ಕೆಂಗೇರಿ ಇನ್ಸ್ಪೆಕ್ಟರ್ ನಾಯಕ್ ಶಿಷ್ಯ ಗಣಪತಿ ಜೈಲಿಗೆ

ನವೆಂಬರ್ 26ರಂದು ಕೆಂಗೇರಿ ಪೊಲೀಸ್ ಇನ್ಸ್ಪೆಕ್ಟರ್ ವಾಸುದೇವ್ ನಾಯಕ್ ಲಾರಿ ಮಾಲೀಕರೊಬ್ಬರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಅಂಕೋಲಾದ ಗಣಪತಿ ನಾಯಕ್ ಮೂಲೆಮನೆ ತಲೆಮರೆಸಿಕೊಂಡಿದ್ದ.
ಈ ಹಿನ್ನೆಲೆಯಲ್ಲಿ ಘಟನೆ ನಡೆದ ತಕ್ಷಣ ಇಲಾಖಾ ತನಿಖೆ ನಡೆದಿತ್ತು. ಆಗ ಕೆಂಗೇರಿ ಠಾಣೆಯನ್ನು ತಪಾಸಣೆಗೊಳಪಡಿಸಲಾಗಿತ್ತು. ಆ ವೇಳೆ ಜಿಂಕೆ ಚರ್ಮ ಮತ್ತು ಆನೆ ದಂತದ ತುಂಡುಗಳು ಪತ್ತೆಯಾಗಿದ್ದವು. ಆ ಬಗ್ಗೆ ಇನ್ಸ್ಪೆಕ್ಟರ್ ವಾಸುದೇವರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಗಣಪತಿ ಕಾರವಾರ ಸುತ್ತಮುತ್ತಲಿನಲ್ಲಿ ಕಾಡುಗಳ್ಳತನದಲ್ಲಿ ಭಾಗಿಯಾಗಿರುವುದು ಗೋಚರವಾಯಿತು.
ಆರೋಪಿ ಗಣೇಶನ ಶೋಧಕ್ಕಾಗಿ ಕಾರವಾರ ಪೊಲೀಸರ ನೆರವನ್ನು ಪಡೆಯಲಾಯಿತು. ಖಚಿತ ಮಾಹಿತಿ ಮೇಲೆ ಅಂಕೋಲಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ಬಳಿಕ ಕಳೆದ ಬುಧವಾರವೇ ಆರೋಪಿಯನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.












Click it and Unblock the Notifications