ಯಡಿಯೂರಪ್ಪ ಸ್ಪಷ್ಟ ನಿಲುವೇನು? ಫೆ.27ರಂದು ಪ್ರಕಟ

BS Yeddyurappa
ಬೆಂಗಳೂರು, ಫೆ. 23 : ಯಡಿಯೂರಪ್ಪ ಅವರು ತಮ್ಮ ನಿವಾಸದಲ್ಲಿ ಕರೆದ ಭೋಜನ ಕೂಟದಲ್ಲಿ ಸಾಕಷ್ಟು ಕೂಗಾಟ, ಹಾರಾಟಗಳು ನಡೆದಿವೆ, ದೂರು ದುಮ್ಮಾನಗಳು ಕೇಳಿಬಂದಿವೆ. ಬಹಿರಂಗವಾಗಿ ಯಾವುದೂ ಸ್ಪಷ್ಟವಾಗಿಲ್ಲದಿದ್ದರೂ, ಆಂತರಿಕವಾಗಿ ತಮ್ಮ ನಿಲುವೇನೆಂಬುದನ್ನು ಯಡಿಯೂರಪ್ಪನವರಂತೂ ಎಲ್ಲ ಶಾಸಕರಿಗೆ ಸ್ಪಷ್ಟಪಡಿಸಿದ್ದಾರೆ.

ಆ ನಿಲುವು ಏನೆಂಬುದನ್ನು ಫೆ.27ರಂದು ತಮ್ಮ ಹುಟ್ಟುಹಬ್ಬದಂದು ಯಡಿಯೂರಪ್ಪನವರು ಪ್ರಕಟಿಸಲಿದ್ದಾರೆ. ಯಡಿಯೂರಪ್ಪನವರ ನಿಲುವಿಗಿಂತ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಉಳಿದ ಶಾಸಕರ ನಿಲುವೇನು ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಬಲ್ಲ ಮೂಲಗಳ ಪ್ರಕಾರ, ಶೇ.50ಕ್ಕೂ ಹೆಚ್ಚಿನ ಶಾಸಕರು ಮತ್ತೆ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಬೇಕೆಂದು ನಿಲುವು ಪ್ರಕಟಿಸಿದ್ದಾರೆ.

ಕೆಲ ಶಾಸಕರು ಸದಾನಂದ ಗೌಡರು, ದೇವೇಗೌಡರ ಚೇಲಾನಂತೆ ವರ್ತಿಸುತ್ತ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರಿಗೆ ದೂರಿದ್ದಾರೆ. ಕೆಲವರು ಯಡಿಯೂರಪ್ಪಗೆ ಮುಖ್ಯಮಂತ್ರಿ ಪಟ್ಟ ದೊರೆಯದಿದ್ದರೂ ಉನ್ನತ ಸ್ಥಾನಮಾನವಾದರೂ ದೊರಕಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಭೆಯಲ್ಲಿ 67 ಶಾಸಕರು, 11 ಸಂಸದರು, 18 ವಿಧಾನಪರಿಷತ್ ಸದಸ್ಯರು ಭಾಗಿಯಾಗಿದ್ದರು.

ಹಾಗೆ ಕಾರಣವಿಲ್ಲದೆ ಸದಾನಂದ ಗೌಡರ ಪಟ್ಟ ಕಿತ್ತುಕೊಳ್ಳಬಾರದು ಎಂದು ಕೆಲವರು ಸ್ಪಷ್ಟವಾಗಿ ಹೇಳಿದ್ದಾರೆ. ಆ ಹಂತದಲ್ಲಿ ತಾಳ್ಮೆ ಕಳೆದುಕೊಂಡ ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದವರ ವಿರುದ್ಧ ಕಿಡಿಕಾರಿದ್ದಾರೆ. ಈ ನಡುವೆ, ಜಗದೀಶ್ ಶೆಟ್ಟರ್ ಅವರ ಬಣ ಕೂಡ ಈ ಸಭೆಯಲ್ಲಿ ಭಾಗವಹಿಸಿ ಹಸನ್ಮುಖಿಯಾಗಿ ಹೊರಬಂದಿದೆ. ಸದ್ಯಕ್ಕೆ ಏಕಾಂಗಿಯಾಗಿರುವ ಸದಾನಂದ ಗೌಡರನ್ನು ತೊಲಗಿಸಿ ಆ ಪಟ್ಟದಲ್ಲಿ ಯಡಿಯೂರಪ್ಪ ಕೂಡುತ್ತಾರಾ, ಶೆಟ್ಟರ್‌ಗೆ ಪಟ್ಟಾಭಿಷೇಕ ಮಾಡುತ್ತಾರಾ ಎಂಬುದು ಗಡ್ಕರಿ ಬಂದ ನಂತರ ತಿಳಿದುಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+