ಪಕ್ಷೇತರರಾಗಿ ಗೆದ್ದು ಬಿಜೆಪಿ ಸೇರಿರುವ ವೈ.ಎ. ನಾರಾಯಣಸ್ವಾಮಿ, ಪಕ್ಷೇತರ ಸದಸ್ಯ ಮರಿತಿಬ್ಬೇಗೌಡರ ಅವಧಿ ಜೂನ್ 21ಕ್ಕೆ ಕೊನೆ.












Click it and Unblock the Notifications