8 ಲಕ್ಷ ಬ್ಯಾಂಕ್ ನೌಕರರು ಮಂಗಳವಾರ ಮುಷ್ಕರಕ್ಕೆ
ನವದೆಹಲಿ,
ಫೆ. 24: ಸರಕಾರಿ ಸ್ವಾಮ್ಯದ ಬ್ಯಾಂಕ್ಗಳ ಏಳು ಕಾರ್ಮಿಕ ಸಂಘಟನೆಗಳ (AIBEA) ಅಂದಾಜು 8 ಲಕ್ಷ ಉದ್ಯೋಗಿಗಳು ಫೆ. 28ರಂದು ಒಂದು ದಿನದ ಮುಷ್ಕರಕ್ಕೆ ಕರೆ ಕೊಟ್ಟಿವೆ. ಸುಸ್ತಿ ಸಾಲದ ಮರು ಪಾವತಿಗೆ ಕಠಿಣ ಕ್ರಮ, ಬ್ಯಾಂಕ್ಗಳ ಪ್ರಮುಖವಲ್ಲದ ಕೆಲಸ ಕಾರ್ಯಗಳನ್ನು ಖಾಸಗಿ ವಲಯಕ್ಕೆ ಹೊರಗುತ್ತಿಗೆ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಮುಷ್ಕರ ನಡೆಸಲಿದ್ದಾರೆ. id="toptextpromo">ಮುಷ್ಕರ
ಯಶಸ್ವಿಯಾದರೆ ಅದರಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ವಹಿವಾಟಿಗೆ ತೀವ್ರ ಧಕ್ಕೆ ತಟ್ಟುವ ಸಾಧ್ಯತೆಗಳಿವೆ. ಈ ಸರಕಾರಿ ಬ್ಯಾಂಕುಗಳು ದೇಶಾದ್ಯಂತ 87,000 ಶಾಖೆಗಳನ್ನು ಹೊಂದಿದ್ದು, ದೇಶದ ಒಟ್ಟು ಬ್ಯಾಂಕಿಂಗ್ ವ್ಯವಹಾರದಲ್ಲಿ ಶೇ. 75ರಷ್ಟು ಪಾಲು ಹಿಂದಿವೆ. id='are-slot-1' class='oiad oi-axt oiadv'> id='top-searched-articles'>ಬ್ಯಾಂಕ್ಗಳ
ವಸೂಲಾಗದ ಸಾಲದ ಪ್ರಮಾಣವು ದಿನೇ ದಿನೇ ಹೆಚ್ಚುತ್ತಿದೆ. ಇದು ಬ್ಯಾಂಕ್ಗಳ ಲಾಭ ಮತ್ತು ಕಾರ್ಯನಿರ್ವಹಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸಾಲದ ಮರು ಪಾವತಿಗೆ ಕಠಿಣ ಕ್ರಮಗಳ ಜಾರಿಗೆ ಒತ್ತಾಯಿಸಿ ಮತ್ತು ಖಂಡೇಲ್ವಾಲ್ ಸಮಿತಿಯ ಏಕಪಕ್ಷೀಯ ಶಿಫಾರಸುಗಳ ಜಾರಿ ವಿರೋಧಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ. ಎಚ್. ವೆಂಕಟಾಚಲಂ ತಿಳಿಸಿದ್ದಾರೆ.











Click it and Unblock the Notifications