ಹಿಂದೂ ಯುವತಿ ಕಿಡ್ನಾಪ್, ಬಲವಂತ ಮತಾಂತರ

ಘೋಟ್ಕಿ ಜಿಲ್ಲೆಯಲ್ಲಿ ಹಿಂದೂ ಯವತಿಯೊಬ್ಬಳ ಕಿಡ್ನಾಪ್ ಮಾಡಿರುವ ಘಟನೆ ಈಗ ರಾಷ್ಟ್ರಪತಿ ಆಸೀಫ್ ಅಲಿ ಜರ್ದಾರಿ ಸಚಿವಾಲಯ ತನಕ ತಲುಪಿದೆ.
ಸ್ಥಳೀಯ ಅಧಿಕಾರಿಗಳು ಈ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂಬ ವರದಿ ಕೇಳಿದ ಮೇಲೆ ಸ್ವತಃ ಜರ್ದಾರಿ ಕೆಂಡಾಮಂಡಲವಾಗಿದ್ದಾರೆ.
ಈ ಪ್ರಕರಣ ಕುರಿತು ಪಾರದರ್ಶಕ ತನಿಖೆ ನಡೆಸುವಂತೆ ರಾಷ್ಟ್ರಪತಿ ಜರ್ದಾರಿ ತಕ್ಷಣವೇ ಸಿಂಧ್ ಪ್ರಾಂತ್ಯದ ಸರ್ಕಾರಕ್ಕೆ ಆದೇಶ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ದೌರ್ಜನ್ಯ ಎಸೆಗುವುದನ್ನು ಸಹಿಸಲಾಗುವುದಿಲ್ಲ ಎಂದು ಜರ್ದಾರಿ ಹೇಳಿದ್ದಾರೆ. ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಶೇ.5 ರಷ್ಟು ಮಾತ್ರ ಹಿಂದೂಗಳಿದ್ದಾರೆ.












Click it and Unblock the Notifications