ಆಹಾ, ಏ.1ರಿಂದ ಬಸವನಗುಡಿ ದೋಸೆಮನೆ ಹಬ್ಬ!

ಗಜಗಾತ್ರದ ದೋಸೆ : ದೋಸೆಮನೆ ಹಬ್ಬದ ಪ್ರಯುಕ್ತ ಏಪ್ರಿಲ್ 1 ಭಾನುವಾರದಂದು ಗಜಗಾತ್ರದ ದೋಸೆಯ ಅನಾವರಣ ನಡೆಯಲಿದೆ. ಬರೋಬ್ಬರಿ 12 ಅಡಿ ಉದ್ದದ ಈ ದೋಸೆಯನ್ನು ಅಂದು ಬೆಳಗ್ಗೆ 11 ಗಂಟೆಗೆ 'ಗಾಳಿಪಟ' ಖ್ಯಾತಿಯ ಕನ್ನಡದ ಪ್ರತಿಭಾನ್ವಿತ ಚಲನಚಿತ್ರ ನಟಿ ನೀತು ಅನಾವರಣಗೊಳಿಸಲಿದ್ದಾರೆ.
ಎಲ್ಲದಕ್ಕೂ ಒಂದೇ ಬೆಲೆ : ಹಬ್ಬದ ಅಂಗವಾಗಿ ಗ್ರಾಹಕರಿಗೆ ಒಂದೇ ಬೆಲೆಯಲ್ಲಿ ವಿವಿಧ ತಿನಿಸುಗಳನ್ನು ಆಕರ್ಷಕ ಬೆಲೆಯಲ್ಲಿ ನೀಡಲಾಗುವುದು ಎನ್ನುತ್ತಾರೆ ದೋಸೆಮನೆ ಹಬ್ಬದ ರೂವಾರಿ ವೆಂಕಟರಾಜ ಭಟ್. ಕಡಲೇ ಬೇಳೆ ಹೋಳಿಗೆ, ಕಾಯಿಹೋಳಿಗೆ, ಖರ್ಜೂರ ಹೋಳಿಗೆಗಳು ಸೇರಿದಂತೆ ಬಿಸಿಬಿಸಿ ಹೋಳಿಗೆ, ಬಜ್ಜಿ, ವೈವಿಧ್ಯಮಯ ಬೋಂಡಾ, ಐಸ್ ಕ್ರೀಂ ಸೇರಿದಂತೆ ಅನೇಕ ತಿನಿಸುಗಳಿಗೆ ಕೇವಲ 10 ರು. ದರ ನಿಗದಿಪಡಿಸಲಾಗಿದೆ. ಬಿಸಿಲ ಬೇಗೆಗೆ ಬಾಯಾರಿಕೆ ತಣಿಸಲು ಉಚಿತ ಮಜ್ಜಿಗೆ ವ್ಯವಸ್ಥೆ ದೋಸೆಮನೆಹಬ್ಬದಲ್ಲಿ ಕಲ್ಪಿಸಲಾಗಿದೆ. ತಳ ಮಹಡಿಯಲ್ಲಿ ಎಲ್ಲಾ ದೋಸೆಗಳಿಗೂ ಒಂದೇ ಬೆಲೆ ನಿಗದಿ ಪಡಿಸಲಾಗಿದೆ. ಹಾಗೂ ಇತರ ತಿನಿಸುಗಳೊಂದಿಗೆ ಮಿನಿದೋಸೆ ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಮೊದಲ ಹಾಗೂ ಎರಡನೇ ಮಹಡಿಯಲ್ಲಿ ಎಲ್ಲಾ ತಿಂಡಿ ತಿನಿಸುಗಳ ಮೇಲೆ ಶೇ. 20 ರಿಯಾಯಿತಿ ನೀಡಲಾಗುವುದು.
ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ತಿಂಡಿಯನ್ನು ಇಷ್ಟಪಡದವರೇ ಇಲ್ಲ. ದೋಸೆ ಎಂದರೆ ಮಸಾಲೆ, ರವಾ, ಸೆಟ್ ದೋಸೆಗಳಷ್ಟೇ ಅಲ್ಲ, ನಾನಾ ಬಗೆಯ ದೋಸೆಗಳಿವೆ. ವಿವಿಧ ಹಣ್ಣುಗಳು, ತರಕಾರಿಗಳು ಸಹಿತ ನಮ್ಮ ನಿತ್ಯ ಬಳಕೆಯ ಹತ್ತಾರು ವಸ್ತುಗಳಿಂದ ದೋಸೆ ತಯಾರಿಸುವುದು ಸಾಧ್ಯವಿದೆ. ಅವುಗಳಿಗೆ ನೆಂಜಿಕೊಳ್ಳಲು ಸಹ ವಿಧ ವಿಧದ ಸಾಂಬಾರ್ಗಳು, ಚಟ್ನಿಗಳು ಇವೆ. ಇವೆಲ್ಲವನ್ನೂ ಒಂದೆಡೆಯಲ್ಲೇ ನೀಡುವ ಪ್ರಯತ್ನ ಈ ದೋಸೆಮನೆ ಹಬ್ಬದಲ್ಲಿ ನಡೆಸಲಾಗುತ್ತದೆ. ಶುಚಿ ರುಚಿಯಲ್ಲಿ ಯಾವುದೇ ರಾಜಿ ಇಲ್ಲದೆ, ಮತ್ತೆ ಮತ್ತೆ ಇಲ್ಲಿಗೆ ಬಂದು ದೋಸೆ ತಿನ್ನುವ ಬಯಕೆ ಹುಟ್ಟಿಸುವ ರೀತಿಯಲ್ಲಿ ಇಲ್ಲಿ ದೋಸೆ ತಯಾರಾಗುತ್ತಿದೆ.
ಸ್ಥಳ : ದೋಸೆಮನೆ, ಬಸವನಗುಡಿಯ ವಿವಿಪುರಂ ಜೈನ್ ಕಾಲೇಜು ಎದುರು, ಬೆಂಗಳೂರು.
ಸಮಯ : ಬೆಳಿಗ್ಗೆ 11 ಗಂಟೆಗೆ
ಹೆಚ್ಚಿನ ಮಾಹಿತಿಗೆ : 98450 65870.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications