ಎಲ್ಐಸಿಯಿಂದ ಹೊಸ ಕೊಡುಗೆ - ಜೀವನ್ ವೃದ್ಧಿ

ವಿಮೆಯ ಅವಧಿ ಮುಗಿದ ನಂತರ ಸಿಗುವ ಪ್ರತಿಫಲ ಖಚಿತ. ಈ ಕೊಡುಗೆ ಕೇವಲ 120 ದಿನ ಮಾತ್ರ ಲಭ್ಯವಾಗಿರುತ್ತದೆ. ಇನ್ಶೂರನ್ಸ್ ಮತ್ತು ರಿಟರ್ನ್ಸ್ ಸಮ್ಮಿಲನದ ಈ ಪ್ಲಾನ್ ನಿಂದ ಬಹುಮುಖಿ ಲಾಭಗಳಿವೆ. ಅವಗಳೆಂದರೆ,
ಭದ್ರತೆ : ರಿಸ್ಕ್ ಕವರ್ ಆಗಿ ಕಟ್ಟುವ ಒಂದೇ ಪ್ರೀಮಿಯಂನ ಐದು ಪಟ್ಟಿನಷ್ಟು ಮೊತ್ತವನ್ನು ನೀಡಲಾಗುತ್ತದೆ.
ಬೆಳವಣಿಗೆ : ಖಚಿತವಾಗಿ ದೊರೆಯುವ ಮೊತ್ತದ ಜೊತೆಗೆ ಇತರ ಆಕರ್ಷಕ ಕೊಡುಗೆಗಳೂ ಇರುತ್ತವೆ.
ಅನುಕೂಲ : ಪ್ರೀಮಿಯಂ ಕಟ್ಟಬೇಕಾಗಿರುವುದು ಒಂದು ಬಾರಿ.
ಸ್ವಾತಂತ್ರ್ಯ : ಅರ್ಹತೆ ಇದ್ದವರಿಗೆ ಇಷ್ಟೇ ಮೊತ್ತ ಕಟ್ಟಬೇಕೆಂಬ ಕಟ್ಟಳೆಯಿಲ್ಲ. ಯಾವುದೇ ಮೊತ್ತ ಕಟ್ಟಲು ಪಾಲಿಸಿದಾರರು ಸ್ವತಂತ್ರರು.
ಲಿಕ್ವಿಡಿಟಿ : ಯೋಜನೆ ಆರಂಭಿಸಿದ 1 ವರ್ಷದ ನಂತರ ಪಾಲಿಸಿ ಸಾಲ ದೊರೆಯುವುದು.
ಪಾಲಿಸಿ ಇನ್ನೂ ಜಾರಿಯಲ್ಲಿದ್ದಾಗಲೇ ಒಂದು ವೇಳೆ ಸಾವಿನಂತಹ ಅಹಿತಕರ ಘಟನೆ ಸಂಭವಿಸಿದರೆ, ಇತರ ಕೊಡುಗೆಗಳನ್ನು ಹೊರತುಪಡಿಸಿ, ವಿಮೆ ಮಾಡಿದ ಮೊತ್ತದ ಐದು ಪಟ್ಟು ಹಣ ಖಚಿತವಾಗಿ ಕೂಡಲೆ ದೊರೆಯುತ್ತದೆ. ಪಾಲಿಸಿ ಅವಧಿ ಮುಗಿದ ಮೇಲೆ, ಪಾಲಿಸಿಯ ಪ್ರೀಮಿಯಂ ಮತ್ತು ವಯಸ್ಸಿನ ಆಧಾರದ ಮೇಲೆ, ಆಶ್ವಾಸನೆ ನೀಡಲಾದ ಸಂಪೂರ್ಣ ಮೊತ್ತ ಪಾಲಿಸಿದಾರನಿಗೆ ಸಿಗುತ್ತದೆ. ಪಾಲಿಸಿ ಅವಧಿ ಮುಗಿಯಲು ಒಂದು ವರ್ಷವಿದ್ದಾಗ ಹೆಚ್ಚುವರಿ ಲಾಯಲ್ಟಿ ಮೊತ್ತದ ದರವನ್ನು ನಿಗಮ ನಿಗದಿಪಡಿಸುತ್ತದೆ.
8 ವರ್ಷ ಮೇಲ್ಪಟ್ಟವರು ಮತ್ತು 50 ವರ್ಷಕ್ಕಿಂತ ಕೆಳಗಿನ ವ್ಯಕ್ತಿ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಅವಧಿಯನ್ನು ಕೂಡ 10 ವರ್ಷಕ್ಕೆ ನಿಗದಿಪಡಿಸಲಾಗಿದೆ. ಪಾಲಿಸಿದಾರನಿಗೆ ದೊರೆಯುವ ಕನಿಷ್ಠ ಮೊತ್ತ 1.5 ಲಕ್ಷ ರು., ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಈ ಪಾಲಿಸಿಯ ಚಂದಾದಾರರಾಗಬೇಕಿದ್ದರೆ ಕನಿಷ್ಠ 30,000 ರು. ಕಟ್ಟಬೇಕು. ನಂತರ 1,000 ರು. ಹೆಚ್ಚುತ್ತಾ ಹೋಗುತ್ತದೆ.
ವಿದ್ಯಾಭ್ಯಾಸಕ್ಕಾಗಿ, ತಮ್ಮ ಮಕ್ಕಳ ಅಭ್ಯುದಯಕ್ಕಾಗಿ ಹಣ ಹೂಡುವವರಿಗೆ, ಕಷ್ಟಪಟ್ಟು ದುಡಿದು ಹಣ ಉಳಿಸುವ ನೌಕರರಿಗಾಗಿ, ಉದ್ಯಮ ಸ್ಥಾಪಿಸಲು ಯೋಜಿಸುವವರಿಗಾಗಿ ಈ ಯೋಜನೆ ಅತ್ಯಂತ ಸೂಕ್ತವಾಗಿದೆ. ಇರುವ ನಿಯಮಗಳ ಪ್ರಕಾರ ಪಾಲಿಸಿದಾರನಿಗೆ ಆದಾಯ ತೆರಿಗೆ ಕಾಯ್ದೆಯ 80ಸಿ ನಿಯಮದಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ದೊರೆಯುತ್ತದೆ. ಒಂದು ವರ್ಷದ ನಂತರ ಸಾಲದ ಸೌಲಭ್ಯ ಕೂಡ ಇದೆ.
ಹೆಚ್ಚಿನ ವಿವರಗಳು ಬೇಕಿದ್ದರೆ ಸಂಪರ್ಕಿಸಿ
ಕಾರ್ಯನಿರ್ವಾಹಕ ನಿರ್ದೇಶಕ
ವಿಳಾಸ : ಎಲ್ಐಸಿ ಆಫ್ ಇಂಡಿಯಾ, ಸೆಂಟ್ರಲ್ ಆಫೀಸ್ ಮುಂಬೈ
ದೂರವಾಣಿ : 022 22028307,
ಈಮೇಲ್ : [email protected]
www.licindia.in
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications