ನಳಿನಾ 'ಅಣಕು' ಸಾವು: 4 ಅಧಿಕಾರಿಗಳ ಅಮಾನತು

ಸಸ್ಪೆಂಡ್ ಆದ ಅಧಿಕಾರಿಗಳ ವಿವರ: 1. ದೇವರಾಜು- ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಪೀಣ್ಯ ವಿಭಾಗ, 2. ಕೆ ನಾರಾಯಣ ಸ್ವಾಮಿ- ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಹೆಬ್ಬಾಳ ವಿಭಾಗ, 3. ನಿಸ್ಸಾರ್ ಅಹಮದ್- ಠಾಣಾಧಿಕಾರಿ, ಹೈಗ್ರೌಂಡ್ಸ್ ಅಗ್ನಿಶಾಮಕ ಠಾಣೆ ಮತ್ತು 4. ಮರಿಯಣ್ಣ- ಠಾಣಾಧಿಕಾರಿ, ಯಶವಂತಪುರ ಹೈಗ್ರೌಂಡ್ಸ್ ಅಗ್ನಿಶಾಮಕ ಠಾಣೆ.
ಪೀಣ್ಯ ವಿಭಾಗದ ಅಗ್ನಿಶಾಮಕ ದಳದ ಅಣಕು ಪ್ರದರ್ಶನದ ವೇಳೆ ಶುಕ್ರವಾರ ಮಧ್ಯಾಹ್ನ ಈ ಅನಾಹುತ ಸಂಭವಿಸಿತ್ತು. ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಗಾರ್ಮೆಂಟ್ಸ್ ಉದ್ಯೋಗಿ ಸಿ ಆರ್ ನಳಿನಾ (25) ದುರಂತ ಸಾವನ್ನಪ್ಪಿದ್ದರು.
ಹುಟ್ಟೂರಿನಲ್ಲಿ ಶನಿವಾರ ಅಂತ್ಯಕ್ರಿಯೆ: ನಳಿನಾ ಗೌರಿಬಿದನೂರು ನಗರಗೆರೆ ಹೋಬಳಿಯ ಚಿತ್ತಾವಲಹಳ್ಳಿಯ ರಾಮಕೃಷ್ಣ ರೆಡ್ಡಿ ಎಂಬವರ ಮಗಳು. ನಳಿನಾ ಗೌರಿಬಿದನೂರಿನ ಆಚಾರ್ಯ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪದವಿ ಮುಗಿಸಿ, ಎಂಎಸ್ ಡಬ್ಲ್ಯು ವ್ಯಾಸಂಗ ಮಾಡಿದ್ದರು. ಮುಂದೆ ಪಿಎಚ್. ಡಿ ಮಾಡುವ ಇರಾದೆಯನ್ನೂ ಹೊಂದಿದ್ದರು.
ನಳಿನಾ ಅವರ ಅಂತ್ಯಕ್ರಿಯೆಯು ಹುಟ್ಟೂರಿನಲ್ಲಿ ಶನಿವಾರ ನಡೆಯಿತು. ನಳಿನಾ ಮೃತದೇಹ ಗ್ರಾಮಕ್ಕೆ ಬರುತ್ತಿದ್ದಂತೆ ಇಡೀ ಊರಿನ ಜನ ದುಖತಪ್ತರಾದರು. ನಳಿನಾ ಕೆಲಸ ಮಾಡುತ್ತಿದ್ದ ಬಾಂಬೆ ರೇಯಾನ್ ಫ್ಯಾಷನ್ಸ್ ಗಾರ್ಮೆಂಟ್ ಕಾರ್ಖಾನೆಯಿಂದ 500 ಕ್ಕೂ ಹೆಚ್ಚು ನೌಕರರು ಬಸ್ ಗಳಲ್ಲಿ ಗ್ರಾಮಕ್ಕೆ ಆಗಮಿಸಿ, ಅಗಲಿದ ತಮ್ಮ ಸಹೋದ್ಯೋಗಿಗೆ ಅಂತಿಮ ನಮನ ಸಲ್ಲಿಸಿದರು.












Click it and Unblock the Notifications