ಆಹಾ, ಏ.1ರಿಂದ ಬಸವನಗುಡಿ ದೋಸೆಮನೆ ಹಬ್ಬ!

ಗಜಗಾತ್ರದ ದೋಸೆ : ದೋಸೆಮನೆ ಹಬ್ಬದ ಪ್ರಯುಕ್ತ ಏಪ್ರಿಲ್ 1 ಭಾನುವಾರದಂದು ಗಜಗಾತ್ರದ ದೋಸೆಯ ಅನಾವರಣ ನಡೆಯಲಿದೆ. ಬರೋಬ್ಬರಿ 12 ಅಡಿ ಉದ್ದದ ಈ ದೋಸೆಯನ್ನು ಅಂದು ಬೆಳಗ್ಗೆ 11 ಗಂಟೆಗೆ 'ಗಾಳಿಪಟ' ಖ್ಯಾತಿಯ ಕನ್ನಡದ ಪ್ರತಿಭಾನ್ವಿತ ಚಲನಚಿತ್ರ ನಟಿ ನೀತು ಅನಾವರಣಗೊಳಿಸಲಿದ್ದಾರೆ.
ಎಲ್ಲದಕ್ಕೂ ಒಂದೇ ಬೆಲೆ : ಹಬ್ಬದ ಅಂಗವಾಗಿ ಗ್ರಾಹಕರಿಗೆ ಒಂದೇ ಬೆಲೆಯಲ್ಲಿ ವಿವಿಧ ತಿನಿಸುಗಳನ್ನು ಆಕರ್ಷಕ ಬೆಲೆಯಲ್ಲಿ ನೀಡಲಾಗುವುದು ಎನ್ನುತ್ತಾರೆ ದೋಸೆಮನೆ ಹಬ್ಬದ ರೂವಾರಿ ವೆಂಕಟರಾಜ ಭಟ್. ಕಡಲೇ ಬೇಳೆ ಹೋಳಿಗೆ, ಕಾಯಿಹೋಳಿಗೆ, ಖರ್ಜೂರ ಹೋಳಿಗೆಗಳು ಸೇರಿದಂತೆ ಬಿಸಿಬಿಸಿ ಹೋಳಿಗೆ, ಬಜ್ಜಿ, ವೈವಿಧ್ಯಮಯ ಬೋಂಡಾ, ಐಸ್ ಕ್ರೀಂ ಸೇರಿದಂತೆ ಅನೇಕ ತಿನಿಸುಗಳಿಗೆ ಕೇವಲ 10 ರು. ದರ ನಿಗದಿಪಡಿಸಲಾಗಿದೆ. ಬಿಸಿಲ ಬೇಗೆಗೆ ಬಾಯಾರಿಕೆ ತಣಿಸಲು ಉಚಿತ ಮಜ್ಜಿಗೆ ವ್ಯವಸ್ಥೆ ದೋಸೆಮನೆಹಬ್ಬದಲ್ಲಿ ಕಲ್ಪಿಸಲಾಗಿದೆ. ತಳ ಮಹಡಿಯಲ್ಲಿ ಎಲ್ಲಾ ದೋಸೆಗಳಿಗೂ ಒಂದೇ ಬೆಲೆ ನಿಗದಿ ಪಡಿಸಲಾಗಿದೆ. ಹಾಗೂ ಇತರ ತಿನಿಸುಗಳೊಂದಿಗೆ ಮಿನಿದೋಸೆ ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಮೊದಲ ಹಾಗೂ ಎರಡನೇ ಮಹಡಿಯಲ್ಲಿ ಎಲ್ಲಾ ತಿಂಡಿ ತಿನಿಸುಗಳ ಮೇಲೆ ಶೇ. 20 ರಿಯಾಯಿತಿ ನೀಡಲಾಗುವುದು.
ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ತಿಂಡಿಯನ್ನು ಇಷ್ಟಪಡದವರೇ ಇಲ್ಲ. ದೋಸೆ ಎಂದರೆ ಮಸಾಲೆ, ರವಾ, ಸೆಟ್ ದೋಸೆಗಳಷ್ಟೇ ಅಲ್ಲ, ನಾನಾ ಬಗೆಯ ದೋಸೆಗಳಿವೆ. ವಿವಿಧ ಹಣ್ಣುಗಳು, ತರಕಾರಿಗಳು ಸಹಿತ ನಮ್ಮ ನಿತ್ಯ ಬಳಕೆಯ ಹತ್ತಾರು ವಸ್ತುಗಳಿಂದ ದೋಸೆ ತಯಾರಿಸುವುದು ಸಾಧ್ಯವಿದೆ. ಅವುಗಳಿಗೆ ನೆಂಜಿಕೊಳ್ಳಲು ಸಹ ವಿಧ ವಿಧದ ಸಾಂಬಾರ್ಗಳು, ಚಟ್ನಿಗಳು ಇವೆ. ಇವೆಲ್ಲವನ್ನೂ ಒಂದೆಡೆಯಲ್ಲೇ ನೀಡುವ ಪ್ರಯತ್ನ ಈ ದೋಸೆಮನೆ ಹಬ್ಬದಲ್ಲಿ ನಡೆಸಲಾಗುತ್ತದೆ. ಶುಚಿ ರುಚಿಯಲ್ಲಿ ಯಾವುದೇ ರಾಜಿ ಇಲ್ಲದೆ, ಮತ್ತೆ ಮತ್ತೆ ಇಲ್ಲಿಗೆ ಬಂದು ದೋಸೆ ತಿನ್ನುವ ಬಯಕೆ ಹುಟ್ಟಿಸುವ ರೀತಿಯಲ್ಲಿ ಇಲ್ಲಿ ದೋಸೆ ತಯಾರಾಗುತ್ತಿದೆ.
ಸ್ಥಳ : ದೋಸೆಮನೆ, ಬಸವನಗುಡಿಯ ವಿವಿಪುರಂ ಜೈನ್ ಕಾಲೇಜು ಎದುರು, ಬೆಂಗಳೂರು.
ಸಮಯ : ಬೆಳಿಗ್ಗೆ 11 ಗಂಟೆಗೆ
ಹೆಚ್ಚಿನ ಮಾಹಿತಿಗೆ : 98450 65870.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications