ರೆಡ್ಡಿಯನ್ನು ಹಲಸೂರು ಠಾಣೆಗೇ ಕರೆತಂದಿದ್ದು ಏಕೆ?

ಅದಕ್ಕಾಗಿ ಆ ಗೊಡವೆಯೇ ಬೇಡ. ಬೆಂಗಳೂರು ರಸ್ತೆಗಳು ಹೇಗೂ ಬೆಳ್ಳಂಬಳಗ್ಗೆ ದಣಿವಾರಿಸಿಕೊಳ್ಳುತ್ತಿರುತ್ತವೆ. ಕಣ್ಮುಚ್ಚಿಕೊಂಡು ಮೊದಲು ರೆಡ್ಡಿಯನ್ನು ಕೋರ್ಟಿಗೆ ಸಮೀಪವಿರುವ ಜೈಲಿನಲ್ಲಿ ತಂದು ಬಿಟ್ಟರೆ ಸಾಕು. ಮುಂದಿನದೆಲ್ಲ ಸಲೀಸು. ಅಲ್ಲಿಂದ ಕೂಗಳೆತೆಯಲ್ಲಿರುವ ಕೋರ್ಟಿನಲ್ಲಿ ಬಿಟ್ಟುಬರುವುದು ಏನೂ ಕಷ್ಟವಾಗಲಾರದು ಎಂದೆಣೆಸಿದ ಕೇಂದ್ರ ಡಿಸಿಪಿ ಜಿ. ರಮೇಶ್ ಸಾಹೇಬರು ರೆಡ್ಡಿಯನ್ನು ಅನಾಯಾಸವಾಗಿ ಅಲಸೂರು ಗೇಟ್ ಠಾಣೆಯಲ್ಲಿರುವ ಜೈಲಿಗೆ ಕರೆತಂದಿದ್ದಾರೆ. ಅಲ್ಲಿ ಮೊದಲ ಮಹಡಿಯಲ್ಲಿರುವ ಕೊಠಡಿಯೊಂದರಲ್ಲಿ ಇದೀಗ ಗಣಿಧಣಿ ದಣಿವಾರಿಸಿಕೊಳ್ಳುತ್ತಿದ್ದಾರೆ.
ಅಂದಹಾಗೆ ರೆಡ್ಡಿಗೆ ಅವರ ಸೋದರಿ, ಸಂಸದೆ ಜೆ. ಶಾಂತಾ, ಕಂಪ್ಲಿಯ ಸುರಸುಂದರಾಂಗ ಶಾಸಕ ಸುರೇಶ್ ಬಾಬು ಸ್ವಾಗತ ಕೋರಿದರು. ಇನ್ನು ದೇವನಹಳ್ಳಿಯಿಂದಲೇ ರೆಡ್ಡಿಯಿದ್ದ ಬಸ್ಸಿಗೆ ಸಮನಾಂತರವಾಗಿ ಶ್ರೀರಾಮುಲು ಸಹ ಬಸ್ಸಿನಲ್ಲಿ ಪ್ರಯಾಣಿಸಿದರು. ಜತೆಗೆ 50ಕ್ಕೂ ಹೆಚ್ಚು ವಾಹನಗಳು ರೆಡ್ಡಿಯನ್ನು ಹಿಂಬಾಲಿಸಿದವು.












Click it and Unblock the Notifications