ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜಾತಶತ್ರು ಆಚಾರ್ಯರಿಗೆ ಇದೆಂಥಾ ಶ್ರದ್ಧಾಂಜಲಿ !?

By Srinath
|
Google Oneindia Kannada News

condolence-to-acharya-bad-precedence-in-assembly
ಬೆಂಗಳೂರು, ಮಾ.20: ಯಾವ ರೆಸಾರ್ಟು ಸಂಸ್ಕೃತಿ, ಯಾವ ಬಂಡಾಯ, ಯಾವ ಅಶಿಸ್ತನ್ನು ಜೀವನದುದ್ದಕ್ಕೂ ವಿರೋಧಿಸುತ್ತಾ ಆರಂಭದಿಂದಲೂ ಪಕ್ಷದ ಮೌಲ್ಯಗಳಿಗೆ ಅಂಟಿಕೊಂಡು ಜೀವನ ಸವೆಸಿದ ನಾಯಕನಿಗೆ ಇದೆಂಥಾ ಶ್ರದ್ಧಾಂಜಲಿ !?

ಏನಾಯಿತೆಂದರೆ ವಿಎಸ್ ಆಚಾರ್ಯರಿಗೆ ಇಂದು ವಿಧಾನಮಂಡಲದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆಳಮನೆಯಲ್ಲಿ 100ಕ್ಕೂ ಹೆಚ್ಚು ಶಾಸಕರನ್ನು ಹೊಂದಿರುವ ಬಿಜೆಪಿಯ ವತಿಯಿಂದ ಕೇವಲ 34 ಮಂದಿ ಹಾಜರಿದ್ದರು ಎಂಬುದು ನಾಡಿನ ದೌರ್ಭಾಗ್ಯವೇ ಸರಿ.

ಅಳಿದುಳಿದ ಒಂದಿಬ್ಬರು ಮಹಾನುಭಾವರೇ ಆಚಾರ್ಯರಿಗೆ ಶ್ರದ್ಧೆಯಿಂದ ಅಶ್ರುತರ್ಪಣ ಸಲ್ಲಿಸಿದರು ಎಂಬುದು ರಾಜಕೀಯ ವಿಪರ್ಯಾಸ. ಯಡಿಯೂರಪ್ಪ ಬಣದ 65-70 ಶಾಸಕರು ದೂರವುಳಿದ ಕಾರಣ ಸದನ ಬಣಗುಡುತ್ತಿತ್ತು. ಯಡ್ಡಿ ಬಣ ಇನ್ನೂ ಒಂದು ಹೆಜ್ಜೆ ಅಂಧಪತನ ಕಂಡು ರೆಸಾರ್ಟಿನಲ್ಲೇ ಸಂತಾಪ ಸಲ್ಲಿಸಿತು.

ಹಿಂದೂ ಸಂಸ್ಕೃತಿಯ ಪ್ರವಾದಿಯಂತೆ ಬೊಂಬಡಾ ಹೊಡೆಯುವ ಬಿಜೆಪಿ ಮಂದಿಯ ಸ್ಥಿತಿ ಕಂಡು ನಾಡಿನ ಜನತೆಗೆ ನಗಬೇಕೋ, ಅಳಬೇಕೋ ತಿಳಿಯದಾಗಿದೆ. ಅತ್ತ 'ಮೇಲ್ಮನೆ'ಯಲ್ಲಿ, ತನ್ನ ಸಾವಿಗೆ ತಮ್ಮದೇ ಪಕ್ಷದ ನಾಯಕರು ಒಂದೆಡೆ ಸೇರಿ ನಾಲ್ಕು ಹನಿ ಹಾಕದೇ ಹೋದರೇ ಎಂದು ಆಚಾರ್ಯರ ಆತ್ಮ ಮಗ್ಗಲು ಬದಲಿಸಿರಲೂ ಸಾಕು! Shame on You BJP.

English summary
Karnataka BJP battle - Team BS Yeddyurappa condole death of VS Acharya in Resort. There wereonly 34 members of ruling BJP in the Lower House today (Mar 20). A bad precedence indeed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X